ಶಾಸಕರ ನಕಲಿ ಸಹಿ ಮಾಡಿ ವರ್ಗವಣೆ ಮಾಡಿಸಿಕೊಂಡ ಆಧಿಕಾರಿ…!

ಶಾಸಕರ ನಕಲಿ ಸಹಿ ಮಾಡಿ ಆಧಿಕಾರಿಯೊಬ್ಬ ವರ್ಗವಣೆ ಮಾಡಿಸಿಕೊಂಡ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಹೌದು… ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಚಂದ್ರಕಾಂತ್ ನಕಲಿ ಸಹಿ ಮಾಡಿಕೊಂಡಿರುವ ಅಧಿಕಾರಿ. ಚಂದ್ರಕಾಂತ್ ಯಲಹಂಕ ಶಾಸಕ ಎಸ್.ಆರ್ ವಿಶ್ವಾನಾಥ್ ರವರ ನಕಲಿ ಲೆಟರೆಡ್ ಹಾಗೂ ನಕಲಿ ಸಹಿ ಮಾಡಿದ್ದಾರೆ. ಜೊತೆಗೆ ಶಾಸಕರ ಲೇಟೆರೆಡ್ ಹಾಗೂ ಸಹಿಯಿದೆ ಎಂದು ವರ್ಗವಣೆ ಆದೇಶಕ್ಕೆ ಮುಖ್ಯಮಂತ್ರಿ ಬಿ.ಎಸ್.ವೈ ಕೂಡ ಸಹಿ ಮಾಡಿದ್ದಾರೆ.

ಸದ್ಯ ಅಧಿಕಾರಿ ಚಂದ್ರಕಾಂತ್ ವಿರುದ್ದ ಶಾಸಕ ಎಸ್.ಆರ್.ವಿಶ್ವಾನಾಥ್ ದೂರು ನೀಡಿದ್ದಾರೆ. ಎಂ.ಎಸ್.ಬಿಲ್ಥಿಂಗ್ ಪೋಲಿಸ್ ಠಾಣೆಗೆ ದೂರು ಸಲ್ಲಿಸಲಾಗಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights