ರಕ್ಷಾಬಂಧನ: ಐಸ್ಕ್ರೀಂನಲ್ಲಿ ವಿಷ ಸೇರಿಸಿ ತಂಗಿಯನ್ನೇ ಕೊಂದ ಅಣ್ಣ!
ಭಾರತೀಯ ಸಂಸ್ಕೃತಿಯಲ್ಲಿ ರಕ್ಷಾಬಂಧನ ದಿನಕ್ಕೆ ವಿಶೇಷವಾದ ಮಹತ್ವ, ತನ್ನ ಸಹೋತರ ಸುರಕ್ಷಿತವಾಗಿರಲಿ ಎಂದು ಸಹೋದರಿ ರಾಖಿ ಕಟ್ಟಿ, ಹಾರೈಸುವ ದಿನವದು. ಅಲ್ಲದೆ, ಎಂಥಹ ಸಂದರ್ಭದಲ್ಲೂ ತನ್ನ ಸಹೋದರ ತನ್ನ ರಕ್ಷಣೆಗೆ ಇರುತ್ತಾನೆಂಬ ಭರವಸೆಯ ಜೊತೆಗೂ ಆ ದಿನವನ್ನು ಆಚರಿಸಲಾಗುತ್ತದೆ. ಆದರೆ, ಅದೇ ದಿನ ಮನುಷ್ಯತ್ವವೇ ಇಲ್ಲದ ಅಣ್ಣನೊಬ್ಬ ತನ್ನ ತಂಗಿಯನ್ನೇ ಕೊಂಡಿದ್ದಾನೆ.
ಅಣ್ಣನೇ ಐಸ್ಕ್ರೀಂನಲ್ಲಿ ವಿಷ ಬೆರೆಸಿ ತನ್ನ ತಂಗಿಗೆ ತಿನ್ನಿಸಿ ಸಾಯಿಸಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಅಣ್ಣ ಪ್ರೀತಿಯಿಂದ ಐಸ್ಕ್ರೀಂ ತಂದುಕೊಟ್ಟಿದ್ದಾನೆ ಎಂದು ಖುಷಿಯಿಂದ ತಿಂದ ಮುಗ್ಧ ತಂಗಿ ಸಾವನ್ನಪ್ಪಿದ್ದಾಳೆ.
ಆತ ಒಂಟಿಯಾಗಿ ಬದುಕಲು ಬಯಸಿದ್ದ. ಅದಕ್ಕಾಗಿ ತನ್ನ ಕುಟುಂಬವನ್ನು ದೂರ ಮಾಡಿಕೊಳ್ಳಲು ಯೋಚಿಸಿದ್ದ ಆತ ಮನೆಯವರನ್ನು ಕೊಲ್ಲಲು ನಿರ್ಧರಿಸಿದ್ದ. ಹಾಗಾಗಿ, ಐಸ್ಕ್ರೀಂನಲ್ಲಿ ವಿಷ ಬೆರೆಸಿ ಅದನ್ನು ತನ್ನ ತಂಗಿ ಹಾಗೂ ತಂದೆ-ತಾಯಿಗೆ ತಿನ್ನಿಸಿದ್ದಾನೆ ಎಂದು ಆತನನ್ನು ಬಂಧಿಸಿರುವ ಕಾಸರಗೋಡು ಪೊಲೀಸರು ತಿಳಿಸಿದ್ದಾರೆ.
16 ವರ್ಷದ ತನ್ನ ತಂಗಿ ಆನ್ ಮೇರಿಯನ್ನು ಆಗಸ್ಟ್ 4 ರಂದು ಆರೋಪಿ ಆಲ್ಬಿನ್ ಕೊಲೆ ಮಾಡಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಆರೋಪಿ ಆಲ್ಬಿನ್ ಐಸ್ಕ್ರೀಂನಲ್ಲಿ ವಿಷ ಬೆರೆಸಿ ತನ್ನ ತಂಗಿಯ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅವರ ತಂದೆ-ತಾಯಿಗೂ ವಿಷದ ಐಎಸ್ಕ್ರೀಂ ತಿನ್ನಿಸಿದ್ದು, ತಂದೆ ಬೆನ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಂದೆ ಬೆನ್ನಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಡಿಜಿ ಹಳ್ಳಿ ದೇವಾಲಯ ರಕ್ಷಸಿದ ಮುಸ್ಲೀಂ ಯುವಕರು: ಯಾರು ಅವರು? ಅವರು ಹೇಳಿದ್ದೇನು?