ಫ್ಯಾಕ್ಟ್‌ಚೆಕ್: ಮುಸ್ಲಿಮರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪೋಸ್ಟ್‌ ಕಾರ್ಡ್ ಕನ್ನಡ

ಭಾರತದಲ್ಲಿ ಹಲವು ವರ್ಷಗಳಿಂದ ಚರ್ಚೆಯಾಗುತ್ತಿರುವ ವಿಷಯವೆಂದರೆ ಮುಸ್ಲಿಂ ಜನಸಂಖ್ಯೆ. ಭಾರತದ ಹಲವು ಸಮಸ್ಯೆಗಳಿಗೆ ಮುಸ್ಲಿಂ ಜನಸಂಖ್ಯೆಯೇ ಕಾರಣ ಎನ್ನುವ ವಾದಗಳು ಸದಾ ಮುನ್ನಲೆಗೆ ಬರುತ್ತಿರುತ್ತವೆ. 2011 ರ ಜನಗಣತಿಯ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಂ ಜನಸಂಖ್ಯೆಯು  ಶೇ 14.2%  ಇದೆ ಎಂದು ವರದಿಗಳಿವೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು ಆ ಪೋಸ್ಟ್‌ರ್‌ನಲ್ಲಿ ಕೆಲವು ಅಂಕಿಅಂಶಗಳನ್ನು ಉಲ್ಲೇಖಿಸಿ ದೇಶದಲ್ಲಿ ಅಪರಾಧ ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ ಹೆಚ್ಚಿದೆ ಎಂದು ಹೇಳಲಾಗಿದೆ.

 

ಪೋಸ್ಟ್‌ರ್‌ನಲ್ಲಿ ಉಲ್ಲೇಖಿಸಿರುವ ಅಂಕಿ ಅಂಶಗಳು:

ಪೋಸ್ಟ್‌ ಕಾರ್ಡ್ ಕನ್ನಡ ಫೇಸ್‌ಬುಕ್‌ ಪೇಜ್‌ನಲ್ಲಿ ಬಳಕೆಯಾಗಿರುವ ಪೋಸ್ಟ್ರ್‌ವೊಂದರಲ್ಲಿ, ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ 18% (ಮುಸ್ಲಿಂ ಜನಸಂಖ್ಯೆಯ ಉಲ್ಲೇಖ) ಹೊಂದಿರುವ ಸಮುದಾಯವು ಅಪರಾಧ ಕೃತ್ಯಗಳಿಗೆ ಅತೀ ಹೆಚ್ಚು ಕೊಡುಗೆ ನೀಡುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

  • 98% ಅತ್ಯಾಚಾರಗಳು,
  • 95% ದರೋಡೆಗಳು,
  • 100% ಭಯೋತ್ಪಾದನೆ,
  • 300% ಜನಸಂಖ್ಯಾ ಸ್ಫೋಟ,
  • 800% ಸರ್ಕಾರಿ ಸೌಲಭ್ಯಗಳ ಬಳಕೆ,
  • ಆದರೆ 0.1% ತೆರಿಗೆ ಮಾತ್ರ ಶೂನ್ಯ ಎಂಬ ಅರ್ಥ ಬರುವಂತೆ, ಇದೆಲ್ಲದಕ್ಕೂ ಮುಸ್ಲಿಂ ಸಮುದಾಯವು ಹೊಣೆಯಾಗಿದೆ ಎಂದು ಪೋಸ್ಟ್ ನಲ್ಲಿ ಪ್ರತಿಪಾದಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಧರ್ಮದ ಆಧಾರದಲ್ಲಿ ಅಪರಾಧ ಕೃತ್ಯಗಳನ್ನು ಪರಿಗಣಿಸುವುದಿಲ್ಲ:

ಪೋಸ್ಟ್‌ನಲ್ಲಿ ಪ್ರತಿಪಾದಿಸಿರುವ ಅಪರಾಧ ಕೃತ್ಯಗಳ ಅಂಕಿ ಅಂಶಗಳನ್ನು ಭಾರತದಲ್ಲಿ ದಾಖಲೀಕರಿಸುವ ಏಜನ್ಸಿ ಎಂದರೆ ಅದು (NCRB)  ರಾಷ್ಡ್ರೀಯ ಅಪರಾಧ ದಾಖಲೆಗಳ ಬ್ಯೂರೋ. ಇದರ ಪ್ರಕಾರ  ಭಾರತದಲ್ಲಿ ಧರ್ಮಾಧಾರಿತವಾಗಿ ಯಾವುದೇ ಅಪರಾಧ ಕೃತ್ಯಗಳನ್ನು ಪರಿಗಣಿಸಲಾಗುವುದಿಲ್ಲ ಬದಲಿಗೆ ಅದೊಂದು ಅಪರಾಧ ಕೃತ್ಯ ಎಂದಷ್ಟೆ ದಾಖಲಿಸುತ್ತದೆ.

