ಮುಂದುವರಿದ ಕೃಷ್ಣಾ ನದಿ ಪ್ರವಾಹ : ಟ್ಯಾಂ ಭರ್ತಿ – ಸೇತುವೆಗಳ ಮುಳುಗಡೆ

ಮುಂದುವರಿದ ಕೃಷ್ಣಾ ನದಿ ಪ್ರವಾಹದಿಂದ ಜನರಲ್ಲಿ ಆತಂಕ ಎದುರಾಗಿದೆ.

ಮಹಾರಾಷ್ಟ್ರದಲ್ಲಿ ಭಾರಿಯಾಗುತ್ತಿರುವ ಹಿನ್ನಲೆಯಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನಾರಾಯಣಪುರದ ಬಸವಸಾಗರ ಜಲಾಶಯದಿಂದ ೧.೮೪ ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ಇದರಿಂದ‌ ಶೀಲಹಳ್ಳಿ ಸೇತುವೆ ಮುಳುಗಿದ್ದು, ಇನ್ನಷ್ಟು ನೀರು ಬಿಟ್ಟರೆ ಹೂವಿನ ಹೆಡಗಿ ಸೇತುವೆ ಮುಳುಗಲಿದೆ. ಹೂವಿನ‌ ಹೆಡಗಿ ಸೇತುವೆ ಮುಳುಗಿದರೆ ದೇವದುರ್ಗಾ ಶಹಪುರ ಮಧ್ಯೆ ರಸ್ತೆ ಸಂಚಾರ ಸ್ಥಗಿತವಾಗಲಿದೆ.

ತುಂಗಭದ್ರಾದಲ್ಲಿಯೂ ಪ್ರವಾಹ ಭೀತಿ ಮನೆ ಮಾಡಿದೆ. ಇನ್ನೂ ಮಲೆನಾಡಿನಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ  ಮುನಿರಾಬಾದ್ ಬಳಿ ಇರುವ ಟಿಬಿ‌ ಡ್ಯಾಂ‌ ಭರ್ತಿಯಾಗಿದೆ. ಟಿಬಿ‌ ಡ್ಯಾಮಿನಿಂದ‌ ಹೆಚ್ಚುವರಿ ನೀರು ನದಿಗೆ ಹರಿಸಲಾಗುತ್ತಿದೆ.

೧ ಲಕ್ಷ ಕ್ಯೂಸೆಕ್ ಅಧಿಕ ನೀರು ನದಿಗೆ ಬಿಡುವ ಸಾಧ್ಯತೆ ಇದ್ದು, ನದಿ‌ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚನೆ  ನೀಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights