ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಗೆ ಜನ ಬೇಸತ್ತಿದ್ದಾರೆ – ಈ ಬಾರಿಯೂ ಗೆಲವು ನಮ್ಮದೇ – ಕೆ.ಎಸ್.ಈಶ್ವರಪ್ಪ
ಇಡೀ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಗೆ ಜನ ಬೇಸತ್ತು ಬಿಜೆಪಿ ಪರ ಇದ್ದಾರೆ. ಅವರ ಅಭಿವೃದ್ಧಿ ಸರಿಯಿಲ್ಲ ಅಂತ ಕೆಲವು ಶಾಸಕರು ನಮ್ಮ ಪಕ್ಷಕ್ಕೆ ಬಂದಿದ್ದಾರೆ. ರಾಜ್ಯದಲ್ಲಿ ನಡೆದ ನಗರಸಭೆ, ಪುರಸಭೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಿದೆ. ಉಪ ಚುನಾವಣೆಯಲ್ಲಿ 15 ಕ್ಕೆ 15 ಸ್ಥಾನ ಗೆಲ್ಲುತ್ತೇವೆ. ಸುಭದ್ರವಾಗಿ ಇನ್ನು ಮೂರುವರೆ ವರ್ಷ ಈ ಸರ್ಕಾರ ಇರಬೇಕು ಎಂಬುದು ರಾಜ್ಯದ ಜನರ ಅಪೇಕ್ಷೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮಣ ಸವದಿ ಟಿಕೇಟ್ ಕೊಡುವ ವಿಚಾರವಾಗಿ ಮಾತಣಾಡಿದ ಕೆ.ಎಸ್.ಈಶ್ವರಪ್ಪ, ಎಲ್ಲ ಕಾರ್ಯಕರ್ತರಿಗು ಟಿಕೇಟ್ ಕೊಡಬೇಕು ಅಂತ ಅಪೇಕ್ಷೆ ಇರುತ್ತೆ. ಆದರೆ ಅಥಣಿ ಕ್ಷೇತ್ರದ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬಂದಿದ್ದಾರೆ. ಅವರು ಪಕ್ಷ ಬಿಡುವ ವೇಳೆ ಅವರಿಗೆ ಸ್ಪಷ್ಟವಾಗಿ ಹೇಳಿದ್ದೇವು. ನಿಮಗೆ ಟಿಕೇಟ್ ಅಂತ ಹೇಳಿದ್ದೇವು ಆಗಾಗಿ ಅವರಿಗೆ ಕೊಟ್ಟಿದ್ದೇವೆ. ಲಕ್ಷ್ಮಣ ಸವದಿಗೆ ಟಿಕೇಟ್ ನೀಡಬಾರದು ಎಂಬ ಉದ್ದೇಶವಿಲ್ಲ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದಕ್ಕೆ ಕಾಂಗ್ರೆಸ್ ಹಾಗು ಜೆಡಿಎಸ್ನ 15 ಶಾಸಕರೇ ಕಾರಣ. ಕಾಂಗ್ರೆಸ್ ಹಾಗು ಜೆಡಿಎಸ್ ನಿಂದ ಬಂದ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಅದರಂತೆ ಅವರಿಗೆ ಎಲ್ಲ ಸ್ಥಾನಮಾನ ಕೊಡುತ್ತೀವಿ. ಸವದಿ ಉಪ ಮುಖ್ಯಮಂತ್ರಿ ಇದ್ದಾರೆ. ಸವದಿ ಅವರನ್ನು ಪ್ರಚಾರಕ್ಕೆ ಬಳಸಿಕೊಂಡು ಪ್ರಚಾರ ಮಾಡುತ್ತೀವಿ 15 ಸ್ಥಾನ ಗೆಲ್ತೀವಿ ಎಂದರು.