ಆರ್ ಆರ್ ನಗರ ಉಪಚುನಾವಣೆ : ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಡಿ ಬಾಸ್ ಮತಭೇಟೆ…!
ರಾಜರಾಜೇಶ್ವರಿ ನಗರದಲ್ಲಿಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಡಿ ಬಾಸ್ ಮತಭೇಟೆಗಿಳಿದಿದ್ದಾರೆ. ನೆಚ್ಚಿನ ನಟನನ್ನು ನೋಡಲು ಜನ ಕಿಕ್ಕಿರಿದು ಸೇರಿದ್ದು ಪೊಲೀಸರು ಜನರನ್ನು ಚದುರಿಸಲು ಹೈರಾಣಾಗಿ ಹೋಗಿದ್ದಾರೆ.
ಈ ವೇಳೆ ಮಾದ್ಯಮದೊಂದಿಗೆ ಮಾತನಾಡಿದ ನಟ ದರ್ಶನ, ” ನಾನು ಯಾವಾಗಲೂ ಪಕ್ಷ ನೋಡಿ ಮತಯಾಚನೆ ಮಾಡುವುದಿಲ್ಲ. ವ್ಯಕ್ತಿಯನ್ನು ನೋಡಿ ಮತಯಾಚಿಸುತ್ತೇನೆ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೇ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಾಕಷ್ಟು ಉತ್ತಮ ಕಾರ್ಯಗಳನ್ನು ಮುನಿರತ್ನ ಮಾಡಿದ್ದಾರೆಂದು ದಚ್ಚು ಹೇಳಿದ್ದಾರೆ.
ರೈಲ್ವೇ ನಿಲ್ದಾಣದಿಂದ ಆರಂಭವಾದ ರೋಡ್ ಷೋನಲ್ಲಿ ಖ್ಯಾತ ನಿರ್ಮಾಪಕರಾದ ಮುನಿರತ್ನ ಅವರ ಪರ ಇಂದು ಬೆಳಿಗ್ಗೆ ರ್ಯಾಲಿಯಲ್ಲಿ ಭಾಗವಹಿಸಿದ ದಚ್ಚು ಜೊತೆ ಅಮೂಲ್ಯ ದಂಪತಿಗಳು ಕೈ ಜೋಡಿಸಿದ್ದಾರೆ. ಆರ್ ಆರ್ ನಗರ ವ್ಯಾಪ್ತಿಯ 9 ವಾರ್ಡ್ಗಳಲ್ಲಿ ಮುನಿರತ್ನ ಜೊತೆಯಲ್ಲಿ ದರ್ಶನ್ ರೋಡ್ ಶೋ ನಡೆಸಲಿದ್ದು, ದರ್ಶನ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಆರ್ ಅಶೋಕ್ ಸಾಥ್ ಕೊಡಲಿದ್ದಾರೆ. ಹಲವು ಕಡೆ ಸಾರಥಿ ಪ್ರಚಾರ ಭಾಷಣ ಸಹ ಮಾಡಲಿದ್ದಾರೆ.