ಸರ್ಕಾರದ ಮನೆ ತೆಗೆದುಕೊಂಡಿರದೆ ರೂಂ ಮಾಡಿದ್ದೆ, ನಿಮ್ಮ ಥರ ರಾಸಲೀಲೆಗಲ್ಲ – ಹೆಚ್ ಡಿಕೆ
ಸರ್ಕಾರದ ಮನೆ ತೆಗೆದುಕೊಂಡಿರದ ಕಾರಣ ಹೋಟೆಲ್ನಲ್ಲಿ ರೂಂ ಮಾಡಿಕೊಂಡಿದ್ದೆ. ನಿಮ್ಮ ಥರ ರಾಸಲೀಲೆಗಲ್ಲ ಎಂದು ಅನರ್ಹ ಶಾಸಕ ಹೆಚ್.ವಿಶ್ವನಾಥ್ ವಿರುದ್ದ ಮಾಜಿ ಸಿಎಂ ಹೆಚ್ಡಿಕೆ ಗರಂ ಆಗಿದ್ದಾರೆ.
ಹುಣಸೂರು ಅಖಾಡದಲ್ಲಿ ವಿಶ್ವನಾಥ್ ವಿರುದ್ದ ಹೆಚ್ಡಿಕೆ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ. ಈ ಹೆಚ್.ವಿಶ್ವನಾಥ್ ಎಷ್ಟು ದಿನ ನನ್ನ ಮನೆಗೆ ಬಂದು ತಿಂಡಿ ತಿಂದಿಲ್ಲ. ಅವತ್ತು ನನ್ನ ಮನೆಗೆ ಬಂದಿದ್ದಲ್ಲಪ್ಲ ಕ್ಷೇತ್ರದ ಕೆಲಸ ಮಾಡಿಕೊಡಿ ಅಂತ ಕೇಳಿದ್ರಾ?. ನನ್ನ ಮನೆಗೆ ಬಂದಿದ್ದು KSRTC ಬಸ್ ಸ್ಕ್ರ್ಯಾಪ್ ಟೆಂಡರ್ ಕೊಡಿಸಿ ಅಂತ ಕೇಳೊಕೆ. ಅದರಲ್ಲಿ ಬರೋ ಕಮಿಷನ್ಗಾಗಿ ನನ್ನ ಮನೆ ಬಳಿ ಬಂದಿದ್ರು. KSRTC ಎಂಡಿಗೆ ಕರೆ ಮಾಡಿ ಅಂತ ನನ್ನ ಮನೆಗೆ ಬಾಗಿಲಿಗೆ ಬಂದಿರಲಿಲ್ವಾ ಕೇಳಿ? ಎಂದು ವಿಶ್ವನಾಥ್ಗೆ ಹೆಚ್ಡಿಕೆ ಪ್ರಶ್ನೆ ಹಾಕಿದರು.
ನನ್ನ ಬಗ್ಗೆ ಲಘುವಾಗಿ ಮಾತನಾಡೋಕು ಮುನ್ನ ಎಚ್ಚರಿಕೆ. ಬೇರೆಯವರ ಬಳಿ ಆಟವಾಡಿದ ಹಾಗೇ ನನ್ನ ಬಳಿ ಆಡಬೇಡ. ಹುಣಸೂರು ಜಿಲ್ಲೆ ವಿಚಾರ ನನ್ನ ಬಳಿ ಪ್ರಸ್ತಾಪವೇ ಮಾಡಿಲ್ಲ. ಅವರು ನನ್ನ ಭೇಟಿ ಮಾಡೋದಿರಲಿ ನಾನೇ ಅವರನ್ನ ಜಯದೇವ ಆಸ್ಪತ್ರೆಗೆ ಹೋಗಿ ಭೇಟಿ ಮಾಡಿದ್ದೇನೆ. ಚಂಗಿಬಿಂಗಿ ವ್ಯವಹಾರದ ಮೂಲಕ ರಾಜಕಾರಣ ಮಾಡಿದ್ದೀಯಾ. ಅದಕ್ಕೆಲ್ಲ ಹುಣಸೂರು ಜನ ಅಂತಿಮ ಹಾಡ್ತಾರೆ ಎಂದು ಹಳ್ಳಿಹಕ್ಕಿಗೆ ಕುಟುಕಿದರು.
