ಮೂಖಪ್ರಾಣಿಗಳಿಗೂ ಕಂಟಕವಾಯ್ತಾ ಕೊರೊನಾ? : ದನ-ಕರುಗಳು ಇದ್ದಕ್ಕಿದ್ದಂತೆ ಸಾವು!

ಮೂಖಪ್ರಾಣಿಗಳಿಗೂ ಕಂಟಕವಾಗಿರುವ ಕೊರೊನಾ ಮಹಾಮಾರಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು ದಿನೇ ದಿನೇ ಇದರ ರೌದ್ರನರ್ತನ ಅಧಿಕವಾಗುತ್ತಲೇ ಇದೆ.  ಹಾಸನದಲ್ಲಿ  ಮಂಕಾಗಿರುವ ಕೋತಿಗಳ ಸುದ್ದಿ ಹೊರಬೀಳುತ್ತಿದ್ದಂತೆ ಮತ್ತೊಂದು ಅಘಾತಕಾರಿ ಸುದ್ದಿಯೊಂದು ಯಾದಗಿರಿಯ ಜನತೆಯನ್ನು ಬೆಚ್ಚಿಬೀಳಿಸಿದೆ.

ಹೌದು… ಕಿಲ್ಲರ್ ಕೊರೊನಾದಿಂದ ನಾವುಗಳು ಕೊಂಚ ದೂರವಿದ್ದೇವೆ ಎಂದು ನಿಟ್ಟುಸಿರು ಬಿಡುತ್ತಿರುವಾಗಲೇ ಗ್ರೀನ್ ಜೋನ್ ನಲ್ಲಿದ್ದ ಯಾದಗಿರಿ ಮಂದಿ ಸದ್ಯ ಆತಂಕಕ್ಕೆ ಒಳಗಾಗಿದ್ದಾರೆ.  ಜಿಲ್ಲೆಯಲ್ಲಿ ಕೆಳದ ಮೂರು ದಿನಗಳಿಂದ ದನ-ಕರುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿವೆ.

ಜಿಲ್ಲೆಯ ಯಾದಗಿರಿ ತಾಲೂಕಿನ ನಗಲಾಪುರ ಗ್ರಾಮದಲ್ಲಿ ಕಳೆದ ಮೂರು ದಿನದಲ್ಲಿ ಆರು ದನಗಳು ಸಾವನ್ನಪ್ಪಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ದನಗಳ ಸಾವಿಗೆ ಯಾವುದೇ ಕಾರಣವಿಲ್ಲ ಮತ್ತು ಅವುಗಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಮೇಯಲು ಹೊರಗಡೆ ತಿರುಗಾಡಿ ಮನೆಗೆ ಬಂದು ನೀರು ಕುಡಿದ ತಕ್ಷಣವೇ ದನಗಳು ಸಾವನ್ನಪ್ಪುತ್ತಿವೆ.

ಹೀಗೆ ದನ-ಕರುಗಳು ಸಾವನ್ನಪ್ಪುತ್ತಿದ್ದಂತೆ ಪಶು ವೈದ್ಯರು ಸ್ಥಳದಲ್ಲಿ ಬಿಡು ಬಿಟ್ಟಿದ್ದಾರೆ. ಜಾನುವಾರುಗಳು ಹೀಗೆ ಸಾವನ್ನಪ್ಪಲು ಹಲವಾರು ಕಾರಣಗಳಿವೆ. ಆದರೆ ಈ ವರ್ಷದಲ್ಲಿ ಜಾನುವಾರುಗಳಿಗೆ ಸಂಭವಿಸಿದ ಯಾವುದೇ ಮಾರಣಾಂತಿಕ ಕಾಯಿಲೆಗಳು ಪತ್ತೆಯಾಗಿಲ್ಲ. ದನಗಳು ಹೀಗೆ ದಿಢೀರ್ ಸಾವನ್ನಪ್ಪುತ್ತಿರುವುದು ಗ್ರಾಮಸ್ಥರಲ್ಲಿ ಆಂತಕ ಸೃಷ್ಟಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights