ಮೋದಿ ಅವರ ಪತ್ನಿಯನ್ನು ಎಲ್ಲಿ ಇಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದ ಕಿಮ್ಮನೆ ರತ್ನಾಕರ್….
ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಜಾತಿ ಕಾರಣಕ್ಕಾಗಿ ನಾವು ಭ್ರಷ್ಟರಲ್ಲ ಎಂದು ಒಕ್ಕಲಿಗ ಹಿತರಕ್ಷಣಾ ವೇದಿಕೆಯ ಪ್ರತಿಭಟನೆ ಸಭೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿಕೆ ನೀಡಿದ್ದಾರೆ.
ಬಿಜೆಪಿಯವರದ್ದು ಶ್ರೀರಾಮನ ವ್ಯಕ್ತಿತ್ವ ಎಂದು ಹೇಳಿದ್ದ ಆರಗ ಜ್ಞಾನೇಂದ್ರರ ಈ ಹೇಳಿಕೆಗೆ ತಿರುಗೇಟು ನೀಡಿದ ಕಿಮ್ಮನೆ ರತ್ನಾಕರ್. ಶ್ರೀರಾಮ ಸೀತೆಯನ್ನು ಹೇಗೆ ನೋಡಿಕೊಂಡಿದ್ದರು. ನಾವೆಲ್ಲರೂ ಶ್ರೀರಾಮ ಸೀತೆಯನ್ನು ಗೌರವದಿಂದ ನೋಡುತ್ತೇವೆ, ಪೂಜೆ ಮಾಡುತ್ತೇವೆ.
ಮೋದಿ ಅವರ ಸೀತೆಯನ್ನು ಎಲ್ಲಿ ಇಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದ ಕಿಮ್ಮನೆ, ಮೋದಿ ಅವರ ಪತ್ನಿಯನ್ನು ಎಲ್ಲಿ ಇಟ್ಟಿದ್ದಾರೆ ಎಂದು ಕಿಮ್ಮನೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆಲ್ಲಾ ಉತ್ತರ ಹೇಳಬೇಕಾಗುತ್ತೇ ಎಂದು ಆಗ್ರಹ ಮಾಡಿದರು. ಬಿಜೆಪಿಯರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ.
ವಿನಾಃ ಕಾರಣ ವಿರೋಧ ಪಕ್ಷದವರ ಮೇಲೆ ಕೇಸು ಹಾಕುತ್ತಿದ್ದಾರೆ. ಇಡಿ,ಐಟಿ,ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.