Corona : ರಾಜ್ಯದಲ್ಲಿ ಗುಣಮುಖರ ಸಂಖ್ಯೆ 705ಕ್ಕೇರಿಕೆ, 1 ದಿನ ದಾಖಲೆಯ 51 ಮಂದಿ ಚೇತರಿಕೆ..

ರಾಜ್ಯದಲ್ಲಿ ಒಂದೇ ದಿನ ದಾಖಲೆಯ 51 ಮಂದಿ ಕೊರೋನಾ ವೈರಸ್‍ ದಿಂದ ಚೇತರಿಕೆ ಕಂಡಿದ್ದಾರೆ..ಒಟ್ಟು ಗುಣಮುಖರಾವರ  ಸಂಖ್ಯೆ 705ಕ್ಕೇರಿದ …ಆದರೆ ವೈರಸ್ ದಿಂದ ಅಂತರ ಕಾಪಾಡಿಕೊಂಡಿದ್ದ ಉಡುಪಿಗೆ  ಕೊರೋನಾ ಮಾರಿ ವಕ್ಕರಿಸಿದೆ…ಕೊರೋನಾ ಪ್ರಕರಣಗಳ ಏರುಮುಖದ ನಡುವೆಯೇ ಸಮಾಧಾನಕರ ಸುದ್ದಿಯೊಂದು ಹೊರಬಿದ್ದಿದೆ.

ಕಳೆದ 24 ತಾಸುಗಳ ಅವಧಿಯಲ್ಲಿ ರಾಜ್ಯದಲ್ಲಿ 51 ಮಂದಿ ಕೊರೋನಾ ಶಾಪದಿಂದ ಮುಕ್ತಿ ಪಡೆದಿದ್ದಾರೆ. ಇದು ರಾಜ್ಯದ ಮಟ್ಟಿಗೆ ದಾಖಲೆಯೇ ಸರಿ. ಬೆಂಗಳೂರು ನಗರ ಒಂದರಲ್ಲಿಯೇ 19 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದರೇ, ಕಲಬುರ್ಗಿಯಲ್ಲಿ ಯಂಬತ್ತು ಹಾಗೂ ಬೆಳಗಾವಿಯಲ್ಲಿ ನಾಲ್ವರು ಗುಣರಾಗಿದ್ದಾರೆ.

ಈ ಮಧ್ಯೆ ಕಳೆದೆರಡುದ ದಿನಗಳ ಅಬ್ಬರದ ನಂತರ ಕಳೆದ 24 ತಾಸಿನಲ್ಲಿ ರಾಜ್ಯದಲ್ಲಿ ಹೊಸ ಕೊರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. ಈ ಅವಧಿಯಲ್ಲಿ 93 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡುಬಂದಿದೆ. ಇದರಲ್ಲಿ ಸಿಂಹಪಾಲು ಉಡುಪಿಯದ್ದಾದರೇ (32), ಕಲಬುರ್ಗಿ (16) ಮತ್ತು ಯಾದಗಿರಿಯಲ್ಲಿ ಸಹ ಹೊಸ ಪ್ರಕರಣಗಳು ಪತ್ತೆಯಾಗಿವೆ.(15)

ಸದ್ಯ ರಾಜ್ಯದಲ್ಲಿ 1431 ಕೊರೋನಾ ಸಕ್ರಿಯ ಸೋಂಕಿತರಿದ್ದು, 705 ಮಂದಿ ಚೇತರಿಕೆ ಕಂಡಿದ್ದಾರೆ. ಸೋಮವಾರ ಇಬ್ಬರು ಮೃತಪಟ್ಟಿದ್ದೂ ಸೇರಿದಂತೆ ಒಟ್ಟು ಅಸುನೀಗಿದವರೆ ಸಂಖ್ಯೆ 44ಕ್ಕೇರಿದೆ.

ಈ ಮಧ್ಯೆ ಕೊರೋನಾ ನಿಭಾವಣೆಯಲ್ಲಿ ಬೆಂಗಳೂರು ರಾಷ್ಟ್ರಕ್ಕೇ ಮಾದರಿಯಾಗಿ ಹೊರಹೊಮ್ಮಿರುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಕೊರೋನಾ ಯೋಧರ ಪರಿಶ್ರಮಕ್ಕೆ ಹೆಮ್ಮೆಯ ಅನುಮೋದನೆ ದೊರಕಿದೆ. ಕೋವಿಡ್19 ನ ಪರಿಣಾಮಕಾರಿ ನಿರ್ವಹಣೆಗಾಗಿ 4 ಮಾದರಿ ನಗರಗಳನ್ನು ಕೇಂದ್ರ ಸರ್ಕಾರ ಗುರುತಿಸಿದೆ.

ಉತ್ತಮ ಚಿಕಿತ್ಸೆ ಹಾಗೂ ಮರಣ ಪ್ರಮಾಣವನ್ನು ತಗ್ಗಿಸುವಲ್ಲಿ ನಮ್ಮ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ನಮ್ಮ ಇಡೀ ತಂಡಕ್ಕೆ ಅಭಿನಂದನೆಗಳು. ಈ ಉತ್ತಮ ಸೇವೆಯನ್ನು ಮುಂದುವರಿಸೋಣ ಎಂದು ಅವರು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights