ಕೇಂದ್ರದಿಂದ ನಮ್ಮೆದೆಗೆ ಗುಂಡು ಅಥವಾ ನ್ಯಾಯ ದೊರೆಯಲಿದೆ: ರೈತ ಹೋರಾಟಗಾರ
ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ದ ರೈತರ ಹೋರಾಟ 07ನೇ ದಿನಕ್ಕೆ ಕಾಲಿಟ್ಟಿದೆ. ನಿನ್ನೆ (ಮಂಗಳವಾರ) ಸರ್ಕಾರ ಮತ್ತು ರೈತರ ನಡುವೆ ನಡೆದ ಮಾತುಕತೆ ಮುರಿದು ಬಿದ್ದಿದೆ. ನಿನ್ನೆ ಮಾತುಕತೆಯ ನಂತರ ಮಾತನಾಡಿದ ರೈತ ಮುಖಂಡ ಚಂದಾ ಸಿಂಗ್, ಸರ್ಕಾರದಿಂದ ರೈತರಿಗೆ ನ್ಯಾಯ ಅಥವಾ ನಮ್ಮ ಎದೆಗೆ ಗುಂಡು ಸಿಗಲಿದೆ. ನಮ್ಮ ಹೋರಾಟ ನಿಲ್ಲದೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಮಂಗಳವಾರದ ಸಭೆ ವಿಫಲವಾಗಿದೆ. ಮತ್ತು ಡಿ.3ರಂದು ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಆ ಸಭೆಯಲ್ಲಿ ನಮಗೆ ನ್ಯಾಯ ದೊರೆಯುವ ಭರವಸೆ ಇದೆ. ಕೊನೆಗೆ ಕೇಂದ್ರ ಸರ್ಕಾರ ನಮ್ಮ ಎದೆಗೆ ಗುಂಡು ಹೊಡೆದರೂ ಸರಿ ಎಂದು ಚಂದಾ ಸಿಂಗ್ ಮಾರ್ಮಿಕವಾಗಿ ನುಡಿದಿದ್ದಾರೆ.
ಇಂದಿನ ಸಭೆ ನಿರ್ದಿಷ್ಟ ನಿರ್ಣಯಕ್ಕೆ ಬರುವಲ್ಲಿ ವಿಫಲವಾಗಿರುವುದರಿಂದ, ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ. ಎಷ್ಟೇ ಸಂಕಷ್ಟಗಳು ಎದುರಾದರೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಸರ್ಕಾರದಿಂದ ಎದೆಗೆ ಗುಂಡು ಅಥವಾ ನ್ಯಾಯ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.
Our movement against Farm Laws will continue & we'll definitely take back something from the Govt, be it bullets or a peaceful solution. We'll come back for more discussions with them: Chanda Singh, Member of Farmers' Delegation who met Union Agriculture Minister in Delhi today pic.twitter.com/YgenF7koXN
— ANI (@ANI) December 1, 2020
ದೆಹಲಿಯಲ್ಲಿ ಗರಿಷ್ಟ ಮಿತಿ ತಲುಪಿರುವ ಚಳಿ ನಡುವೆಯೂ ರೈತರು ಜಗ್ಗದೆ-ಕುಗ್ಗದೆ ಹೋರಾಟ ಮುಂದುವರೆಸಿದ್ದಾರೆ. ಹರಿಯಾಣ-ದೆಹಲಿ ಗಡಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಧರಣಿ ಹೋರಾಟ ನಡೆಸುತ್ತಿದ್ದಾರೆ. ಕೃಷಿ ಕಾಯ್ದೆಗಳು ರದ್ದಾಗುವವರೆಗೂ ಹೋರಾಟ ನಿಲ್ಲದು ಎಂದು ರೈತರು ಪಟ್ಟು ಹಿಡಿದು ಹೋರಾಟ ನಡೆಸುತ್ತಿದ್ದಾರೆ.
ಡಿಸೆಂಬರ್ 03 ರಂದು ಸರ್ಕಾರ ಮತ್ತು ರೈತರ ನಡುವೆ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು, ಸಭೆಯಲ್ಲಿ ರೈತರಿಗೆ ಜಯ ಸಿಗುವುದೇ, ಇಲ್ಲ, ಸರ್ಕಾರ ತನ್ನ ಹೇರಿಕೆಯ ನಿರ್ಧಾರವನ್ನು ಮುಂದುವರೆಸುತ್ತದಾ ನೋಡಬೇಕಿದೆ.
ಇದನ್ನೂ ಓದಿ: ರಮ್ಯಾ, ವಾಜೀದ್ ಖಾನ್ ವಿವಾಹ: ಸಂಗಾತಿ ಆಯ್ಕೆ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಿಲ್ಲ; ಹೈಕೋರ್ಟ್