ಸಿ.ಟಿ.ರವಿ ಹೈಕಮಾಂಡ್ ಗುಲಾಮಗಿರಿಗೆ ಕೆಲಸ ಮಾಡುವ ಭ್ರಷ್ಟ ರಾಜಕಾರಣಿ – ಕರವೇ ಜಿಲ್ಲಾಧ್ಯಕ್ಷ ಆಕ್ರೋಶ
ಸಿ.ಟಿ.ರವಿ ಅವಿವೇಕಿ ರಾಜಕಾರಣಿ, ನೀಚ ರಾಜಕಾರಣಿ, ಹೈಕಮಾಂಡ್ ಗುಲಾಮಗಿರಿಗೆ ಕೆಲಸ ಮಾಡುವ ಭ್ರಷ್ಟ ರಾಜಕಾರಣಿ ಎಂದು ಕರವೇ ಜಿಲ್ಲಾಧ್ಯಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವಿವೇಕಿ ರಾಜಕಾರಣಿ, ನೀಚ ರಾಜಕಾರಣಿ, ಹೈಕಮಾಂಡ್ ಗುಲಾಮಗಿರಿಗೆ ಕೆಲಸ ಮಾಡುವ ಭ್ರಷ್ಟ ರಾಜಕಾರಣಿಯಾಗಿರುವ ಶಾಸಕ ಹಾಗೂ ಸಚಿವ ಸಿ.ಟಿ.ರವಿಯವರೆ, ಕನ್ನಡದ ಬಗ್ಗೆ ಕಾಳಜಿ ಇಲ್ಲ. ಕನ್ನಡದ ಬಗ್ಗೆ ಅಭಿಮಾನವಿಲ್ಲ. ಕನ್ನಡದ ಬಾವುಟ ಬೇಡ ಅನ್ನೋದಾದ್ರೆ, ನೀವು ಕರ್ನಾಟಕವನ್ನ ಬಿಟ್ಟು ಹೋಗೋದು ಸೂಕ್ತ ಎಂದು ಕರವೇ ಚಿಕ್ಕಮಗಳೂರು ಜಿಲ್ಲಾ ಘಟದ ಅಧ್ಯಕ್ಷ ತೇಗೂರು ಜಗದೀಶ್ ಮನವರಿಕೆ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಗದೀಶ್, ಸರ್ಕಾರದ ಪ್ರತಿನಿಧಿಯಾಗಿ, ಸಚಿವನಾಗಿ ಕರ್ನಾಟಕದ ಭಾವುಟ ಬೇಡವೆನ್ನಲು ನಿಮಗೆ ಯಾವ ರೀತಿ ಹಕ್ಕಿದೆ. ರಾಜ್ಯಾದ್ಯಂತ ಅತಿವೃಷ್ಠಿಯಿಂದ ಲಕ್ಷಾಂತರ ಜನ ಬೀದಿಪಾಲಾಗಿದ್ದಾರೆ. ಅವರಿಗೆ ಪುನರ್ವಸತಿ ಕಲ್ಪಿಸೋದು ಬಿಟ್ಟು ನಾಡದ್ರೋಹಿ ಕೆಲಸ ಮಾಡ್ತಿರೋ ಸಿ.ಟಿ.ರವಿ ಕೂಡಲೇ ಕನ್ನಡಿಗರ ಕ್ಷಮೆಕೋರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ನಿಮಗೆ ಕೆಲ ದಿನ ಗಡುವು ನೀಡಿದ್ದೇವೆ, ಅಷ್ಟರಲ್ಲಿ ನಾಡಿನ ಜನರ ಕ್ಷಮೆ ಕೇಳಿ, ರಾಜೀನಾಮೆ ನೀಡದಿದ್ರೆ ನಿಮ್ಮ ಮನಗೆ ಮುತ್ತಿಗೆ ಹಾಕಿ, ಇಂತ ನಾಲಾಯಕ್ ರಾಜಕಾರಣಿ ಹಾಗೂ ನಾಡದ್ರೋಹಿ ರಾಜಕಾರಣಿ ಸಚಿವ ಹಾಗೂ ಶಾಸಕನಾಗಿರೋದು ಬೇಡ ವಜಾಗೊಳಿಸಿ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸೋದಾಗಿ ಎಚ್ಚರಿಸಿದ್ದಾರೆ.