ಸಮ್ಮಿಶ್ರ ಸರ್ಕಾರ ಬೀಳಿಸುವ ಷಡ್ಯಂತ್ರದ ಬಗ್ಗೆ ಹೇಳಿದವರೇ ಬೇಗ್ : ಪಕ್ಷಕ್ಕೆ ಬಂದರೆ ಸ್ವಾಗತ – ಹೆಚ್.ಡಿ ರೇವಣ್ಣ

ಹಾಸನದ ಹೊಳೆನರಸೀಪುರದಲ್ಲಿ ಮಾಜಿ ಸಚಿವ ಎಚ್.ಡಿ‌.ರೇವಣ್ಣ ರೋಷನ್ ಬೇಗ್ ಬಗ್ಗೆ ಗುಣಗಾನ ಮಾಡಿ ಅನುಕಂಪದ ಮಾತನಾಡಿದ್ದಾರೆ.

ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ರೋಷನ್ ಬೇಗ್ ಬಗ್ಗೆ ನನಗೆ ಅಪಾರ ಗೌರವವಿದೆ. ಹೆಚ್,ಡಿ,ದೇವೇಗೌಡರು ಸಿಎಂ ಆಗಿದ್ದಾಗ ನಮ್ಮ ಜೊತೆಯಲ್ಲೇ ಇದ್ದರು. ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್ ಗೆ ಹೋಗಿದ್ದರು. ಬಡವರ ಬಗ್ಗೆ ಅವರಿಗೆ ಕಾಳಜಿ ಇದೆ ಕಾಂಗ್ರೆಸ್ ನವರು ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ.

ಅವರು ಉಪಚುನಾವಣೆಗೆ ನಿಂತು ಗೆದ್ದರೆ ಸಂತೋಷ ಎಂದು  ರೋಷನ್ ಬೇಗ್ ಬಗ್ಗೆ ಹೆಚ್,ಡಿ,ರೇವಣ್ಣ ಅನುಕಂಪ ತೊರಿಸಿದ್ದಾರೆ. ಅವರು ಜೆಡಿಎಸ್ ಬಿಟ್ಟು ಹೋದ ಮೇಲೆ ಗೌಡರು, ಕುಮಾರಸ್ವಾಮಿ ವಿರುದ್ಧ ಮಾತನಾಡಿಲ್ಲ. ಬೇಗ್ ಜೆಡಿಎಸ್ ಗೆ ಬಂದರೆ ಸ್ವಾಗತ ನನ್ನ ಭೇಟಿಗೆ ಬಂದರೆ ಮಾತನಾಡುವೆ ಎಂದು ರೇವಣ್ಣ ಮಾಜಿ‌ಸಚಿವ ರೋಷನ್ ಬೇಗ್ ಗುಣಗಾನ ಮಾಡಿದ್ದಾರೆ.

ಸಮ್ಮಿಶ್ರ ಸರ್ಕಾರ ಬೀಳಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದವರೇ ಬೇಗ್. ಪ್ರಾಮಾಣಿಕವಾಗಿ ನಮ್ಮ ಮನೆಗೆ ಬಂದು ಹೇಳಿದರು ಎಂಬ ವಿಷಯವನ್ನು ರೇವಣ್ಣ ಬಹಿರಂಗಪಡಿಸಿದರು. ಕುಮಾರಸ್ವಾಮಿಗೆ ಯಾರು ಟೋಪಿ, ಚಾಕು ಹಾಕಿ ಹೋಗಿದ್ದಾರೋ ಅವರಿಗೆ ದೇವರೇ ಶಿಕ್ಷೆ‌ಕೊಡುವ ಕಾಲ ಬರಲಿದೆ.

ದೇವೇಗೌಡರು, ಕುಮಾರಸ್ವಾಮಿಯಿಂದ ಬೆಳೆದವರೇ ತೊಂದರೆ‌ ನೀಡಿದ್ದಾರೆ. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರಿಗೆ ಬೆಂಬಲ ನೀಡಿದ್ರೆ ತಪ್ಪಿಲ್ಲ. ಬಿಜೆಪಿಗೆ ಸಿದ್ಧಾಂತ ಏನಿದೆ..? ಉಪಚುನಾವಣೆಯಲ್ಲಿ ಜನ ಪಾಠ ಕಲಿಸಲಿದ್ದಾರೆ ಕಾರವಾಗಿ ನುಡಿದಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights