ರಾಜ್ಯದಲ್ಲಿಂದು ಹೊಸದಾಗಿ 63 ಕೊರೊನಾ ಕೇಸ್ : 1458 ಕ್ಕೇರಿದ ಸೋಂಕಿತರ ಸಂಖ್ಯೆ!

ಕರುನಾಡಿಗೆ ಇಂದು ಮುಂಬೈ ಕಂಟಕ ಶುರುವಾಗಿದ್ದು ರಾಜ್ಯದಲ್ಲಿಂದು ಹೊಸದಾಗಿ 63 ಕೊರೊನಾ ಕೇಸ್ ದಾಖಲಾಗಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1458 ಕ್ಕೇರಿಕೆಯಾಗಿದೆ.

ಹೌದು…. ದಿನ ಕಳೆದಂತೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ನಿನ್ನೆ ಬೆಳಿಗಿನ ವರದಿಯಲ್ಲೇ ನೂರಕ್ಕೂ ಅಧಿಕ ಜನಕ್ಕೆ ಕೊರೊನಾ ಪಾಸಿಟಿವ್ ಆಗಿತ್ತು. ಇದಕ್ಕೆ ಮೂಲ ಮುಂಬೈನಿಂದ ಬಂದವರೇ ಆಗಿದ್ದು, ಮುಂಬೈನಿಂದ ಬಂದವರಲ್ಲಿ ಹೆಚ್ಚು ಸೋಂಕಿತರು ಕಂಡುಬಂದಿದ್ದಾರೆ. ನಿನ್ನೆ ಸಂಜೆ ವೇಳೆ ಸೋಂಕಿತರ ಸಂಖ್ಯೆ 149ರಷ್ಟು ದಾಖಲಾಗಿತ್ತು. ಇಂದು ಬೆಳಗಿನ ವರದಿಯಲ್ಲಿ ಹೊಸದಾಗಿ 63 ಸೋಂಕಿತರು ದಾಖಲಾಗಿದ್ದಾರೆ. ಸಂಝೆ ವೇಳೆ ಈ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ.

ಇಂದು ದಾಖಲಾದ 63 ಪ್ರಕರಣಗಳಲ್ಲಿ ಬೀದರ್ 10, ಬೆಂಗಳೂರು 4,  ಹಾಸನ 21, ಮಂಡ್ಯ 8, ದಕ್ಷಣ ಕನ್ನಡ 1, ಉಡುಪಿ 6,  ತುಮಕೂರು 4, ಯಾದಗಿರಿ, ಉತ್ತರ ಕನ್ನಡ ತಲಾ ಒಂದು, ಕಲಬುರಗಿ 7 ಜನ ಸೋಂಕಿತರಿದ್ದಾರೆ. ರಾಜ್ಯದಲ್ಲಿ ಒಟ್ಟು 1458 ಸೋಂಕಿತರು ದಾಖಲಾಗಿದ್ದು ಇವರಲ್ಲಿ 553 ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 41 ಜನ ಸಾವನ್ನಪ್ಪಿದ್ದಾರೆಂದು ಆರೋಗ್ಯ ಇಲಾಖೆ ಹೇಳಿದೆ.

ಇಂದು ರಾಜ್ಯದಲ್ಲಿ ದಾಖಲಾದ 63 ಕೊರೊನಾ ಪ್ರಕರಣಗಳ ಪೈಕಿ ಹೆಚ್ಚು ಜನ  ಬೇರೆ ರಾಜ್ಯದಿಂದ ಬಂದವರಾಗಿದ್ದಾರೆ. ಜೊತೆಗೆ ಉಡಪಿಯಲ್ಲೂ ಮಹಾರಾಷ್ಟ್ರದಿಂದ ಬಂದವರಿಗೇ ಕೊರೊನಾ ಪಾಸಿಟಿವ್ ದಾಖಲಾಗಿದೆ. ಇದರಿಂದ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ನಿಂದ ಬರುವ ಎಲ್ಲಾ ಸಾರಿಗೆ ಬಂದ್ ಮಾಡಲಾಗಿದೆ. ಯಾವ ಪ್ರಯಾಣಿಕರು ರಾಜ್ಯಗಳಿಗೆ ಬರುವಂತಿಲ್ಲ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights