ಬಂಡಿಪುರದಲ್ಲಿ ರಾತ್ರಿ ಸಫಾರಿ ಮಾಡಿದ ನಟ ಧನ್ವೀರ್ : ಜನಸಾಮಾನ್ಯರ ಆಕ್ರೋಶ…!
ಪ್ರಧಾನಿ ಮೋದಿಯಂತೆ ಕಾರ್ಮಿಕರ ಪಾದ ತೊಳೆದ ಹೆಸರಾಗಿದ್ದ ‘ಬಜಾರ್’ ಸಿನಿಮಾದ ನಟ ಧನ್ವೀರ್ ಸದ್ಯ ಮತ್ತೊಂದು ಸುದ್ದಿಯಲ್ಲಿ ಸಿಕ್ಕಿಕೊಂಡಿದ್ದಾರೆ.
ಬಂಡಿಪುರದಲ್ಲಿ ರಾತ್ರಿ ವೇಳೆ ಸಫಾರಿ ಕಾನೂನು ಬಾಹಿರವಾಗಿದ್ದರೂ ನಟ ಧನ್ವೀರ್ ರಾತ್ರಿ ವೇಳೆ ಸಫಾರಿ ಮಾಡಿ ಕಾಡು ಪ್ರಾಣಿ ಹುಲಿ ವೀಡಿಯೋ ಹಂಚಿಕೊಂಡಿರುವುದು ಸದ್ಯ ಭಾರೀ ಆಕ್ರೋಶಕ್ಕೆ ಗುರಿಯಾಗಿದೆ.
ಜನಸಾಮಾನ್ಯರಿಗೆ ಒಂದು ನ್ಯಾಯ ಸ್ಟಾರ್ ಗಳಿಗೊಂದು ನ್ಯಾಯಾನಾ ಎಂದು ಜನ ಆಕ್ರೋಶ ವ್ಯಕ್ತವಾಗಿದೆ. ಬಂಡಿಪುರದಲ್ಲಿ ಕಾಡು ಪ್ರಾಣಿಗಳ ಹಿತದೃಷ್ಟಿಯಿಂದ ರಾತ್ರಿವೇಳೆ ಸಂಚಾರ ಬಂದ್ ಮಾಡಲಾಗಿದೆ. ಆದರೂ ಕೂಡ ನಟ ನಿಯಮ ಉಲ್ಲಂಘಸಿ ರಾತ್ರಿ ವೇಳೆ ಬಂಡಿಪುರಕ್ಕೆ ಹೋಗಿದ್ದು ಮಾತ್ರವಲ್ಲದೇ ಕಾಡು ಪ್ರಾಣಿ ಹುಲಿಯ ವೀಡಿಯೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜನ ಸಾಮಾನ್ಯರನ್ನು ತಡೆಯುವ ಬಂಡಿಪುದಲ್ಲಿ ಸಂಚಾರ ತಡೆಯುವ ಅಧಿಕಾರಿಗಳು ನಟನನ್ನು ಹೇಗೆ ಒಳಗಡೆ ಬಿಟ್ರು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಬಂಡಿಪುರ ಕಾಡು ಮದ್ಯ ಸಂಚಾರ ಮಾಡಬೇಕು ಅಂದರೆ ಅದಕ್ಕೆ ಬೆಳಿಗ್ಗೆ ಹಾಗೂ ಸಂಜೆ ಮಾತ್ರ ಸಮಯ ನಿಗದಿಯಾಗಿದೆ. ಹೀಗಿರುವಾಗ ನಟ ಕಾಡಿನೊಳಗೆ ಅದು ಹೇಗೆ ಹೋದ್ರು ಅನ್ನೋದು ಸದ್ಯಕ್ಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನೂ ಈ ಬಗ್ಗೆ ಮಾತನಾಡಿದ ಬಂಡಿಪುರ ನಿರ್ದೇಶಕರಾದ ಬಾಲಚಂದ್ರ, ” ನಟ ನಿಜವಾಗಲೂ ಬಂಡಿಪುರದ ವೀಡಿಯೋವನ್ನೇ ಹಂಚಿಕೊಂಡಿದ್ದಾರಾ ಅನ್ನೋದನ್ನ ಪರಿಶೀಲಿಸಿ ಅದು ನಿಜವಾದರೆ ಖಂಡಿತ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.