ರಾಜ್ಯೋತ್ಸವ ಪ್ರಶಸ್ತಿ ಘೋಷಣೆ: ವಿಜೇತರ ಪಟ್ಟಿ ಹೀಗಿದೆ!
65ನೇ ಕನ್ನಡ ರಾಜ್ಯೋತ್ಸವದಂದು ರಾಜ್ಯೋತ್ಸವ ಪ್ರಶಸ್ತಿ ರದ್ದಾಗಬಹುದು ಎಂಬ ಗುಮಾನಿಗಳು ಹರಿದಾಡಿದ್ದವು, ಅಂತೂ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿರುವ ಕರ್ನಾಟಕ ಸರ್ಕಾರ, ಈ ಬಾರಿಯ ರಾಜ್ಯೋತ್ಸವದಂದು 65 ಸಾಧಕರು ಮತ್ತು ಸಂಘ-ಸಂಸ್ಥೆಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲು ನಿರ್ಧರಿಸಿದೆ.
ಬುಧವಾರ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ. ರವಿ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಒಟ್ಟು 26 ಕ್ಷೇತ್ರಗಳ 60 ಸಾಧಕರು ಹಾಗೂ 5 ಸಂಘ -ಸಂಸ್ಥೆಗಳಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದೆ. ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದು ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿದೆ. ನವೆಂಬರ್ 7ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಪ್ರಶಸ್ತಿ ವಿಜೇತರ ವಿವರಗಳು ಹೀಗಿವೆ,
ಕ್ರಮ ಸಂಖ್ಯೆ | ಹೆಸರು | ಕ್ಷೇತ್ರ |
1 | ಪ್ರೊ. ಸಿ.ಪಿ. ಸಿದ್ಧಾಶ್ರಮ, ಧಾರವಾಡ | ಸಾಹಿತ್ಯ |
2 | ವಿ. ಮುನಿ ವೆಂಕಟ್ಟಪ್ಪ, ಕೋಲಾರ | ಸಾಹಿತ್ಯ |
3 | ರಾಮಣ್ಣ ಬ್ಯಾಟಿ, ಗದಗ | ಸಾಹಿತ್ಯ |
4 | ವಲೇರಿಯನ್ ಡಿಸೋಜ (ವಲ್ಲಿವಗ್ಗ), ದಕ್ಷಿಣ ಕನ್ನಡ | ಸಾಹಿತ್ಯ |
5 | ಡಿ.ಎನ್. ಅಕ್ಕಿ, ಯಾದಗಿರಿ | ಸಾಹಿತ್ಯ |
6 | ಹಂಬಯ್ಯ ನೂಲಿ, ರಾಯಚೂರು | ಸಂಗೀತ |
7 | ಅನಂತ ತೇರದಾಳ, ಬೆಳಗಾವಿ | ಸಂಗೀತ |
8 | ಬಿ.ವಿ. ಶ್ರೀನಿವಾಸ್, ಬೆಂಗಳೂರು ನಗರ | ಸಂಗೀತ |
9 | ಗಿರಿಯಾ ನಾರಾಯಣ, ಬೆಂಗಳೂರು ನಗರ | ಸಂಗೀತ |
10 | ಕೆ. ಲಿಂಗಪ್ಪ ಶೇರಿಗಾರ ಕಟೀಲು, ದಕ್ಷಿಣ ಕನ್ನಡ | ಸಂಗೀತ |
11 | ಕೆ.ಎನ್. ಭಟ್, ಬೆಂಗಳೂರು | ನ್ಯಾಯಾಂಗ |
12 | ಎಂ.ಕೆ. ವಿಜಯಕುಮಾರ್, ಉಡುಪಿ | ನ್ಯಾಯಾಂಗ |
13 | ಸಿ. ಮಹೇಶ್ವರನ್, ಮೈಸೂರು | ಮಾಧ್ಯಮ |
14 | ಟಿ. ವೆಂಕಟೇಷ್ (ಈ ಸಂಜೆ), ಬೆಂಗಳೂರು | ಮಾಧ್ಯಮ |
15 | ಡಾ|| ಎ.ಎಸ್.ಚಂದ್ರಶೇಖರ, ಮೈಸೂರು | ಯೋಗ |
16 | ಎಂ.ಎನ್.ಷಡಕ್ಷರಿ, ಚಿಕ್ಕಮಗಳೂರು | ಶಿಕ್ಷಣ |
17 | ಡಾ|| ಆರ್. ರಾಮಕೃಷ್ಣ, ಚಾಮರಾಜನಗರ | ಶಿಕ್ಷಣ |
18 | ಡಾ|| ಎಂ.ಜಿ. ಈಶ್ವರಪ್ಪ, ದಾವಣಗೆರೆ | ಶಿಕ್ಷಣ |
19 | ಡಾ|| ಪುಟ್ಟಸಿದ್ದಯ್ಯ, ಮೈಸೂರು | ಶಿಕ್ಷಣ |
20 | ಅಶೋಕ್ ಶೆಟ್ಟರ್, ಬೆಳಗಾವಿ | ಶಿಕ್ಷಣ |
21 | ಡಿ.ಎಸ್. ದಂಡಿನ್, ಗದಗ | ಶಿಕ್ಷಣ |
22 | ಕುಸುಮೋದರ ದೇರಣ್ಣ ಶೆಟ್ಟಿ ಕಲ್ತಡ್ಕ, ದಕ್ಷಿಣ ಕನ್ನಡ | ಹೊರನಾಡು ಕನ್ನಡಿಗ |
23 | ವಿದ್ಯಾ ಸಿಂಹಾಚಾರ್ಯ ಮಾಹುಲಿ, ಮುಂಬಯಿ | ಹೊರನಾಡು ಕನ್ನಡಿಗ |
24 | ಎಚ್.ಬಿ. ನಂಜೇಗೌಡ, ತುಮಕೂರು | ಕ್ರೀಡೆ |
25 | ಉಷಾರಾಣಿ, ಬೆಂಗಳೂರು ನಗರ | ಕ್ರೀಡೆ |
26 | ಡಾ|| ಕೆ.ವಿ. ರಾಜು, ಕೋಲಾರ | ಸಂಕೀರ್ಣ |
27 | ನಂ. ವೆಂಕೋಬರಾವ್, ಹಾಸನ | ಸಂಕೀರ್ಣ |
28 | ಡಾ|| ಕೆ.ಎಸ್. ರಾಜಣ್ಣ, ಮಂಡ್ಯ | ಸಂಕೀರ್ಣ |
29 | ವಿ. ಲಕ್ಷ್ಮೀ ನಾರಾಯಣ (ನಿರ್ಮಾಣ್), ಮಂಡ್ಯ | ಸಂಕೀರ್ಣ |
30 | ಯುತ್ ಫಾರ್ ಸೇವಾ, ಬೆಂಗಳೂರು ನಗರ | ಸಂಘ-ಸಂಸ್ಥೆ |
31 | ದೇವದಾಸಿ ಸ್ವಾವಲಂಬನ ಕೇಂದ್ರ, ಬಳ್ಳಾರಿ | ಸಂಘ-ಸಂಸ್ಥೆ |
32 | ಬೆಟರ್ ಇಂಡಿಯಾ, ಬೆಂಗಳೂರು | ಸಂಘ-ಸಂಸ್ಥೆ |
33 | ಯುವ ಬ್ರಿಗೇಡ್, ಬೆಂಗಳೂರು ಗ್ರಾಮಾಂತರ | ಸಂಘ-ಸಂಸ್ಥೆ |
34 | ಧರ್ಮೋತ್ಥಾನ ಟ್ರಸ್ಟ್ ಧರ್ಮಸ್ಥಳ, ದಕ್ಷಿಣ ಕನ್ನಡ | ಸಂಘ-ಸಂಸ್ಥೆ |
35 | ಎನ್.ಎಸ್. (ಕುಂದರಗಿ) ಹೆಗಡೆ, ಉತ್ತರ ಕನ್ನಡ | ಸಮಾಜಸೇವೆ |
35 | ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಚಿಕ್ಕಮಗಳೂರು | ಸಮಾಜಸೇವೆ |
37 | ಮಣೆಗಾರ್ ಮೀರಾನ್ ಸಾಹೇಬ್, ಉಡುಪಿ | ಸಮಾಜಸೇವೆ |
38 | ಮೋಹಿನಿ ಸಿದ್ದೇಗೌಡ, ಚಿಕ್ಕಮಗಳೂರು | ಸಮಾಜಸೇವೆ |
39 | ಡಾ|| ಅಶೋಕ್ ಸೊನ್ನದ್, ಬಾಗಲಕೋಟೆ | ವೈದ್ಯಕೀಯ |
40 | ಡಾ|| ಬಿ.ಎಸ್. ಶ್ರೀನಾಥ, ಶಿವಮೊಗ್ಗ | ವೈದ್ಯಕೀಯ |
41 | ಡಾ|| ಎ. ನಾಗರತ್ನ, ಬಳ್ಳಾರಿ | ವೈದ್ಯಕೀಯ |
42 | ಡಾ|| ವೆಂಕಟಪ್ಪ, ರಾಮನಗರ | ವೈದ್ಯಕೀಯ |
43 | ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್, ಬೀದರ್ | ಕೃಷಿ |
44 | ಎಸ್ವಿ ಸುಮಂಗಲಮ್ಮ ವೀರಭದ್ರಪ್ಪ, ಚಿತ್ರದುರ್ಗ | ಕೃಷಿ |
45 | ಡಾ|| ಸಿದ್ರಾಮಪ್ಪ ಬಸವಂತರಾವ್ ಪಾಟೀಲ್ಮ ಕಲಬುರಗಿ | ಕೃಷಿ |
46 | ಅಮರ ನಾರಾಯಣ, ಚಿಕ್ಕಬಳ್ಳಾಪುರ | ಪರಿಸರ |
47 | ಎನ್.ಡಿ. ಪಾಟೀಲ್, ವಿಜಯಪುರ | ಪರಿಸರ |
48 | ಪ್ರೊ. ಉಡುಪಿ ಶ್ರೀನಿವಾಸ, ಉಡುಪಿ | ವಿಜ್ಞಾನ/ತಂತ್ರಜ್ಞಾನ |
49 | ಡಾ|| ಚಿಂದಿ ವಾಸುದೇವಪ್ಪ, ಶಿವಮೊಗ್ಗ | ವಿಜ್ಞಾನ/ತಂತ್ರಜ್ಞಾನ |
50 | ಡಾ|| ಸಿ.ಎನ್. ಮಂಚೇಗೌಡ, ಬೆಂಗಳೂರು ನಗರ | ಸಹಕಾರ |
51 | ಕೆಂಪವ್ವ ಹರಿಜನ, ಬೆಳಗಾವಿ | ಬಯಲಾಟ |
52 | ಚೆನ್ನಬಸಪ್ಪ ಬೆಂಡಿಗೇರಿ, ಹಾವೇರಿ | ಬಯಲಾಟ |
53 | ಬಂಗಾರ್ ಆಚಾರಿ, ಚಾಮರಾಜನಗರ | ಯಕ್ಷಗಾನ |
54 | ಎಂ.ಕೆ. ರಮೇಶ್ ಆಚಾರ್ಯ, ಶಿವಮೊಗ್ಗ | ಯಕ್ಷಗಾನ |
55 | ಅನಸೂಯಪ್ಪ, ಹಾಸನ | ರಂಗಭೂಮಿ |
56 | ಎಚ್. ಷಡಾಕ್ಷರಪ್ಪ, ದಾವಣಗೆರೆ | ರಂಗಭೂಮಿ |
57 | ತಿಪ್ಪೇಸ್ವಾಮಿ, ಚಿತ್ರದುರ್ಗ | ರಂಗಭೂಮಿ |
58 | ಬಿ.ಎಸ್. ಬಸವರಾಜ್, ತುಮಕೂರು | ಚಲನಚಿತ್ರ |
59 | ಆಪಾಢಂಡ ತಿಮ್ಮಯ್ಯ ರಘು (ಎ.ಟಿ. ರಘು), ಕೊಡಗು | ಚಲನಚಿತ್ರ |
60 | ಎಂ.ಜೆ. ವಾಚೇದ್ ಮಠ, ಧಾರವಾಡ | ಚಿತ್ರಕಲೆ |
61 | ಗುರುರಾಜ ಹೊಸಕೋಟೆ, ಬಾಗಲಕೋಟೆ | ಜಾನಪದ |
62 | ಡಾ||ಹಂಪನಹಳ್ಳಿ ತಿಮ್ಮೇಗೌಡ, ಹಾಸನ | ಜಾನಪದ |
63 | ಎನ್.ಎಸ್. ಜನಾರ್ಧನ ಮೂರ್ತಿ, ಮೈಸೂರು | ಶಿಲ್ಪಕಲೆ |
64 | ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ್ | ನೃತ್ಯ |
65 | ಕೇಶಪ್ಪ ಶಿಳ್ಳೆಕ್ಯಾತರಮ, ಕೊಪ್ಪಳ | ಜಾನಪದ/ತೊಗಲು ಗೊಂಬೆಯಾಟ |
ಇದನ್ನೂ ಓದಿ: ಎರಡು ದಿನಗಳಲ್ಲಿ ನಿವೃತ್ತಿ ಹೊಂದಲಿರುವ ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿದ ರಾಜ್ಯ ಸರ್ಕಾರ!