ಮೈಸೂರು ಪಾಕ್ ಅನ್ನು ಚೆನ್ನೈ ಪಾಕ್ ಅನ್ನೋಕಾಗುತ್ತಾ? : ತಮಿಳುನಾಡಿಗರ ವಿರುದ್ಧ ತಿರುಗಿ ಬಿದ್ದ ವ್ಯಾಪಾರಿ

ಮೈಸೂರು ಪಾಕ್ ಅನ್ನು ಚೆನ್ನೈ ಪಾಕ್ ಅನ್ನೋಕಾಗುತ್ತಾ? ಎಂದು ತಮಿಳುನಾಡಿಗರ ವಿರುದ್ಧ ತಿರುಗಿ ಬಿದ್ದಿದ್ದಾರೆ ಮೈಸೂರಿನ ವ್ಯಾಪಾರಿ ನಟರಾಜ್.

ಮೈಸೂರು ಪಾಕ್ ಅನ್ನು ನಮ್ಮ ಮುತ್ತಾತ ತಯಾರು ಮಾಡಿದ್ರು. ಜಯಚಾಮರಾಜೇಂದ್ರ ಒಡೆಯರ್ ಕಾಲದಲ್ಲಿ ನಮ್ಮ ಮುತ್ತಾತ ತಯಾರಿಸಿದ ಸಿಹಿ ಇದಾಗಿದೆ. ಅಂದು ಪಾಕದಿಂದ ತಯಾರಿಸಿದ್ದಕ್ಕೆ ಇದಕ್ಕೆ ಮೈಸೂರು ಪಾಕ್ ಹೆಸರು ಬಂತು.ಮೈಸೂರು ಪಾಕ್ ನಮ್ಮ ಮೈಸೂರಿನಲ್ಲಿ ಹುಟ್ಟಿದ್ದು‌.  ಆ ತಮಿಳುನಾಡಿನವರಿಗೆ ಖ್ಯಾತೆ ತೆಗೆಯೋಕೆ ಒಂದು ವಿಚಾರ ಬೇಕು. ಅದಕ್ಕಾಗಿ ಕಾವೇರಿ ವಿಚಾರವಾಗಿ ಖ್ಯಾತೆ ತೆಗಿತಾರೆ. ಅದಕ್ಕಾಗಿ ಕಾವೇರಿ ವಿಚಾರವಾಗಿ ಖ್ಯಾತೆ ತೆಗಿತಾರೆ. ಇದೀಗ ಮೈಸೂರು ಪಾಕ್ ನಮ್ಮದು ಅಂತಿದ್ದಾರೆ. ಯಾವುದು ಪ್ರಸಿದ್ಧಿ ಇರುತ್ತೋ ಅದರ ಮೇಲೆ ಖ್ಯಾತೆ ತೆಗೆಯುತ್ತಾರೆ ಎಂದು ಗುಡುಗಿದ್ದಾರೆ.

ತಮ್ಮ ಮುತ್ತಾತ ಅರಮನೆಯಲ್ಲಿದ್ದರು ಅನ್ನೋದಕ್ಕೆ ದಾಖಲೆ ಇದೆ. ಅಂದಿನ ಕೆಲ ಪೋಟೋಗಳು ಸಹ ನಮ್ಮ ಮನೆಯಲ್ಲಿವೆ. ಹೀಗಾಗಿ ಮೈಸೂರು ಪಾಕ್ ಯಾವತ್ತಿದ್ದರೂ ನಮ್ಮದೆ. ಮೈಸೂರು ಪಾಕ್ ತಯಾರಿಸಿದ ಕಾಕಸುರ ವಂಶದ ನಟರಾಜ್ ಹೇಳಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights