ಹಿಟ್ಟಿನ ಬ್ಯಾಗ್‍ಗಳಲ್ಲಿ ನೋಟು : ಸ್ಪಷ್ಟನೆ ಕೊಟ್ಟ ನಟ ಅಮಿರ್ ಖಾನ್…

ಲಾಕ್ ಡೌನ್ ನಿಂದಾಗಿ ಸಂಕಷ್ಟದಲ್ಲಿರುವವರಿಗೆ ಕೆಲ ದಾನಿಗಳು ಫುಡ್ ಕಿಟ್ ನೀಡಿದರೆ ಇನ್ನೂ ಕೆಲವರು ಹಣ ನೀಡಿ ಸಹಾಯ ಮಾಡಿದ್ದಾರೆ. ಹೀಗೆ ಬಡವರಿಗಾಗಿ ಸಹಾಯ ಮಾಡಿದವರಲ್ಲಿ ಬಾಲಿವುಡ್ ನಟ ಅಮಿರ್ ಖಾನ್  ದೊಡ್ಡ ಮಟ್ಟದ ಸುದ್ದಿ ಮಾಡಿದ್ರು. ಕಾರಣ ಅಮಿರ್ ಖಾನ್ ಬಡವರಿಗಾಗಿ ನೀಡಿದ ಹಿಟ್ಟಿನ ಬ್ಯಾಗ್‍ಗಳಲ್ಲಿ ಗರಿ ಗರಿ ನೋಟುಗಳನ್ನಿಟ್ಟು ನೀಡಿದ್ದರು ಎನ್ನುವ ಸುದ್ದಿ ಭಾರಿ ಸದ್ದು ಮಾಡಿತ್ತು.

ಹೌದು.. ಹೀಗೋಮದು ಸುದ್ದಿ ದೇಶದಾದ್ಯಂತ ಹರಡಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಈ ಬಗ್ಗೆ ಅಮಿರ್ ಖಾನ್ ಟ್ವೀಟ್ ಮಾಡುವ ಮೂಲಕ ಎಲ್ಲಾ ವಿವಾದಕ್ಕೆ ತೆರೆ ಎಳೆದಿದ್ದಾರೆ. ಕೆಲ ದಿನಗಳ ಹಿಂದೆ ಸಾಕಷ್ಟು ಚರ್ಚೆಯಾಗಿದ್ದ ಗೋಧಿ ಹಿಟ್ಟಿನ ಬ್ಯಾಗ್‍ಗಳಲ್ಲಿ ಗರಿ ಗರಿ ನೋಟಿನ ಕಂತೆ ಇರುವ 15 ಸಾವಿರ ರೂ. ಪತ್ತೆಯಾಗಿತ್ತು.

ಲಾಕ್‍ಡೌನ್‍ ಸಂದರ್ಭದಲ್ಲಿ  ಯಾರೋ ಅನಾಮಿಕರು ಒಂದು ಕೆ.ಜಿ.ಗೋಧಿ ಹಿಟ್ಟಿನ ಚೀಲದಲ್ಲಿ 15 ಸಾವಿರ ರೂ. ಇಟ್ಟು ವಿತರಿಸಿದ್ದರು. ಪಡೆದವರಿಗೆ ಸಂತಸವಾದರೆ, ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಮಿರ್ ಖಾನ್ ಅವರ ಸಹಾಯ ಮಾಡುವ ಗುಣ ಹಾಗೂ ಸಹಾಯ ಮಾಡಿದ್ದನ್ನು ಎಲ್ಲೂ ಹೇಳಿಕೊಳ್ಳದ ಸ್ವಭಾವ ಇರುವುದರಿಂದ ಇದನ್ನು ಅಮಿರ್ ಖಾನ್ ಮಾಡಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಕೆಲವರು ಅಮಿರ್ ಖಾನ್ ಅವರಿಗೆ ಧನ್ಯವಾದ ಕೂಡ ತಿಳಿಸಿದ್ದರು. ಸದ್ಯ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದ ಅಮಿರ್ ಖಾನ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ಗೋಧಿ ಹಿಟ್ಟಿನ ಚೀಲಗಳಲ್ಲಿ ಹಣ ಇಟ್ಟ ವ್ಯಕ್ತಿ ನಾನಲ್ಲ. ಇಂದು ಸಂಪೂರ್ಣ ಸುಳ್ಳು ಸುದ್ದಿ, ರಾಬಿನ್ ಹುಡ್ ತನ್ನ ಬಗ್ಗೆ ರಿವೀಲ್ ಮಾಡಲು ಬಯಸುವುದಿಲ್ಲ. ಸ್ಟೇ ಸೇಫ್, ಲವ್ ಎಂದು ಹಾಸ್ಯಮಯವಾಗಿ ಬರೆದುಕೊಂಡಿದ್ದಾರೆ.

ದೆಹಲಿಯ ಕೆಲವು ಭಾಗಗಳಲ್ಲಿ 500 ರೂ.ನೋಟುಗಳುಳ್ಳ ಒಟ್ಟು 15 ಸಾವಿರ ರೂ. ಹಣ ಇರುವ ಒಂದು ಕೆ.ಜಿ.ಗೋಧಿ ಹಿಟ್ಟಿನ ಬ್ಯಾಗ್ ವಿತರಿಸಲಾಗಿತ್ತು. ನೇರವಾಗಿ ಅವಶ್ಯಕತೆ ಇರುವವರಿಗೆ, ಬಡವರಿಗೆ ತಲುಪಲು ಈ ರೀತಿ ಮಾಡಿದ್ದಾರೆ. ಇದನ್ನು ಅಮಿರ್ ಖಾನ್ ಅವರೇ ಮಾಡಿರಬೇಕು ಎಂದು ಹೇಳಲಾಗಿತ್ತು.

ಆದರೆ ಅಮಿರ್ ಖಾನ್ ಅವರು ಈ ಕೆಲಸ ಮಾಡಿಲ್ಲ ಎನ್ನುವುದಾದರೆ, ಬ್ಯಾಗ್‍ನಲ್ಲಿ ಹಣ ಇಟ್ಟು ಹಂಚಿದವರಾರು ಎಂಬ ಪ್ರಶ್ನೆ ಇದೀಗ ಮೂಡಿದೆ.

https://twitter.com/aamir_khan/status/1257165603678240768

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights