ಪರೋಕ್ಷವಾಗಿ ಮೈತ್ರಿ ಪಕ್ಷದವರ ವಿರುದ್ದ ಆಕ್ರೋಶ ಹೊರ ಹಾಕಿದ ರೇವಣ್ಣ…..
ಯಾರು ಕೆ.ಆರ್.ಪೇಟೆ ಕಡೆ ಬೊಟ್ಟು ಮಾಡಿ ತೋರಿಸಬೇಕಿಲ್ಲ. ಯಾಕೆಂದ್ರೆ ಇಲ್ಲಿನ ಹೆಚ್ಚಿನ ಜನ್ರು ದೇವೇಗೌಡ್ರ ಕುಟುಂಬಕ್ಕೆ ಯಾವುದೇ ಆಸೆ ಆಕಾಂಕ್ಷಿ ಇಲ್ಲದೆ ದುಡಿದಿದ್ದಾರೆ. ದೇವೇಗೌಡ್ರು ಕೂಡ ಕೆ.ಆರ್.ಪೇಟೆ ಬಗ್ಗೆ ವಿಶೇಷ ಒಲವಿದೆ. ೧೪ ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ಅಷ್ಟು ನೋವು ತಿಂದಿದ್ದಾರೆ. ಬೇರೆಯವರಾಗಿದ್ರೆ ಖಂಡಿತಾ ಆ ನೋವು ತಡೆದುಕೊಳ್ತಿರಲಿಲ್ಲ ಎಂದು ಕೆ.ಆರ್.ಪೇಟೆ ಜೆಡಿಎಸ್ ಮಾಜಿ ಸಚಿವ ರೇವಣ್ಣ ಹೇಳಿದ್ದಾರೆ.
ಪರೋಕ್ಷವಾಗಿ ಮೈತ್ರಿ ಪಕ್ಷದವರ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ ರೇವಣ್ಣ, ಇಂದು ರಾಜ್ಯದಲ್ಲಿ ಸಾವಿರಾರು ರೈತರ ಕೋಟ್ಯಾಂತರ ರೂ ಸಾಲ ಮನ್ನಾ ಆಗಿದೆ. ಆದ್ರೆ ಈಗನ ಸರ್ಕಾರ ರೈತ ನೆರವು ನೀಡೋದಿರಲ್ಲಿ ರೈತರತ್ತ ತಿರುಗಿ ನೋಡ್ತಿಲ್ಲ. ಮಾರ್ವಾಡಿಗಳ ಮೇಲೆ ರೇವಣ್ಣ ಕಣ್ಣು ಹಾಕಿದ್ದಾರೆ. ತಮ್ಮ ಕ್ಷೇತ್ರದಲ್ಲಿ ರೈತರು ಒಡವೆಗಳ ಮೇಲೆ ಸಾಲ ತಗೊಂಡು ಒಡವೆ ಬಿಡಿಸಿ ಕೊಂಡಿಲ್ಲ. ಹೀಗಾಗೀಗೆನೇ ನಮ್ಮ ಕಡೆ ೪೪ ಬಿಲ್ಡಿಂಗ್ ಮನೆಗಳನ್ನು ಮಾರ್ವಾಡಿಗಳು ಕಟ್ಟಿಕೊಂಡಿದ್ದಾರೆ.
ಕುಮಾರಣ್ಣ ಎಂತವರನ್ನು ನಂಬ್ತಾರೆ,ಒಳ್ಳೆಯವರನ್ನು ಕಳ್ಳರನ್ನು ನಂಬ್ತಾನೆ. ಅವತ್ತು ದೊಡ್ಡವರ ಮಾತು ಕೇಳಿದ್ರೆ ಇಲ್ಲಿ ಈ ಪರಿಸ್ಥಿತಿ ಬರ್ತಿರಿಲ್ಲ. ಅವ್ರೆ ಎಲ್ಲಿ ಮೇವು ಸಿಗುತ್ತೆ ಅಲ್ಲಿ ಇರೋವರೋ ತಿಂತಾವೆ ಕಡಿಮೆ ಆಗ್ತಿದ್ದಂತೆ ಹಂಗೆ ಹೋಗ್ತಾವೆ. ಕುಮಾರಣ್ಣ ಈ ಹೋಟೇಲ್ ನಲ್ಲಿರೋನ್ನ ಕರ್ಕೊಂಡು ಬಂದು ನಿಲ್ಲಿಸ್ದಾ. ಈ ಹೋಟೇಲ್ ನನ ಬುದ್ದಿ ತೋರಿಸಿ ಹೋಗ್ವನ್ನೆ ಅವನು. ನಾರಾಯಣಗೌಡ ಎರಡು ಸಾರಿ ಶಾಸಕನಾಗಿದ್ರು ಇಲ್ಲಿ ಯಾವುದೇ ಕೆಲ್ಸ ಮಾಡಿಲ್ಲ.ನಮ್ಮ ಕ್ಷೇತ್ರಕ್ಕೆ ಬರೀ ೨ ಕೋಟಿ ಕೊಟ್ವನೆ ಅಂತಾನೆ ನನ್ ಖಾತೆಯಿಂದಲೇ ೧೦ ಕೋಟಿ ಕೊಟ್ಟಿದ್ದೇನೆ. ನಾರಾಯಣಗೌಡ ಕೊಟ್ಟ ಕಾಮಗಾರಿ ಗುತ್ತಿಗೆಯನ್ನು ಅದ್ವಾವುದೋ ಏಜೆನ್ಸಿಗೆ ಕೊಟ್ಟಿದ್ದಾನೆ.
ಸ್ಥಳೀಯ ಗುತ್ತಿಗೆದಾರನಿಗೆ ಯಾವುದೇ ಕಾಮಗಾರಿ ಕೊಟ್ಟಿಲ್ಲ. ಅವನು ಕಮೀಷನ್ ಶಾಸಕನಾಗಿದ್ದ.ನಾನು pwd ಇಲಾಖೆಯಲ್ಲಿ ನೂರಾರು ಕೋಟೆ ಕಾಮಗಾರಿ ಮಾಡಿದ್ದೇನೆ. ಇದನ್ನು ಯಾವುದೇ ಯಡಿಯೂರಪ್ಪ ನಿಲ್ಲಿಸೋಕೆ ಆಗಲ್ಲ. ಶಾಸಕನಾಗಿದ್ದ ನಾರಾಯಣಗೌಡ ಕಾಮಗಾರಿಗಳಲ್ಲಿ ನೂರಾರು ಕೋಟೆ ಕಮೀಷನ್ ನುಂಗಿದ್ದಾನೆ. ಕುಮಾರಸ್ವಾಮಿ ಗೆ ದೇವೇಗೌಡರು ನಾರಾಯಣಗೌಡನಿಗೆ ಎರಡನೇ ಬಾರಿ ಟಿಕೇಟ್ ಕೊಡಬೇಡಪ್ಪ ಅಂದಿದ್ರು. ಅವೆಲ್ಲ ಹೋಟೇಲ್ ನಲ್ಲಿ ಚೆಂಗಲ್ ಬಿದ್ದಿವೆ ಅವರು ಇರಲ್ಲ ಅಂದಿದ್ರು.
ಆದ್ರೆ ಕುಮಾರಸ್ವಾಮಿ ಮಾತು ಕೊಟ್ಟಿದ್ದೇನೆ ಎಂದು ಟಿಕೇಟ್ ಕೊಟ್ಟು ಈಗ ಗೋಳಾಡ್ತಿದ್ದಾನೆ. ಪಕ್ಷಕ್ಕೆ ದ್ರೋಹ ಬಗೆದ ಈತನಿಗೆ ಆ ದೇವರೇ ಶಿಕ್ಷೆ ಕೊಡ್ತಾನೆ. ಜೆಡಿಎಸ್ ಸಮಾವೇಶದಲ್ಲಿ ಸರ್ಕಾರಿ ಅಧಿಕಾರಿಗೆ ಮಂಡಗಯದ ಡಿಸಿ ಮತ್ತು ತಹಶೀಲ್ದಾರ್ ಗೆ ವಾರ್ನಿಂಗ್. ಇವ್ರೆಲ್ಲ ಬೇರೆಯವತ ಮಾತು ಕೇಳಿ ನಮ್ಮ ಪಕ್ಷದ ನಾಯಕರ ಕ್ವಾರೆ ಮುಚ್ಚಿಸ್ತಿದ್ದಾರೆ. ಇದು ಸರಿ ಇರಲ್ಲ, ಇದು ಹೀಗೆ ಆದ್ರೆ ನಾವೇಲ್ಲ ಅವರ ಕಚೇರಿ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತೆ ಎಂದರು.