ಶೀಘ್ರವೇ ಕೊರೊನಾ ಮುಕ್ತವಾಗಲಿದೆ ಬಳ್ಳಾರಿ ಜಿಲ್ಲೆ: ಆನಂದ್‌ ಸಿಂಗ್‌

ಬಳ್ಳಾರಿ ಜಿಲ್ಲೆ ಅತಿ ಶೀಘ್ರದಲ್ಲೇ ಕೊರೊನಾ ಮುಕ್ತ ಜಿಲ್ಲೆಯಾಗಲಿದೆ. ಈ ಭರವಸೆಯಲ್ಲಿ ನಾವಿದ್ದೇವೆ. ಸದ್ಯದಲ್ಲೇ ಸಿಹಿ ಸುದ್ದಿ ಸಿಗಲಿದೆ ಎಂದು ಸಚಿವ ಆನಂದ್‌ಸಿಂಗ್‌ ತಿಳಿಸಿದ್ದಾರೆ.

ಬಳ್ಳಾರಿ ಕೊರೋನಾ ಮುಕ್ತ ಜಿಲ್ಲೆಯಾಗೋದು ಸದ್ಯದ ಸಿಹಿ ಸುದ್ದಿ. ಬಹಳ ಹತ್ರದ ದಿನದಲ್ಲಿ ಇದ್ದೇವೆ, ಕೊರೊನಾ ಕುರಿತು ಸರ್ವಪಕ್ಷಗಳ ಸಭೆ ಮತ್ತು ಚರ್ಚೆ ನಡೆಸಲಾಯಿತು- ಬೇರೆ, ಬೇರೆ ಪಕ್ಷದ ಮುಖಂಡರು ಸಲಹೆ ಕೊಟ್ಟಿದ್ದಾರೆ. ಕೆಲವೇ ದಿನಗಳಲ್ಲಿ ಜಿಲ್ಲಾಡಳಿತ ಸಿಹಿ ಸುದ್ದಿ ನೀಡಲಿದೆ ಎಂದರು.

ಎಲ್ಲಾ ರಂಗದ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ, ಅದರಲ್ಲೂ ಪೊಲೀಸರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಅಭಿನಂದನಾರ್ಹರು ಎಂದು ಸಚಿವರು ತಿಳಿಸಿದರು.

ಕೊರೊನಾ ವಾರಿಯರ್ಸ್ ಗೆ ಸಭೆ ಮೂಲಕ, ಶುಭಾಶಯಗಳ ಮೂಲಕ ಅಭಿನಂದನೆ ಹೇಳೋದಲ್ಲಾ. ಅವರಿಗೆ ಏನಾದರೂ ಸಹಾಯ ಮಾಡಬೇಕು ಎಂದು ಹಲವು ಜನರು ಸಲಹೆ ಕೊಟ್ಟಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಈಗ ಸರಿ ಇಲ್ಲ, ಹದಗೆಟ್ಟಿದೆ. ನಾನು ಎರಡನೇ ಸಭೆ ಮಾಡಿದ್ದೇನೆ. ರೈತ, ಕೂಲಿ ಕಾರ್ಮಿಕರಿಗೆ ನಮ್ಮ ಸರಕಾರ ಸ್ಪಂದಿಸಿದೆ. ಈ ಸಂಬಂಧ ಇನ್ನೂ ಸಭೆ ಕೂಡ ಮಾಡಬೇಕಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿಎಂಎಫ್ ಫಂಡ್ ನಿಂದ ಕೊರೊನಾಗೆ 30% ಬಳಸಬಹುದೆಂದು ಹೇಳಲಾಗುತ್ತಿದೆ. ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ಆನಂದ್‌ ಸಿಂಗ್ ತಿಳಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights