ಬೇಬಿ ಬೆಟ್ಟದಲ್ಲಿನ ಗಣಿಗಾರಿಕೆಯಿಂದ ಗದ್ದುಗೆ ನಿರ್ಮಾಣಕ್ಕೆ ತೊಂದರೆ ಎನ್ನಲಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್…
ಮಂಡ್ಯದ ಬೇಬಿ ಬೆಟ್ಟದಲ್ಲಿ ನಡೆಯುತ್ತಿರೊ ಗಣಿಗಾರಿಕೆಯಿಂದ ಗದ್ದುಗೆ ನಿರ್ಮಾಣಕೆ ತೊಂದರೆ ಎನ್ನಲಾದ ಪ್ರಕರಣ ಸದ್ಯ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ.
ಹೌದು… ನೆನ್ನೆಯಷ್ಟೆ ಬೇಬಿ ಬೆಟ್ಟದ ಸುತ್ತಲಿನ ಗಣಿಗಾರಿಕೆಯಿಂದ ಗದ್ದುಗೆಗೆ ತೊಂದರೆಯಾಗ್ತಿದೆ, ಅಲ್ದೆ ಇದರ ವಿರುದ್ದ ಮಾತನಾಡಿದ್ದಕ್ಕೆ ಗಣಿ ಮಾಲೀಕರು ಧಮಕಿ ಹಾಕಿ ನಿಂದಿಸಿರೋದಾಗಿ ಆರೋಪಿಸಿ ದೂರು ನೀಡಿದ್ದ ಬೇಬಿ ಮಠದ ಕಿರಿಯ ಸ್ವಾಮೀಜಿ ಸಿದ್ದೇಶ್ವರಸ್ವಾಮಿ, ಇಂದು ಗದ್ದುಗೆ ನಿರ್ಮಾಣಕ್ಕೆ ಅಗತ್ಯವಾದ ಸಾಮಾಗ್ರಿ ಕೇಳಿದ್ರಾ ? ಅನ್ನೋ ಅನುಮಾನ ಶುರುವಾಗಿದೆ.
ಯಾಕೆಂದರೆ ಮಂಡ್ಯ ಗಣಿ ಮಾಲೀಕರ ಸಂಘದವರು ಸ್ವಾಮಿಜಿ ಅವರು ಗದ್ದುಗೆ ನಿರ್ಮಾಣಕ್ಕೆ ಅಗತ್ಯ ಸಾಮಾಗ್ರಿ ಕಳುಹಿಸಿಕೊಡಿ ಎಂದು ಕೇಳಿರೊ ಆಡಿಯೊ ಬಿಡುಗಡೆ ಮಾಡಿದ್ದಾರೆ. ಗುರು ಸಿದ್ದೇಶ್ವರ ಸ್ವಾಮೀಜಿ ಗಣಿ ಮಾಲೀಕರಲ್ಲಿ ಕೇಳಿರೊ ಆಡಿಯೊ ಇದಾಗಿದ್ದು, ಸಾಕಷ್ಟು ಕುತೂಹಲವನ್ನು ಕೆರಳಿಸಿದೆ.
ಗದ್ದುಗೆ ನಿರ್ಮಾಣಕ್ಕೆ ಅಗತ್ಯ ಸಾಮಾಗ್ರಿ ಕಳುಹಿಸಿ, ನಿಮ್ಮ ಕೇಳಿದ್ರೆ ಅಸೋಸಿಯೇಸನ್ ನಲ್ಲಿ ಕೇಳಿ ಎನ್ನುತ್ತಾರೆ. ನೀವು ಕಳುಹಿಸುತ್ತಿರೋ ಇಲ್ಲವೋ ಹೇಳಿ ಎಂದು ಸ್ವಾಮೀಜಿ ಕೇಳಿರುವುದು ಆಡಿಯೋದಲ್ಲಿದೆ. ಗದ್ದುಗೆ ನಿರ್ಮಾಣಕ್ಕೆ ಅಗತ್ಯ ಸಾಮಾಗ್ರಿ ಕಳುಹಿಸದಿರುವುದರಿಂದ ಸ್ವಾಮೀಜಿ ಹೀಗೆಲ್ಲಾ ಆರೋಪ ಮಾಡ್ತಿದ್ದಾರೆ ಎನ್ನುತ್ತಿದ್ದಾರೆ ಗಣಿಮಾಲೀಕರ ಸಂಘದ ಪದಾಧಿಕಾರಿಗಳು.
What i don’t understood is actually how you’re not really a lot more smartly-liked than you may be now.
You’re very intelligent. You understand therefore
considerably with regards to this topic, made me personally
imagine it from a lot of numerous angles.
Its like men and women don’t seem to be involved except it
is one thing to do with Lady gaga! Your own stuffs outstanding.
All the time deal with it up!