ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ಗೆ ವ್ಯಂಗ್ಯವಾಗಿ ನಾಲಿಗೆ ಹರಿಯಬಿಟ್ಟ ಶಾಸಕ ಅನ್ನದಾನಿ….

ಮಂಡ್ಯ ಸಂಸದೆ ವಿರುದ್ದ ಮತ್ತೆ ದಳಪತಿಗಳ ವ್ಯಂಗ್ಯವಾಡಿದ್ದಾರೆ.

ನಾನು ಏನು ಕೆಲಸ ಮಾಡ್ತಾ ಇಲ್ಲ ಬಿಳಿ ಪಂಚೆ ಶರ್ಟ್ ಹಾಕಿಕೊಂಡು ಓಡಾಡುತ್ತಿದ್ದೇನೆ.‌ ನಂಗೆ ಇದೆ ಕೆಲಸ. ಮಳವಳ್ಳಿಯಲ್ಲಿ ಡೈಲಿ ಜನರ ಕಷ್ಟ ಸುಖವನ್ನು ಸುಮಲತಾ ಅವರೇ ನೋಡ್ತಾ ಇರೋದು ಎಂದು ಸಂಸದೆ ಸುಮಲತಾ ಅಂಬರೀಶ್‌ಗೆ ಮಳವಳ್ಳಿ ಶಾಸಕ ಅನ್ನದಾನಿ ವ್ಯಂಗ್ಯವಾಗಿ ನಾಲಿಗೆ ಹರಿಯಬಿಟ್ಟಿದ್ದಾರೆ.

ಶಾಸಕರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ನನ್ನ ಮೇಲೆ ಕೆಲಸ ಇದೆ ಎಂದಿದ್ದ ಸಂಸದೆ ಸುಮಲತಾ ಅಂಬರೀಶ್ ಅವರ ವಿರುದ್ಧ ಮಂಡ್ಯ ಜಿಲ್ಲೆಯ ಮಳವಳ್ಳಿಯ ಶಾಸಕ ವ್ಯಂಗ್ಯವಾಡಿದ್ದಾರೆ.

ತಾಲೂಕ್ ಆಫೀಸ್, ಪೊಲೀಸ್ ಸ್ಟೇಷನ್ ಎಲ್ಲವನ್ನೂ ಅವರೇ ಮಾಡ್ತಾ ಇದಾರೆ. ಕೆರೆಗೆ ಪೂಜೆ ಮಾಡಿರೋದು‌ ಮೇಡಂ ಅವರೇ ಕೆರೆ ತುಂಬಿಸಿದ್ದು ಮೇಡಂ ಅವರೆ. ಮೇಡಂ ಅವರೇ ಪಿಂಚಿಣಿ ಕೊಡಿಸುತ್ತಿರೊದು, ಅವರೇ ಜಗಳಗಳನ್ನು ಕಾಂಪ್ರೂ ಮಾಡ್ತಾ ಇರೋದು. ಈ ತಾಲೂಕಿನ ಕೆಲಸವನ್ನೇಲ್ಲಾ ಅವರೆ ಮಾಡ್ತಾ ಇರೋದು.ದಯವಿಟ್ಟು ಸುಮಲತಾ ಅಬಂರೀಶ್ ಅವರು ಇನ್ನೂ ಹೆಚ್ಚಿನ ರೀತಿ ಕೆಲಸ ಮಾಡಬೇಕು. ನಮ್ಮ ಹೊರೆಯನ್ನು ಇಳಿಸಬೇಕು ಕೈ ಜೋಡಿಸಿ ಮನವಿ ಮಾಡ್ತೀನಿ.

ಈ‌ ಜಿಲ್ಲೆಯಲ್ಲಿ ನಾರಾಯಣಗೌಡರನ್ನು ಬಿಟ್ಟು ನಾವು ಈಗ 6 ಜನ ಇದ್ದೇವೆ. ನಾವು ಏನು ಕೆಲಸ ಮಾಡ್ತಾ ಇಲ್ಲ ಊಟ ಮಾಡಿಕೊಂಡು ತಿರುಗಾಡುತ್ತಾ ಇದ್ದೇವೆ ಎಂದು ಗುಡುಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights