‘ಹಿಂದೂ ಧರ್ಮ ಒಂದು ಧರ್ಮವೇ ಅಲ್ಲ’ – ಪ್ರೊ. ಕೆ.ಎಸ್. ಭಗವಾನ್ ಮತ್ತೊಂದು ವಿವಾದಾತ್ಮಕ ಹೇಳಿಕೆ!

‘ಶ್ರೀರಾಮ ದೇವರೇ ಅಲ್ಲ. ಆತನೊಬ್ಬ ಕೊಲೆಗಡುಕ’ ಎಂಬಿತ್ಯಾದಿ ವಿವಾದಾತ್ಮಕ ಹೇಳಿಕೆಗಳಿಗೆ ಸುದ್ದಿಯಾಗುತ್ತಿದ್ದ ಪ್ರೊ. ಕೆ.ಎಸ್. ಭಗವಾನ್ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ‘ಹಿಂದೂ ಧರ್ಮ ಒಂದು ಧರ್ಮವೇ ಅಲ್ಲ’ ಎಂಬ ಹೇಳಿಕೆ ನೀಡಿ ಹಿಂದುಗಳ ಟೀಕೆಗೆ ಒಳಪಟ್ಟಿದ್ದಾರೆ.

ಹಿಂದೂ ಧರ್ಮ ಧರ್ಮವೇ ಅಲ್ಲ. ಹಿಂದೂ ಧರ್ಮ ಎಂದರೆ ಬ್ರಾಹ್ಣರು ಎಂದರ್ಥ. ನಮ್ಮ ಜನರಿಗೆ ಹಿಂದೂ ಎಂಬುದರ ಅರ್ಥ ಗೊತ್ತಿಲ್ಲ. ತಮ್ಮ ಜಾತಿ ಹೇಳುವ ಮೂಲಕ ತಾವು ಹಿಂದೂ ಧರ್ಮ ಎಂದು ಹೇಳಿಕೊಳ್ಳುತ್ತಾರೆ. ಬ್ರಾಹ್ಮಣರು ಬಳಿಸಿಕೊಂಡ ಪದವನ್ನು ನೀವು ಬಳಿಸಿಕೊಂಡಿದ್ದೀರಾ. ಹೀಗಾಗಿ ಹಿಂದುಗಳೆಂದರೆ ಬ್ರಾಹ್ಣರು. ಉಳಿದವರು ಶೂದ್ರರು ಎಂದಿದ್ದಾರೆ. ಶೂದ್ರರು ಎಂದರೆ ಮನುಸ್ಮೃತಿಯಲ್ಲಿ ವೇಶ್ಯೆಯರು ಎಂಬ ಉಲ್ಲೇಖವಿದೆ ಎಂದಿದ್ದಾರೆ. ಹೀಗಾಗಿ ಹಿಂದೂ ಎನ್ನುವ ಪದವನ್ನು ತೆಗೆದು ಹಾಕಿ ಎಂದು ಪ್ರೊ. ಭಗವಾನ್ ಮೈಸೂರಿನಲ್ಲಿ ಹೇಳಿದ್ದಾರೆ.

‘ರಾಮಮಂದಿರ ಏಕೆ ಬೇಡ’ ಎನ್ನುವ ಪುಸ್ತಕದಲ್ಲಿ ಶ್ರೀರಾಮನ ಬಗ್ಗೆ ವಿವಾದಿತ ಹೇಳಿಕೆಗಳನ್ನು ಕೆ.ಎಸ್ ಭಗವಾನ್ ಉಲ್ಲೇಖ ಮಾಡಿದ್ದರು. ಶ್ರೀರಾಮ ಭಕ್ತರನ್ನು ಕೆರಳಿಸುವಂತಹ ಹೇಳಿಕೆಗಳನ್ನು ಭಗವಾನ್ ಉಲ್ಲೇಕಿಸಿ ಕೆಂಗಣ್ಣಿಗೆ ಗುರಿಯಾಗಿದ್ದರು. ಶ್ರೀರಾಮ ದೇವರೇ ಅಲ್ಲ. ಅವನು ಕೊಲೆಗಡುಕ ಎನ್ನುವ ಹೇಳಿಕೆಗಳನ್ನು ನೀಡಿದ್ದ ಅವರು ಈ ಬಾರಿ ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಅನೇಕರ ಕೋಪ ಪುಟಿದೇಳುವಂತೆ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights