‘ಮುನಿ’ದು ‘ಕೈ’ ಎತ್ತಿದವರ್ಯಾರು..? : ಆರ್.ಆರ್ ನಗರ ಚುನಾವಣೆ ಪ್ರಚಾರದ ವೇಳೆ ಗಲಾಟೆ…!
ಆರ್ ಆರ್ ನಗರ ಚುನಾವಣೆ ಪ್ರಚಾರದ ವೇಳೆ ಗಲಾಟೆಯಾಗಿದ್ದು, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಬೆಂಗಳೂರು ನಂದಿನಿ ಲೇಔಟ್ ನಲ್ಲಿ ಈ ಬಗ್ಗೆ ದೂರು ದಾಖಲಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬೀಜೆಪಿ ಹಲ್ಲೆ ಆರೋಪಿಸಿ ಕೈ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಈ ವೇಳೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರಿಗೆ ಸಂಸದ ಡಿಕೆ ಸುರೇಶ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ‘ನಿಮ್ ಮುನಿರತ್ನ ಅವರಿಗೆ ಅಣ್ಣವ್ರು ಕಾಯ್ತಾವರೆ ಅಂತ ಹೇಳಿ’. ‘ನಮ್ಮ ಕಾರ್ಯಕರ್ತರಿಗೆ ಹೆದ್ರೋಸೋದು ಬೆದ್ರೋಸೋದು ಮಾಡಿದ್ರೆ ಪೊಲೀಸ್ ಠಾಣೆ ಮುಂದೆ ಚುನಾವಣೆ ನಡೆಯುತ್ತದೆ’ ಎಂದು ಹೇಳಿ ಎಂದು ಬಹಿರಂಗವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರಚಾರಕ್ಕೆ ಅಡ್ಡಿ ಪಡಿಸಿ ಓಡರ್ ಐಡಿಯನ್ನು ಹರಿದು ಹಾಕಿ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ, ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ರಾಜರಾಜೇಶ್ವ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದಾರೆ.
‘ನ್ಯಾಯುತವಾಗಿ ಚುನಾವಣೆ ನಡೆಯಲಿ. ಜಾತಿ ಕೇಳಿ ಮತ ಕೇಳುತ್ತಿದ್ದಾರೆ. ಫೋನ್ ನಂಬರ್ ಬರೆದುಕೊಳ್ಳುತ್ತಿದ್ದಾರೆ. 4000 ಜನ ಹೊರಗಡೆಯಿಂದ ಕರೆದುಕೊಂಡು ಬಂದಿದ್ದಾರೆ. ಓಟರ್ ಐಡಿ ಕಲೆಕ್ಟ್ ಮಾಡಿಕೊಳ್ಳುತ್ತಿದ್ದಾರೆ ಎಂದು’ ಬಿಜೆಪಿ ಆರ್.ಆರ್ ನಗರ ಅಭ್ಯರ್ಥಿ ಮುನಿರತ್ನ ಆರೋಪಿಸಿದ್ದಾರೆ.