ಶಬರಿಮಲೆ ಪ್ರವೇಶಿಸಲು ಹೋದ ಮಹಿಳೆಯರ ಮೇಲೆ ಪೆಪ್ಪರ್ ಸ್ಪ್ರೇ ದಾಳಿ…!

ಶಬರಿಮಲೆ ಪ್ರವೇಶಿಸಲು ಹೋದ ಮಹಿಳೆಯರ ಮೇಲೆ ಪೆಪ್ಪರ್ ಸ್ಪ್ರೇ ದಾಳಿ ಮಾಡಲಾಗಿದೆ.

ಅಯ್ಯಪ್ಪ ಭಕ್ತರಿಂದ ಪೆಪ್ಪರ ಸ್ಪ್ರೇ ದಾಳಿ ಮಾಡಿದ ಘಟನೆ ಕೇರಳದ ಏರ್ನಾಕುಲಂನಲ್ಲಿ ನಡೆದಿದೆ. ಇಂದು ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರ ತಂಡದ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಪ್ರಯತ್ನಿಸಿದ ಬೆನ್ನಲ್ಲೇ ಮಹಿಳೆಯರ ಮೇಲೆ ಅಯ್ಯಪ್ಪನ ಭಕ್ತರೇ ದಾಳಿ ನಡೆಸಿದ್ದಾರೆ.

ಭಕ್ತನೊಬ್ಬ ಮಹಿಳೆಯ ಮೇಲೆ ಪೆಪ್ಪರ ಸ್ಪ್ರೇ ಮಾಡಿದ ದೃಶ್ಯ ವೈರಲ್ ಆಗಿದೆ. ಜೊತೆಗೆ ಮೆಣಸಿನಕಾಯಿ ಪುಡಿ ಕೂಡ ಮಹಿಳೆಯರ ಮೇಲೆ ಎರಚಲಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ದೂರು ಕೂಡ ನೀಡಲಾಗಿದೆ. ಈ ಎಲ್ಲಾ ಬೆಳವಣಿಗಳನ್ನ ನೋಡುತ್ತಿದ್ದರೆ ಪೊಲೀಸರು ರಕ್ಷಣೆ ಕೊಡದೇ ಇದ್ದರೆ ಮಹಿಳೆಯರು ದೇವಾಲಯ ಪ್ರವೇಶ ಮಾಡಿ ದೇವರ ದರ್ಶನ ಪಡೆಯುವುದು ಕಷ್ಟವಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights