ಯಡಿಯೂರಪ್ಪರನ್ನೆ ಪ್ರಧಾನಿ ಟಾರ್ಗೆಟ್ ಮಾಡಿದ್ರೆ ಉಳಿದ ರಾಜ್ಯಗಳಿಗೆ ಹಣ ಬಿಡುಗಡೆಯಾಗಬೇಕಿತ್ತು – ಕೆ.ಎಸ್.ಈಶ್ವರಪ್ಪ
ರಾಜ್ಯ ಬೊಕ್ಕಸ ಖಾಲಿಯಾಗಿಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಕಿಡಿ ಕಾರಿದ ಈಶ್ವರಪ್ಪ ಹಾಲಿ ಮುಖ್ಯಮಂತ್ರಿಯಾರಿದ್ದಾರೆ ಅವರ ಮಾತನ್ನು ನಂಬಬೇಕು. ಮಾಜಿ ಮುಖ್ಯಮಂತ್ರಿಯ ಮಾತನಲ್ಲ ಎಂದು
ಮೈಸೂರಿನಲ್ಲಿ ರಾಜ್ಯ ಬೊಕ್ಕಸ ಖಾಲಿಯಾಗಿದೆ ಎಂಬ ಸಿಎಂ ಮಾತನ್ನ ಸಮರ್ಥಿಸಿಕೊಂಡ ಸಚಿವ ಕೆ.ಎಸ್.ಈಶ್ವರಪ್ಪ.
ರಾಜ್ಯದಲ್ಲಿ ಬರ ಪರಿಸ್ಥಿತಿ ಬಂದಗ ಅವರ ಸರ್ಕಾರ ಇದ್ದಾಗ ಒಬ್ಬ ಸಚಿವರುಗಳು ಜಿಲ್ಲೆಗಳಿಗೆ ಭೇಟಿ ನೀಡಲಿಲ್ಲ. ಪ್ರವಾಸನಾದ್ರು ಮಾಡಿ ಅಂದಿದ್ವಿ ಆದ್ರೆ ಅವರು ಅದನ್ನು ಮಾಡಲಿಲ್ಲ. ನಾವು ನೆರೆ ಸಂತ್ರಸ್ತರಿಗೆ ಸಹಾಯ ಮಾಡ್ತಾ ಇದ್ದೇವೆ.
ಆದ್ರೆ ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ. ಆದ್ರೆ ಕೆಲಸವನ್ನು ನಾವು ಮಾಡ್ತಾ ಇದ್ದೇವೆ. ಒಂದೆರಡು ದಿನದಲ್ಲಿ ಬಿಡುಗಡೆಯಾಗಲಿದೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ವಿರೋಧ ಪಕ್ಷವಾಗಿ ಕೆಲಸಮಾಡಲು ಅವರು ವಿಫಲರಾಗಿದ್ದಾರೆ. ಅವರ ವಿಫಲತೆಯನ್ನು ಮುಚ್ಚಿಕೊಳ್ಳಲು ಟೀಕೆ ಮಾಡುತ್ತಿದ್ದಾರೆ.
ಯಡಿಯೂರಪ್ಪರವರನ್ನ ಟಾರ್ಗೆಟ್ ಮಾಡಿ ಪರಿಹಾರ ಬಿಡುಗಡೆ ಮಾಡಿಲ್ಲ ಎಂಬ ಆರೋಪ ವಿಚಾರಕ್ಕೆ, ರಾಜ್ಯಕ್ಕೆ ಮಾತ್ರವಲ್ಲದೆ 12 ರಾಜ್ಯಗಳಿಗೆ ಪರಿಹಾರ ಹಣ ಬಿಡುಗಡೆಯಾಗಿಲ್ಲ. ಯಡಿಯೂರಪ್ಪರನ್ನೆ ಪ್ರಧಾನಿ ಟಾರ್ಗೆಟ್ ಮಾಡಿದ್ರೆ ಕರ್ನಾಟಕ ಬಿಟ್ಟು ಉಳಿದ ರಾಜ್ಯಗಳಿಗೆ ಹಣ ಬಿಡುಗಡೆಯಾಗಬೇಕಿತ್ತು. ಇದು ಕೇವಲ ಟೀಕೆ ಮಾಡಲು ಮಾಡುತ್ತಿರುವ ಕೆಲಸ. ರಾಜಕೀಯ ಮಾಡಲಿ, ಆದ್ರೆ ನೆರೆ ವಿಚಾರವಾಗಿ ರಾಜಕೀಯ ಮಾಡುವುದು ಸರಿಯಲ್ಲ. ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಟೀಕೆ ಮಾಡಲಿ. ನಾವು ನಮ್ಮ ವಿಫಲತೆಯನ್ನು ತಿದ್ದುಕೊಳ್ಳುತ್ತೇವೆ. ಆದ್ರೆ ಸುಮ್ನನೆ ಟೀಕೆಮಾಡುವುದು ಸರಿಯಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.