ಮಂಡ್ಯ ಮತದಾರರಿಗೆ ಹಂಚಲು ತಂದಿದ್ದ ೧೩೦ ಸೀರೆಗಳು ಜಪ್ತಿ…!
ಮತದಾರರಿಗೆ ಹಂಚಲು ತಂದಿದ್ದ ೧೩೦ ಸೀರೆಗಳು ಜಪ್ತಿದ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಸಾಕ್ಷೀಬೀಡು ಗ್ರಾಮದಲ್ಲಿ ನಡೆದಿದೆ.
ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪರವಾಗಿ ಹಂಚಲು ತಂದಿದ್ದ ಸೀರೆಗಳು ಇವು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಚುನಾವಣಾ ಜಾಗೃತದಳದ ಅಧಿಕಾರಿಗಳ ದಾಳಿ ನಡೆಸಿದ್ದು, ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.