ಬಿಹಾರದಲ್ಲಿ ಸೋತರೂ ರಾಹುಲ್ ಪರನಿಂತ ಜನ: ಟ್ವಿಟರ್ನಲ್ಲಿ ನನ್ನ ನಾಯಕ ರಾಹುಲ್ಗಾಂಧಿ; ಟ್ರೆಂಡಿಂಗ್
ಇತ್ತೀಚೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನವನ್ನು ನೀಡುತ್ತಿದೆ. ಬಿಹಾರ ಚುನಾವಣೆ ಮತ್ತು ದೇಶಾದ್ಯಂತ ನಡೆದ ಹಲವು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗಳಿಸಿದ್ದು ಬೆರಳೆಣಿಕೆಯಷ್ಟು ಸ್ಥಾನಗಳು ಮಾತ್ರ. ಅಲ್ಲದೆ, ಕಾಂಗ್ರೆಸ್ ಒಳಗೆ ಭಿನ್ನಮತ ಶುರುವಾಗಿದ್ದು, ಅದು ಬಹಿರಂಗವಾಗಿಯೇ ಚರ್ಚೆಯಾಗುತ್ತಿದೆ. ಕಾಂಗ್ರೆಸ್ನ ಹಿರಿಯ ನಾಯಕರು ಕಾಂಗ್ರೆಸ್ ನಾಯಕತ್ವದ ವಿರುದ್ಧ ಸಿಡಿದಿದ್ದಾರೆ. ಇದೆಲ್ಲವೂ ಕಾಂಗ್ರೆಸ್ನ ಪ್ರಾಭಲ್ಯಕ್ಕೆ ದಕ್ಕೆ ಉಂಟು ಮಾಡುತ್ತಿದೆ. ಅದರೂ, ಇದೆಲ್ಲದರ ನಡುವೆಯೂ ಇಂದು (ನ. 17) ಟ್ವಿಟರ್ನಲ್ಲಿ ನನ್ನ ನಾಯಕ ರಾಹುಲ್ಗಾಂಧಿ (#MyLeaderRahulGandhi) ಹ್ಯಾಶ್ಟ್ಯಾಗ್ನೊಂದಿಗೆ ಕಾಂಗ್ರೆಸ್ ಬೆಂಬಲಿಗರು ಹಾಗೂ ರಾಹುಲ್ ಅಭಿಮಾನಿಗಳು ಟ್ರೆಂಡ್ ಮಾಡುತ್ತಿದ್ದಾರೆ.
ದೇಶಾದ್ಯಂತ ಕಾಂಗ್ರೆಸ್ನ ವರ್ಚಸ್ಸು ಕುಸಿಯುತ್ತಿದ್ದು, ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡಿದೆ. ಮತ್ತೂ ಹಲವೆಡೆ ಹೀನಾಯ ಸೋಲು ಕಂಡಿದೆ. ಹೀಗಿದ್ದರೂ ನಾವು ರಾಹುಲ್ಗಾಂಧಿಯನ್ನೇ ಬೆಂಬಲಿಸುತ್ತೇವೆ. ರಾಹುಲ್ ನಮ್ಮ ನಾಯಕ ಎಂದು ನೆಟ್ಟಿಗರು ಹೇಳಿದ್ದಾರೆ. ರಾಹುಲ್ಗಾಂಧಿಯನ್ನು ತಾವು ಯಾಕೆ ಬೆಂಬಲಿಸುತ್ತೇವೆ ಎಂಬುದಕ್ಕೆ ಕಾರಣವನ್ನೂ ಕೂಡ ಬರೆದು ರಾಹುಲ್ ಚಿತ್ರದ ಜೊತೆಗೆ #MyLeaderRahulGandhi ಎಂಬ ಹ್ಯಾಶ್ಟ್ಯಾಗ್ನೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ರಾಹುಲ್ಗಾಂಧಿ ವಿದ್ಯಾರ್ಥಿಗಳ ಬಗ್ಗೆ ಮಾತನಾಡುತ್ತಾರೆ. ಉದ್ಯೋಗ, ಅಭಿವೃದ್ದಿ, ರಕ್ಷಣೆ ಮತ್ತು ಗಡಿವಿಚಾರವಾಗಿ ಮಾತನಾಡುತ್ತಾರೆ. ರಾಜಕೀಯ, ಪರಿಸರ, ಆರ್ಥಿಕತೆ, ರೈತರ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ತಾವು ಅವರನ್ನು ಬೆಂಬಲಿಸುತ್ತೇವೆ ಎಂದು ನೀರಜ್ ಕುಂದನ್ ಎಂಬುವವರು ಬರೆದುಕೊಂಡಿದ್ದಾರೆ.
He talks about students.
He talks about jobs.
He talks about development.
He talks about security & border issues.
He talks about policies.
He talks about environment.
He talks about economy.
He talks about farmers.#MyLeaderRahulGandhi pic.twitter.com/dqrT3jx0rf— Neeraj Kundan (@Neerajkundan) November 17, 2020
ರಾಹುಲ್ ಗಾಂಧಿ ಎಂದಿಗೂ ರಾಜಕೀಯ ಜೀವನದಲ್ಲಿ ಸುಳ್ಳು ಹೇಳಿಲ್ಲ, ಅವರು ಅಭಿವೃದ್ಧಿ ಪರ ಎಂದು ಅಭಿಮಾನಿಗಳು ವಾದಿಸುತ್ತಿದ್ದಾರೆ. ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ದನಿ ಎತ್ತಬಲ್ಲ ಏಕೈಕ ನಾಯಕ ಎಂದು ಶ್ರೀನಿವಾಸ್ ಎಂಬುವವರು ಬರೆದುಕೊಂಡಿದ್ದಾರೆ.
One Man who never lied in Indian Politics.#MyLeaderRahulGandhi ❤️ pic.twitter.com/34pXnzDQBo
— Srinivas B V (@srinivasiyc) November 17, 2020
ರಾಹುಲ್ಗಾಂಧಿ ತಮ್ಮ ಜೀವನವನ್ನು ಸಾರ್ವಜನಿಕರಿಗಾಗಿ ಮುಡುಪಾಗಿಸಿದ್ದಾರೆ. ಬಡವರಿಗೆ , ಅಂಚಿಗೆ ತಳ್ಳಪಟ್ಟವರಿಗೆ, ನೊಂದವರಿಗೆ ನೆರವಾಗುವ ಅವರ ಬದ್ದತೆ ದೃಢವಾದುದು. ಇದು ವೈರಿಗಳಿಗೂ ಪ್ರೇರಣೆ ನೀಡುತ್ತದೆ ಎಂದು ಮುಹಮ್ಮದ್ ಎಂಬುವವರು ಬರೆದುಕೊಂಡಿದ್ದಾರೆ.
Shri @RahulGandhi has tirelessly dedicated his life to public service. His unwavering commitment to help the poor, marginalized and everyone in need inspires even the most staunch opponents. #MyLeaderRahulGandhi pic.twitter.com/q0f7RisKQY
— Muhammad (@muscatphoto) November 17, 2020
https://twitter.com/GauravPandhi/status/1328580020726591489?s=20
ಸತ್ಯದ ಪರ ನಿಲ್ಲುವ ನಾಯಕ ರಾಹುಲ್, ರಾಜಕೀಯ ಎದುರಾಳಿಗಳನ್ನೂ ಅಪ್ಪಿಕೊಳ್ಳುವಷ್ಟು ಹೃದಯ ವೈಶಾಲ್ಯ ಉಳ್ಳವರು ಎಂದು ಹೇಳಲಾಗಿದೆ.
A person who can stand up for Truth, hug an opponent compassionately… that's#MyLeaderRahulGandhi pic.twitter.com/Ospvd2cpO7
— PadmaRani (@KPadmaRan1) November 17, 2020
ಬಿಹಾರ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಸೋಲುಂಡ ಕಾಂಗ್ರೆಸ್ಗೆ ಇಂದಿನ ಟ್ವಿಟರ್ ಅಭಿಮಾನಿಗಳ ಟ್ವೀಟ್ಗಳು ಮತ್ತಷ್ಟು ಹುರುಪು ಹೆಚ್ಚಿಸಿವೆ.
ಇದನ್ನೂ ಓದಿ: