ಶಿಕ್ಷಕರು ಬೈದಿದ್ದಕ್ಕೆ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ : ಪೋಷಕರ ಆಕ್ರೋಶ
ಶಿಕ್ಷಕರು ಬೈದಿದ್ದಕ್ಕೆ ಮನನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ದೊಮ್ಮಲೂರು ಲೇಔಟ್ ನಲ್ಲಿ ನಡೆದಿದೆ.
ವೇಣುಗೋಪಾಲ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈ ವಿದ್ಯಾರ್ಥಿ ಶಾಲೆಯ ಸಹಪಾಠಿಯಲ್ಲಿ ಗಲಾಟೆ ಮಾಡಿಕೊಂಡ ವೇಣುಗೋಪಾಲ್ ಸಹಪಾಟಿಗೆ ಚಾಕು ತೋರಿಸಿದ್ದ ಎಂದು ಶಿಕ್ಷಕರು ಬೈದಿದ್ದಾರೆ. ಈ ವೇಳೆ ಪೋಷಕರನ್ನು ಕರೆದುಕೊಂಡು ಬರಲು ಕೂಡ ಶಿಕ್ಷಕರು ವೇಣುಗೋಪಾಲ್ಗೆ ಸೂಚಿಸಿದ್ದರು. ಇದರಿಂದ ಮನನೊಂದ ವೇಣುಗೋಪಾಲ್ ಮನೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದರಿಂದ ಆಕ್ರೋಶಗೊಂಡ ವೇಣುಗೋಪಾಲ್ ಪೋಷಕರು ಶಾಲೆ ಬಳಿ ಶವವನ್ನಿಟ್ಟು ಆಡಳಿತ ಮಂಡಳಿ ವಿರುದ್ಧ ದಿಕ್ಕಾರ ಕೂಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ದೊಮ್ಮಲೂರು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಬಳಿಕ ವಿದ್ಯಾರ್ಥಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.