ಮಂಡ್ಯದ ಸಿ.ಆರ್.ಪಿ.ಎಫ್‌. ಯೋಧ ಮೃತ : ಇಂದು ಪಾರ್ಥಿವ ಶರೀರ ಹುಟ್ಟೂರಿಗೆ ರವಾನೆ

ಚೆನ್ನೈನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಆರ್.ಪಿ.ಎಫ್‌. ಯೋಧ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಜಾಂಡೀಸ್​ನಿಂದ ಬಳಲುತ್ತಿದ್ದ ಮಂಡ್ಯ ತಾಲೂಕು ಹನಿಯಂಬಾಡಿ ಗ್ರಾಮದ ನಿವಾಸಿ ದೇವರಾಜು (40) ಮೃತ ಯೋಧ. ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದ ದೇವರಾಜ್ ಅವರು ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಮೃತ ಯೋಧನ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲಾಗುತ್ತಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಮೃತ ಯೋಧನ ಪಾರ್ಥಿವ ಶರೀರ ಹುಟ್ಟೂರು ಹನಿಯಂಬಾಡಿ ಗ್ರಾಮವನ್ನು ತಲುಪುವ ಸಾಧ್ಯತೆ ಇದೆ.

ಚೆನ್ನೈನಲ್ಲಿ ಸಿ.ಆರ್.ಪಿ.ಎಫ್‌. 5ನೇ ಬೆಟಾಲಿಯನ್​ನಲ್ಲಿ​ ಕೆಲಸ ನಿರ್ವಹಿಸುತ್ತಿದ್ದ  ದೇವರಾಜ್, ಪತ್ನಿ ಗಾಯತ್ರಿ, ಮಕ್ಕಳಾದ ಆದರ್ಶ, ಮಂಜು ರನ್ನು ಅಗಲಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights