ಯಾಕಣ್ಣಾ ನೀವು ನಿಮ್ಮೂರು ಶ್ರೀಮಂತ ಹುಡುಗನನ್ನ ಕಿಡ್ನ್ಯಾಪ್ ಮಾಡಿದ್ರಿ….?

ಹಣದಾಸೆಗೆ ಬಿದ್ದ ಯುವಕರ ತಂಡವೊಂದು ತಮ್ಮದೇ ಊರಿನ ಶ್ರೀಮಂತ‌ರ ಮನೆಯ ಯುವಕನೋರ್ವನನ್ನು ಕಿಡ್ನಾಪ್ ಮಾಡಿ ಸಿಕ್ಕಿಬಿದ್ದು ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ನಾಗಮಂಗಲ ಪಟ್ಟಣದ ಪುರಸಭಾ ತಿಮ್ಮಪ್ಪ ಎಂಬುವರ ಮಗ ಮೈಸೂರಿನಲ್ಲಿದ್ದ ಮಿಥುನ್ ಎಂಬ ಯುವಕನ್ನು ನಾಗಮಂಗಲದ ಶಬರೀಶ್,ಮಹೇಶ್, ಮತ್ತು ಕೌಶಿಕ್ ಎಂಬುವರು ಸಂಚು ರೂಪಿಸಿ ಮಿಥುನ್ ಸ್ನೇಹಿತ ಅಕ್ಷಯ್ ಗೆ ಹಣದಾಸೆ ತೋರಿಸಿ ಮೈಸೂರಿನ ಹೊರ ವಲಯದಲ್ಲಿ ಪೂಜಾರಿ ಫಿಶ್ ಲ್ಯಾಂಡ್ ಹೋಟೇಲ್ ಗೆ ಕರೆಸಿಕೊಂಡು ಅಲ್ಲಿಂದ ಕಿಡ್ನಾಪ್ ಮಾಡಿದ್ದಾರೆ‌. ಬಳಿಕ ಆತನನ್ನು ಮೈಸೂರಿನ ಮನೆಯೊಂದರಲ್ಲಿ ಕೂಡಿ ಹಾಕಿ ಮಿಥನ್ ಕೈಲಿ ಫೋನ್ ಮಾಡಿಸಿ ಪೋಷಕರಿಗೆ ೩೦ ಲಕ್ಷದ ಹಣದ ಬೇಡಿಕೆ ಇಟ್ಟಿದ್ದಾರೆ.ಕಡೆಗೆ ಮಿಥನ್ ಪೋಷಕರಿಂದ ೫೦ ಲಕ್ಷವನ್ನು ನಾನು ಕೊಡಿಸ್ತಿನಿ.

ಅದ್ರಲ್ಲಿ ನನಗೆ ೨೦ ಲಕ್ಷ ವಾಪಸ್ ಕೊಡಿ ಎಂದು ಅವರೊಂದಿಗೆ ಮಾತುಕತೆ ನಡೆಸಿ ಚಾಣಾಕ್ಷ್ಯತನದಿಂದ ಮನೆಗೆ ಬಂದಿದ್ದಾನೆ. ಎರಡು ದಿನ‌ ಆದ್ರು ಹಣಬರದಿರುವುದಿಂದ ಆಕ್ರೋಶಗೊಂಡ ಅಪಹರಣಕಾರರು ಧಮಕಿ ಹಾಕಿ ಕೊಲೆಮಾಡುವ ಬೆದರಿಕೆ ಒಡ್ಡುತ್ತಿದ್ದಂತೆ ಮಿಥುನ್ ಪೋಷಕರು ನಾಗಮಂಗಲ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದು ದೂರು ಆಧರಿಸಿ ಪೊಲೀಸರು ಶಬರೀಶ್, ಕೌಶಿಕ್, ಮಹೇಶ್ ನನ್ನು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ್ದ ಕಾರು ವಶಕ್ಕೆ ಪಡೆದಿದ್ದಾರೆ . ಕೃತ್ಯಕ್ಕೆ ಸಹಕರಿಸಿದ ಕಾರ್ ಚಾಲಕ ಹಾಗೂ ಮಿಥುನ್ ಸ್ನೇಹಿತ ಅಕ್ಷಯ್ ತಲೆ ಮರೆಸಿಕೊಂಡಿದ್ದು ಇಬ್ಬರಿಗೂ ಪೊಲೀಸರು ಶೋಧ ಕಾರ್ಯ ನಡೆಸ್ತಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನದ ವಶಕ್ಕೆ ನೀಡಿದ್ದಾರೆ‌.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights