ಬಾಗಲಕೋಟೆ ಜಿಲ್ಲೆಯಿಂದ ಜಮಖಂಡಿ ಪ್ರತ್ಯೇಕ ಜಿಲ್ಲೆಗಾಗಿ ಕೂಗು : ನಾಳೆ ಬಂದ್ ಗೆ ಕರೆ
ಬಾಗಲಕೋಟೆ ಜಿಲ್ಲೆಯಿಂದ ಜಮಖಂಡಿ ಪ್ರತ್ಯೇಕ ಜಿಲ್ಲೆಗಾಗಿ ಕೂಗು ನಾಳೆ ಜಮಖಂಡಿಯಾದ್ಯಂತ ಕೇಳಿ ಬರುತ್ತಿದೆ. ನೂತನ ಜಿಲ್ಲೆಗೆ ಆಗ್ರಹಿಸಿ ನಾಳೆ ಜಮಖಂಡಿ ನಗರ ಬಂದ್ ಗೆ ಕರೆ ನೀಡಲಾಗಿದೆ.
ಜಮಖಂಡಿ ಜಿಲ್ಲಾ ಹೋರಾಟ ಸಮಿತಿಯಿಂದ ಓಲೇಮಠದ ಡಾ.ಚನ್ನಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ಮಠಾಧೀಶರಿಂದ ಬಂದ್ ಗೆ ಕರೆ ನೀಡಲಾಗಿದೆ.
ಅ.೩ ನಾಳೆ ಸಂಪೂರ್ಣ ಜಮಖಂಡಿ ನಗರ ಬಂದ್ ಗೆ ಸಹಕರಿಸಲು ಸಾವ೯ಜನಿಕರಿಗೆ ಮನವಿ ಮಾಡಲಾಗಿದೆ.
ಅ.೩ಕ್ಕೆ ಬಂದ್ ನಡೆಸಿ ಅ.೪ಕ್ಕೆ ಜಿಲ್ಲೆಗೆ ಆಗಮಿಸೋ ಸಿಎಂ ಬಿಎಸ್ವೈಗೆ ಮನವಿ ಸಲ್ಲಿಸಲು ನಿಧಾ೯ರಿಸಲಾಗಿದೆ. ಹೋರಾಟದ ನಿಮಿತ್ತ ಸಂಕಲ್ಪ ಸಭೆ ನಡೆಸಿದ್ದ ಹೋರಾಟಗಾರರು, ಮಠಾಧೀಶರು, ಜನಪ್ರತಿನಿಧಿಗಳು, ಸಾವ೯ಜನಿಕರು ಸೇರಿದಂತೆ ಎಲ್ಲರೊಂದಿಗೆ ಚಚೆ೯ ನಡೆಸಿ ಬಂದ್ ಗೆ ಕರೆ ನೀಡಲಾಗಿದೆ.