ಆಸ್ತಿ ವಿವಾದ : ಸ್ವಂತ ಮಗನ ಹತ್ಯೆಗೆ ಸಪಾರಿ ಕೊಟ್ಟ ತಂದೆ – ಆರೋಪಿ ಬಿಚ್ಚಿಟ್ಟ ಕಹಿ ಸತ್ಯ!
ಆಸ್ತಿಯಲ್ಲಿ ಪಾಲು ಕೇಳಿದ್ದಕ್ಕಾಗಿ ಸ್ವಂತ ಮಗನನ್ನು ಕೊಲ್ಲಲು ತಂದೆಯೋರ್ವ 3 ಲಕ್ಷ ಸುಪಾರಿ ಕೊಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಮಲ್ಲೇಶ್ವರಂ 17 ನೇ ಕ್ರಾಸ್ ನಿವಾಸಿ ಬಿ.ವಿ. ಕೇಶವ (50) ಅವರನ್ನು ಹಿರಿಯ ಮಗನನ್ನು ಕೊಲೆ ಮಾಡಿದ ಆರೋಪದ ಮೇಲೆ ಈಗ ಅವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜನವರಿ 12 ರಂದು ತಂದೆ ಟೆಕ್ಕಿಯಾಗಿದ್ದ ಹಿರಿಯ ಮಗ ಕೌಶಲ್ ಪ್ರಸಾದ್ ಜನವರಿ 10 ರಿಂದ ಮನೆಗೆ ಮರಳಿಲ್ಲ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಕೌಶಲ್ ಅವರ ಮೊಬೈಲ್ ಫೋನ್ ಕಿರಿಯ ಮಗನಿಗೆ ನೀಡಲಾಗಿದೆ ಎಂದು ತಂದೆಯ ದೂರಿನಲ್ಲಿ ತಿಳಿಸಲಾಗಿತ್ತು.
ಸಿಸಿಟಿವಿ ಕ್ಯಾಮೆರಾಗಳಲ್ಲಿ ಕೌಶ್ಯಲ್ ಮಲ್ಲೇಶ್ವರಂ 18 ನೇ ಕ್ರಾಸ್ ಬಳಿ ಬಿಳಿ ಮಾರುತಿ ಕಾರ್ ಹತ್ತಿದ್ದನ್ನು ಕಂಡುಕೊಂಡ ಪೊಲೀಸರಿಗೆ ಈ ಕಾರು ಚಾಲಕ ನವೀನ್ ಕುಮಾರ್ ಎಂದು ತಿಳಿದಿದೆ. ಸಿಸಿ ಕ್ಯಾಮೆರಾಗಳ ಸಹಾಯದಿಂದ ಪೊಲೀಸರು ಎಲಿಮಲ್ಲಾ ಸರೋವರದ ದಿಕ್ಕಿನಲ್ಲಿ ಚಲಿಸುತ್ತಿರುವ ಕಾರನ್ನು ಪತ್ತೆ ಮಾಡಿದ್ದಾರೆ. ನವೀನ್ ಕುಮಾರ್ ವಿಚಾರಣೆ ವೇಳೆ ಸತ್ಯವನ್ನು ಬಾಯಿ ಬಿಟ್ಟಿದ್ದು ಕೊಲೆಗೆ ತಂದೆಯೇ ಸುಪಾರಿ ಕೊಟ್ಟ ವಿಚಾರ ಬಯಲಾಗಿದೆ. ಕೌಶ್ಯಲ್ ತಂದೆ ಅವರನ್ನು 3 ಲಕ್ಷ ರೂ.ಗೆ ನೇಮಕ ಮಾಡಿಕೊಂಡಿದ್ದು, ಈಗಾಗಲೇ 1 ಲಕ್ಷ ರೂ.ಗಳ ಮುಂಗಡ ಪಡೆದಿದ್ದಾರೆ ಎಂದು ಆರೋಪಿ ನವೀನ್ ಪೊಲೀಸರಿಗೆ ತಿಳಿಸಿದ್ದಾನೆ. ಆಸ್ತಿಗಾಗಿ ನಿರಂತರ ಚಿತ್ರಹಿಂಸೆ ನೀಡಿದ್ದರಿಂದ ತಂದೆ ತನ್ನ ಸ್ವಂತ ಮಗನನ್ನು ಕೊಲೆ ಮಾಡಲು ಮುಂದಾಗಿದ್ದಾರೆ. ಅವರು ಕಿರಿಯ ಮಗನ ಸಹಪಾಠಿಗಳಾಗಿದ್ದರಿಂದ ಆರೋಪಿಗಳು ತಂದೆಗೆ ಪರಿಚಿತರಾಗಿದ್ದರು. ಇವರನ್ನು ಬಳಸಿಕೊಂಡು ತಂದೆ ಈ ಕೃತ್ಯಕ್ಕೆ ಕೈ ಹಾಕಿದ್ದಾನೆ.
ಆರೋಪಿ ನವೀನ್ ಹಾಗೂ ನವೀನ್ ಸ್ನೇಹಿತರು ಅದೊಂದು ದಿನ ಕೌಶ್ಯಲ್ ನ್ನು ಸರೋವರಕ್ಕೆ ಕರೆದೊಯ್ದು ನಿದ್ರಾ ಮಾತ್ರೆಯನ್ನು ಹಾಕಿ ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಾರೆ. ಬಳಿಕ ಆತನ ಕುತ್ತಿಗೆ ಕತ್ತರಿಸಿದ್ದಾರೆ. ಮಾತ್ರವಲ್ಲದೇ ಕೈ ಕಾಲುಗಳು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಗೋಣಿ ಚೀಲದಲ್ಲಿ ತುಂಬಿ ಸರೋವರಕ್ಕೆ ಎಸೆದಿದ್ದಾರೆ.
ಪೊಲೀಸರು ಕೌಶಲ್ ಗಾಗಿ ಹುಡುಕಾಟ ಆರಂಭಿಸಿದಾಗ ಅವನಹಳ್ಳಿಯ ನಿವಾಸಿಗಳು ಎಲಿಮಲ್ಲಪ್ಪ ಸರೋವರದಲ್ಲಿ ಎಸೆದ ಕೆಲವು ಗೋಣಿ ಚೀಲಗಳಿಂದ ಹೊರಹೊಮ್ಮಿದ ದುರ್ವಾಸನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು. ಗೋಣಿ ಚೀಲಗಳನ್ನು ತೆರೆದು ನೋಡಿದಾಗ ಮಾನವ ದೇಹದ ಭಾಗಗಳು ಪೊಲೀಸರಿಗೆ ಕಂಡುಬಂದಿವೆ. ಶವವನ್ನು ನಂತರ ಕಾಣೆಯಾದ ಕೌಶಲ್ ಎಂದು ಗುರುತಿಸಲಾಗಿದೆ. ಮರಣೋತ್ತರ ನಂತರ ಶವವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.