ಮಲೆನಾಡು ಭಾಗದಲ್ಲಿ ಬಿರುಗಾಳಿಯ ಆರ್ಭಟ : ಹಾರಿ ಹೋದ ಮನೆ ಹಂಚುಗಳು
ಚಿಕ್ಕಮಗಳೂರು ಭಾಗದಲ್ಲಿ ಬಿರುಗಾಳಿಯ ಆರ್ಭಟ ಮುಂದುವರೆದಿದ್ದು, ಭಾರೀ ಬಿರುಗಾಳಿಗೆ ಮನೆಯ ಹಂಚುಗಳು ಹಾರಿ ಹೋಗಿವೆ.
ಇದರಿಂದ ಕೊಟ್ಟಿಗೆಹಾರದ ರಾಮಚಂದ್ರೇಗೌಡ, ಅತ್ತಿಗೆರೆಯ ಅಶ್ವಥ್ ಎಂಬುವರ ಮನೆಗೆ ತೀವ್ರ ಹಾನಿಯುಂಟಾಗಿದೆ. ಕೊಟ್ಟಿಗೆಹಾರ ಗ್ರಾಮ ಪಂಚಾಯಿತಿ ಕಚೇರಿಯ ಹಂಚುಗಳು ಹಾರಿಹೋಗಿವೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗ್ರಾಮಗಳು ಭಾರೀ ಗಾಳಿ ಮಳೆ ತತ್ತರಿಸಿ ಹೋಗಿವೆ.