ವಿಧಾನ ಮಂಡಲ ಅಧಿವೇಶನ ಕವರೇಜ್ ಗೆ ವಿದ್ಯುನ್ಮಾನ ಮಾಧ್ಯಮಗಳಿಗೆ ನಿಷೇಧ…!
ವಿಧಾನ ಮಂಡಲ ಅಧಿವೇಶನ ಕವರೇಜ್ ಗೆ ವಿದ್ಯುನ್ಮಾನ ಮಾಧ್ಯಮಗಳ ನಿಷೇಧ ಮಾಡಲಾಗಿದ್ದು ಸಾಕಷ್ಟು ಪ್ರಶ್ನೆಯನ್ನ ಸೃಷ್ಟಿ ಮಾಡಿದೆ.
ಈ ಬಗ್ಗೆ ಪ್ರಶ್ನಿಸಿಸಿದ್ದಕ್ಕೆ ವಿಜಯಪುರದಲ್ಲಿ ವಿಜಯಪುರ ಮಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ, ಈ ವಿಷಯದ ಬಗ್ಗೆ ನನಗೆ ಅಧಿಕೃತ ಯಾವುದೇ ಮಾಹಿತಿ ಇಲ್ಲ.
ಈ ನಿರ್ಧಾರದ ಬಗ್ಗೆ ನಾಳೆ ಸ್ಪೀಕರ್ ಭೇಟಿ ಮಾಡಿ ಪ್ರಶ್ನಿಸುತ್ತೇನೆ. ಮಾಧ್ಯಮಗಳಿಗೆ ಪ್ರಸಾರದ ಸ್ವಾತಂತ್ರ್ಯವಿದೆ. ಶಾಸಕರು ವಿಧಾನ ಮಂಡಲದಲ್ಲಿ ವರ್ತಿಸುವ ಬಗ್ಗೆ ಸಾರ್ವಜನಿಕರಿಗೂ ಗೊತ್ತಾಗಬೇಕು. ಅಧ್ಯಕ್ಷರಲ್ಲೊ ಮನವಿ ಮಾಡುತ್ತೇನೆ. ಮಾಧ್ಯಮಗಳಿಂದ ಅಲ್ಲಿ ನಡೆಯುವ ಕಲಾಪಗಳು, ನಮ್ಮ ವರ್ತನೆ ಬಗ್ಗೆ ಗೊತ್ತಾಗುತ್ತದೆ. ಸದಸನ ಕಾರ್ಯ ಕಲಾಪಗಳು ಪಾರದರ್ಶಕವಾಗಿ ನಡೆಯುವುದನ್ನು ಜನ ನೋಡಬೇಕು.
ನಾವು ಹೇಗೆ ವರ್ತಿಸುತ್ತೇವೆ, ಜಾತ್ರೆಯ ರೀತಿಯಲ್ಲಿ ಪಡೆದುಕೊಳ್ಳುತ್ತೇವಾ ಎಂಬುದನ್ಮು ಜನ ತಿಳಿದುಕೊಳ್ಳಲು, ನಾವು ನಡತೆ ಸುಧಾರಿಸಿಕೊಳ್ಳಲು ಇದರಿಂದ ಅನುಕೂಲವಾಗಲಿದೆ ಎಂದು ವಿಜಯಪುರದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಹೇಳಿದ್ದಾರೆ.