ಹುಣಸೂರು ಕ್ಷೇತ್ರದ ಟಿಕೆಟ್ ಬೇರೆಯವರಿಗೆ ಘೋಷಣೆಯಾಗಿದೆ ಎಂಬ ವದಂತಿಗೆ ವಿಶ್ವನಾಥ್ ಸ್ಪಷ್ಟನೆ

ಹುಣಸೂರು ಕ್ಷೇತ್ರದ ಟಿಕೆಟ್ ಬೇರೆಯವರಿಗೆ ಘೋಷಣೆಯಾಗಿದೆ ಎಂದು ವದಂತಿಗೆ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಸ್ಪಷ್ಟನೆ ನೀಡಿದ್ದಾರೆ.

ಈಗ ಘೋಷಣೆಯಾಗಿರುವ ಉಪಚುನಾವಣೆಯೂ ಮುಂದೂಡಬಹುದು!. ಸುಪ್ರೀಂಕೋರ್ಟ್ನಲ್ಲಿರುವ ನಮ್ಮ ಅರ್ಜಿ ವಿಚಾರವಾಗಿ ಐತಿಹಾಸಿಕ ತೀರ್ಪು ಬರಲಿದೆ.

ಈಗೀನ ಪೀಠದಿಂದ ಸಂವಿಧಾನ ಪೀಠಕ್ಕು ನಮ್ಮ ಕೇಸ್ ರವಾನೆಯಾಗಬಹುದು. ಪರಸ್ಥಿತಿ ಈಗಿರುವಾಗ ಯಾರೋ ತಮ್ಮ ತೆವಲಿಗೆ ಹುಣಸೂರು ಕ್ಷೇತ್ರದ ಟಿಕೆಟ್ ಬೇರೆಯವರಿಗೆ ಘೋಷಣೆಯಾಗಿದೆ ಎಂದು ವದಂತಿ ಹಬ್ಬಿಸಿದ್ದಾರೆ.

ಇದು ಗೊಂದಲ ಸೃಷ್ಟಿಸುವ ಕೆಲಸ‌. ಯಾವ ಶಾಸಕನೂ ತಾನು ಗೆದ್ದ ಕ್ಷೇತ್ರವನ್ನ ಯಾರಿಗು ಬಿಟ್ಟು ಕೊಡೋಲ್ಲ. ಆ ಕ್ಷೇತ್ರ ಆ ಶಾಸಕನ ಜೀವನವಾಗಿರುತ್ತದೆ. ಚುನಾವಣೆ ನಡೆದರೆ ನಾನೇ ಸ್ಪರ್ಧೆ ಮಾಡುತ್ತೇನೆ. ಈ ವಿಚಾರವಾಗಿ ತೀರ್ಮಾನವು ಮಾಡಿಕೊಂಡಿದ್ದೇನೆ.

ಬಿಜೆಪಿ ಹೈಕಮಾಂಡ್ ಬಹಳಾ ಗಟ್ಟಿಯಾಗಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ತೆಗೆದುಕೊಳ್ಳುತ್ತಾರೆ. ಸಿಎಂ ಭೇಟಿ ವೇಳೆ ನಾನು ಚುನಾವಣೆ ಬಗ್ಗೆ ಚರ್ಚೆಯೇ ಮಾಡಿಲ್ಲ. ಇನ್ನು ಸಿಎಂ ನನ್ನನ್ನ ಮನವೋಲಿಸುವ ಪ್ರಶ್ನೆ ಎಲ್ಲಿಂದ ಬಂತು ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights