ಭೂಮಿಯಿಂದ ಭಾರಿ ಸದ್ದು : ಗೋಡೆಗಳಲ್ಲಿ ಬಿರುಕು – ಆತಂಕದಲ್ಲಿ ಜನ
ಭೂಮಿಯಿಂದ ಕೇಳಿ ಬಂದ ಭಾರಿ ಸದ್ದಿಗೆ ಗ್ರಾಮಸ್ಥರು ಕಂಗಾಲಾದ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಮಲಕನದೇವರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಕಳೆದ ಒಂದು ತಿಂಗಳಿಂದ ಭೂಮಿಯಲ್ಲಿ ಶಬ್ದ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಭಯಗೊಂಡ ಜನರು ಮನೆ ತೊರೆದು ಹೋಗುತ್ತಿದ್ದಾರೆ. ಈಗ ಎರಡು ವರ್ಷಗಳ ಹಿಂದೆ ಇದೇ ರೀತಿ ಶಬ್ದದ ಬರುತ್ತಿತ್ತು. ರಾತ್ರಿಯಾದರೆ ಸಾಕು ಭೂಮಿಯಲ್ಲಿ ಗುಡುಗು ರೀತಿಯಲ್ಲಿ ಶಬ್ದ ಬರುತ್ತಿದೆ.
ಹಲವು ಮನೆಯ ಗೋಡೆಗಳು ಭಯಾನಕ ಶಬ್ದದಿಂದ ಬಿರುಕು ಬಿಟ್ಟಿವೆ. ಮನೆಗಳು ಬಿರುಕು ಬಿಟ್ಟ ಪರಿಣಾಮ, ಜೀವ ಭಯದಲ್ಲೇ ಗ್ರಾಮಸ್ಥರು ಬದುಕುತ್ತಿದ್ದಾರೆ.
ಶಬ್ಧದಿಂದಾಗಿ ಊರಿಗೆ ಬರಲು ಸಂಬಂಧಿಕರು ಹಿಂದೇಟೆ ಹಾಕುತ್ತಿರುವುದಾಗಿ ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ.