ಸಂಸದ ಪ್ರತಾಪ್ ಸಿಂಹ ವಿರುದ್ದ ದಲಿತ ಮುಖಂಡರ ಆಕ್ರೋಶ…..
ಮಹಿಷಾ ದಸರಾ ಆಚರಣೆಗೆ ಮೈಸೂರಿನಲ್ಲಿ ಅಡ್ಡಿ ಪಡಿಸಿದ ಸಂಸದ ಪ್ರತಾಪ್ ಸಿಂಹ ನಡೆ ಖಂಡಿಸಿ ವಿವಿಧ ದಲಿತ ಮುಖಂಡರು ಹಾಸನ ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಪ್ರತಿಮೆ ಮುಂದೆ ಮಹಿಷಾಸುರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸುವ ಮೂಲಕ ಮಹಿಷ ದಸರಾ ಆಚರಣೆ ಮಾಡಿದರು.
ಕಾರ್ಯಕ್ರಮಕ್ಕೆಚಾಲನೆ ನೀಡಿ ಮಾತನಾಡಿದ ಅಂತರಾಷ್ಟ್ರೀಯ ಕಲಾವಿದ ಕೆ.ಟಿ.ಶಿವಪ್ರಸಾದ್ ಮಾತನಾಡಿ ಸಂಸದ ಪ್ರತಾಪ್ ಸಿಂಹ ಅವರಿಗೆ ಇತಿಹಾಸದ ಬಗ್ಗೆ ಅರಿವಿಲ್ಲ. ಹಾಗಾಗಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ.ಚಾಮುಂಡೇಶ್ವರಿ ಕೇವಲ ಕಾಲ್ಪನಿಕ ದೇವರು ಆದರೆ ಮಹಿಷಿ ಬೌದ್ಧ ಬಿಕ್ಕುವಾಗಿದ್ದು, ಇವರು ಮೂಲನಿವಾಸಿಗಳಾಗಿದ್ದಾರೆ. ಇವರನ್ನು ನಾವು ಗೌರಚಿಸುತ್ತೆವೆ ಹಾಗೂ ಕಾಲ್ಪಾನಿಕ ದೇವರನ್ನು ಹೊರಗಿಡುತ್ತೇವೆ ಎಂದರು.
ಮಹಿಷಾ ದಸರಾ ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದ ಪೊಲೀಸರಿಗೆ ಸಂಸದ ಅವ್ಯಚ್ಯಾಶಬ್ದಗಳಿಂದ ನಿಂಧಿಸಿರುವುದು ಖಂಡನೀಯ ಎಂದ ಅವರು,ಪೊಲೀಸರಿಗೆ ಶೆಂಡ ಪದ ಬಳಸಿ ನಿಂಧಿಸಿರುವ ಸಂಸದ ಪ್ರತಾಪ್ ಸಿಂಹನೇ ಅವನೇ ಒಬ್ಬ ಶೆಂಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸುವರ್ಣ ಶಿವಪ್ರಸಾದ್ ,ಆರ್ ಪಿಐ ಸತೀಶ್ , ಮರಿಜೊಸೇಪ್, ವಿನೋದ್ ರಾಜ್ ,ಮಧು, ಹೇಮಂತ್, ಮುಬಷೀರ್ ಪಾಷ, ಕೆ. ಪ್ರಕಾಶ್ ಇನ್ನಿತರರು ಇದ್ದರು.