ಎನ್‌ಸಿಆರ್‌ಬಿ ತನ್ನ ವೆಬ್‌ಸೈಟ್‌ನಲ್ಲಿ ‘ಕ್ರೈಮ್ ಇನ್ ಇಂಡಿಯಾ 2020‘ ವರದಿಯನ್ನು ಬಿಡುಗಡೆ ಮಾಡಿದೆ. ಆ ಡಾಕ್ಯುಮೆಂಟ್‌ ಪ್ರಕಾರ, ಅಪರಾಧ ಕೃತ್ಯಗಳನ್ನು ಧರ್ಮದ ಆಧಾರದಲ್ಲಿ ದಾಖಲಿಸುವುದಿಲ್ಲ ಹಾಗೂ ಧರ್ಮದ ಗುರುತಾಗಿ ಯಾವುದೇ ಉಲ್ಲೇಖವಿಲ್ಲ. ಹಾಗೆಯೇ ಅಧ್ಯಾಯ 3 ರ ‘ಮಹಿಳೆಯರ ವಿರುದ್ಧದ ಅಪರಾಧ’ದಲ್ಲೂ ಯಾವುದೇ ಧರ್ಮದ ಉಲ್ಲೇಖವಿಲ್ಲ. 2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ ಮುಸ್ಲಿಂ ಜನಸಂಖ್ಯೆಯು 14% ಕ್ಕಿಂತ ಹೆಚ್ಚು

ಈ ಹಿಂದೆ, 2016-18ರಲ್ಲಿ 84,374 ಅತ್ಯಾಚಾರಗಳಲ್ಲಿ 81000 ಮುಸ್ಲಿಮರು ಮಾಡಿದ್ದಾರೆ ಎಂಬ ಸುದ್ದಿಯೊಂದು ಸಾಕಷ್ಟು ವೈರಲ್ ಆಗಿತ್ತು. ಆಗ ಸುದ್ದಿಯ ಕುರಿತು ಲೇಖನವನ್ನು ಫ್ಯಾಕ್ಟ್‌ ಚೆಕ್ ಮಾಡುವ ಮೂಲಕ ಅದು ತಪ್ಪು ಎಂದು ತಿಳಿಸಲಾಗಿತ್ತು.

NCRB ಸಂಗ್ರಹಿಸಿದ ಮತ್ತು 31 ಡಿಸೆಂಬರ್ 2020 ರವರೆಗೆ ನವೀಕರಿಸಿದ ಮಾಹಿತಿಯ ಪ್ರಕಾರ, 72% ಕ್ಕಿಂತ ಹೆಚ್ಚು ವಿಚಾರಣಾಧೀನ ಕೈದಿಗಳು ಹಿಂದೂಗಳು ಮತ್ತು ಸುಮಾರು 21% ಮುಸ್ಲಿಮರು.

ತೆರಿಗೆ ಕೊಡುಗೆ:

ಎರಡು ರೀತಿಯ ತೆರಿಗೆಗಳಿದ್ದು ಒಂದು ನೇರ ತೆರಿಗೆ, ಮತ್ತೊಂದು ಪರೋಕ್ಷ ತೆರಿಗೆ. ಭಾರತ ಸರ್ಕಾರವು ಧರ್ಮದ ಆಧಾರದ ಮೇಲೆ ನೇರ ಅಥವಾ ಪರೋಕ್ಷ ತೆರಿಗೆ ಡೇಟಾವನ್ನು ಬಿಡುಗಡೆ ಮಾಡುವುದಿಲ್ಲ. ಆದಾಯ ತೆರಿಗೆ ಇಲಾಖೆ ನೇರ ತೆರಿಗೆ ಸಂಗ್ರಹದ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ, ಆದರೆ ಇವುಗಳು ಧರ್ಮವನ್ನು ಆಧರಿಸಿಲ್ಲ. ಆದಾಯ ತೆರಿಗೆ ರಿಟರ್ನ್ ಅಂಕಿಅಂಶಗಳಲ್ಲಿ ಅಳವಡಿಸಿಕೊಂಡ ವಿಧಾನವು ಯಾವುದೇ ಧರ್ಮವನ್ನು ಆಧರಿಸಿಲ್ಲ. ಸರಕು ಮತ್ತು ಸೇವಾ ತೆರಿಗೆ (GST) ಗೆ ಸಂಬಂಧಿಸಿದ ಡೇಟಾವು ಯಾವುದೇ ಧರ್ಮವನ್ನು ಆಧರಿಸಿಲ್ಲ.

