ಮದುವೆ ದಿನ ಋತುಸ್ರಾವವಾಗಿದ್ದನ್ನು ಪತ್ನಿ ಮುಚ್ಚಿಟ್ಟಿದ್ದಳು ಎಂದು ಆರೋಪಿಸಿ ವಿಚ್ಚೇದನ ಕೇಳಿದ ಪತಿ!
ಮದುವೆಯ ದಿನದಂದು ತನ್ನ ಪತ್ನಿ ಋತುಸ್ರಾವವಾಗಿದ್ದನ್ನು ಮುಚ್ಚಿಟ್ಟಿದ್ದಳು ಎಂದು ವ್ಯಕ್ತಿಯೊಬ್ಬ ವಿಚ್ಚೇದನ ಕೋರಿರುವ ಆಘಾತಕಾರಿ ಘಟನೆ ಗುಜರಾತ್ನ ಮಡೋದರಾದಲ್ಲಿ ನಡೆದಿದೆ.
ಮದುವೆಯ ಸಮಯದಲ್ಲಿ ತನ್ನ ಪತ್ನಿ ಮುಟ್ಟಾಗಿದ್ದಳು. ಮದುವೆ ಸಮಾರಂಭ ಪೂರ್ಣಗೊಂಡ ನಂತರ ಪ್ರಾರ್ಥನೆಗಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಕೆಲವೇ ಕ್ಷಣಗಳ ಮೊದಲು ತನ್ನ ಪತ್ನಿ ತಾನು ಮುಟ್ಟಾಗಿರುವ ಬಗ್ಗೆ ಹೇಳಿದ್ದಳು. ಈ ವಿಷಯದಲ್ಲಿ ತನ್ನ ಕುಟುಂಬದ ನಂಬಿಕೆಯನ್ನು ಉಲ್ಲಂಘಿಸಲಾಗಿದೆ. ಇದರಿಂದ ತಾನು ಮತ್ತು ತನ್ನ ತಾಯಿ ಆಘಾತಕ್ಕೊಳಗಾಗಿದ್ದೇವೆ ಎಂದು ಆ ವ್ಯಕ್ತಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಿದ್ದಾನೆ.
2020 ರ ಜನವರಿ ಕೊನೆಯ ವಾರದಲ್ಲಿ ಅವರು ವಿವಾಹವಾಗಿದ್ದರು. ಆತ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಆತನ ಪತ್ನಿ ಶಿಕ್ಷಕಿಯಾಗಿದ್ದಾರೆ. ಆಕೆ ತಮ್ಮ ಮನೆಗೆ ಎಸಿ ತರಬೇಕು. ಐಶಾರಾಮಿ ವಸ್ತುಗಳನ್ನು ತರಬೇಕು ಎಂದು ಒತ್ತಾಯಿಸುತ್ತಿದ್ದರು. ಆಕೆಯ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಆಕೆ ತನ್ನ ತವರು ಮನೆಗೆ ಹೋಗಿದ್ದರು ಎಂದು ಆತ ಆರೋಪಿಸಿದ್ದಾನೆ.
ಇದನ್ನೂ ಓದಿ: ಮಿತ್ರ ಪಕ್ಷಕ್ಕೇ ಆಪರೇಷನ್ ಮಾಡಿದ ಬಿಜೆಪಿ: JDU ಪಕ್ಷದ 06 ಶಾಸಕರು BJPಗೆ ಸೇರ್ಪಡೆ!