ಜಿ.ಟಿ.ದೇವೇಗೌಡರನ್ನ ನನ್ನ ಅಣ್ಣನ ಮಗ ಪ್ರಜ್ವಲ್ ಸಹ ಭೇಟಿ ಮಾಡಿದ್ದಾರೆ. ಅವರ ಜೊತೆ ಮಾತನಾಡಿ ಹುಣಸೂರಿನಲ್ಲಿ ಸಹಕಾರ ಕೊಡಿ ಎಂದಿದ್ದಾರೆ. ನಿರ್ಧಾರ ಕೈಗೊಳ್ಳೋದು ಜಿಟಿಡಿಯವರುಗೆ ಬಿಟ್ಟಿದ್ದು ಎಂದರು.
ನಾನು ಹಿತ್ತಾಳೆ ಕಿವಿಯೋನಲ್ಲ. ವಿಶ್ವನಾಥ್ ಥರ ತೇವಲಿಗೆ ಮಾತನಾಡೋಲ್ಲ. ನಾನೇನಾದ್ರು ಅವರ ಸಮುದಾಯ ಇಟ್ಕೊಂಡು ಮಾತನಾಡಿದ್ರೆ ನನ್ನ ಬಾಯಿಗೆ ಹುಳ ಬಿಳಲಿ.
ವಿಶ್ವನಾಥ್ ವಿರುದ್ದ ಹೆಚ್ಡಿಕೆ ವಾಗ್ದಾಳಿ ನಡೆಸಿದರು. ಸಾ.ರಾ.ಮಹೇಶ್ ವಿಶ್ವನಾಥ್ ಅವರ ವಿಚಾರ ನನಗೆ ಗೊತ್ತಿಲ್ಲ. ಸಾ.ರಾ.ಮಹೇಶ್ ವಿಶ್ವನಾಥ್ ವಿಚಾರವನ್ನಾಗಲಿ ಬೇರೆ ಶಾಸಕರ ವಿಚಾರವನ್ನಾಗಿ ಮಾತನಾಡಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಉಪಚುನಾವಣೆ ಫಲಿತಾಂಶದ ನಂತರ ರಾಜಕೀಯ ಬದಲಾವಣೆ ಜೊತೆ ಶುದ್ಧೀಕರಣ ಆಗಲಿದೆ. ಫಲಿತಾಂಶದ ನಂತರ ಕಲುಷಿತ ರಾಜಕಾರಣ ಶುದ್ದೀಕರಣ ಆಗಲಿದೆ.
ಮಹಾರಾಷ್ಟ್ರ ಬೆಳವಣಿಗೆ ಯಾರು ಊಹೆ ಮಾಡಿರಲಿಲ್ಲ. ಹಲವು ಬದಲಾವಣೆ ಆಗುವ ಬೆಳವಣಿಗೆ ರಾಜಕೀಯದಲ್ಲಿ ಆಗ್ತಿದೆ. ಸರ್ಕಾರ ಮುಂದುವರೆಯಬೇಕು ಅಂತ ನಾನು ಹೇಳುತ್ತಿದ್ದೇನೆ. ಕಷ್ಟದಲ್ಲಿರುವ ಜನರಿಗೆ ಬದುಕು ಕಟ್ಟಿಕೊಡೋರು ಯಾರು. ಜನರ ಕಷ್ಟಗಳಿಗೆ ಯಾರು ಸ್ಪಂದಿಸುತ್ತಾರೆ ಅವರನ್ನ ಗಮನಿಸುತ್ತೇನೆ. ಅವರ ಕಳಕಳಿ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. 9ನೇ ತಾರೀಖಿನಿ ನಂತರ ಸರ್ಕಾರದ ಬಹುಮತ ನೋಡಿಕೊಂಡು ಮುಂದಿನ ನಿರ್ಧಾರ ಮಾಡ್ತೇನೆ. ಕೂಸು ಹುಟ್ಟೊ ಮುಂಚೆ ಕುಲಾವಿ ಹೋಲಿಸೋದು ಬೇಡ ಎಂದರು.