ಈ ಹಿಂದೆ, ಭಾರತದಲ್ಲಿ ಸಿಖ್ಖರು 33% ಆದಾಯ ತೆರಿಗೆಯನ್ನು ಕೊಡುಗೆ ನೀಡುತ್ತಾರೆ ಎಂಬ ವೈರಲ್ ಸುದ್ದಿಯನ್ನು 2019 ರಲ್ಲಿ ಫ್ಯಾಕ್ಟ್ಲಿಯು ಫ್ಯಾಕ್ಟ್‌ಚೆಕ್ ಲೇಖನದ ಮೂಲಕ ಸುದ್ದಿ ಸುಳ್ಳು ಎಂದು ನಿರೂಪಿಸಿತ್ತು. ನೇರ ತೆರಿಗೆ ಸಂಗ್ರಹದ ಡೇಟಾವನ್ನು ಧರ್ಮದ ಆಧಾರದ ಮೇಲೆ ಬಿಡುಗಡೆ ಮಾಡಲಾಗಿಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, POSTCARD ಕನ್ನಡ  ಇದೊಂದು ಬಲಪಂಥೀಯ ಸಿದ್ದಾಂತವನ್ನು ಪ್ರತಿಪಾದಿಸುವ ಗುಂಪಾಗಿದ್ದುತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಿರುವ ಪೋಸ್ಟ್‌ರ್ ಧಾರ್ಮಿಕ ಅಶಾಂತಿಯನ್ನುಟ್ಟು ಮಾಡುವಂತಿದೆ. ಸದಾ ಮುಸ್ಲಿಂ ದ್ವೇಷವನ್ನು ಹುಟ್ಟಿಸುವಂತ, ಮುಸ್ಲಿಮರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತ ಬಲಪಂಥೀಯ ಪ್ರೊಪಗ್ಯಾಂಡವನ್ನಾಗಿ ಮಾಡುತ್ತಿರುತ್ತದೆ.

ದೇಶದ ಸರ್ಕಾರವೇ ಈ ಧರ್ಮದ ಆಧಾರದಲ್ಲಿ ಅಪರಾಧ ಕೃತ್ಯಗಳನ್ನು ಪರಿಗಣಿಸುದಿಲ್ಲ ಎಂದ ಮೇಲೆ, ಈ ಫೇಸ್‌ಬುಕ್ ಪೇಜ್ ಹ್ಯಾಂಡಲ್ ಮಾಡುವ ತಂಡಕ್ಕೆ ಈ ಮಾಹಿತಿಯು ಲಭಿಸಿದ್ದಾರೂ ಹೇಗೆ? ಇವರು ಹೇಳುವ ಅಂಕಿಅಂಶಗಳಿಗೆ ಯಾವುದೇ ಅಧಿಕೃತ ಆಧಾರಗಳಿಲ್ಲ, ತಮ್ಮ ಮನಸ್ಸಿಗೆ ತೋಚಿದ್ದನ್ನು ಹೇಳುವ ಇವರು, ಯಾವ  ದಾಖಲೆಗಳನ್ನು ಪ್ರಸೆಂಟ್‌ ಮಾಡುವುದಿಲ್ಲ. ಹಾಗಾಗಿ ಈಗ ಪೋಸ್ಟರ್‌ನಲ್ಲಿ ಪ್ರತಿಪಾದಿಸಿರುವ ಮುಸ್ಲಿಂ ಕುರಿತಾದ ಅಪರಾಧ ಕೃತ್ಯಗಳು ಸುಳ್ಳು ಮತ್ತು ಭಾರತ ಸರ್ಕಾರವು ಧರ್ಮದ ಆಧಾರದ ಮೇಲೆ ಅಪರಾಧ ಅಂಕಿಅಂಶಗಳು ಮತ್ತು ತೆರಿಗೆ-ಸಂಬಂಧಿತ ಡೇಟಾವನ್ನು ಬಿಡುಗಡೆ ಮಾಡುವುದಿಲ್ಲ. ಆದ್ದರಿಂದ ಇಂತಹ ಪೋಸ್ಟ್‌ಗಳನ್ನು ನಂಬುವ ಮುಂಚೆ ಎಚ್ಚರವಿರಲಿ.

ಕೃಪೆ:ಫ್ಯಾಕ್ಟ್ಟ್ಲಿ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅಯೋಧ್ಯೆಯಲ್ಲಿ ಹಿಂದೂ ರಾಷ್ಟ್ರದ ಬೇಡಿಕೆ ಇಟ್ಟು ಮೆರವಣಿಗೆ ನಡೆಸಿದ್ದಾರೆ ಎಂಬುದು ಸುಳ್ಳು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights