ಮೊಬೈಲ್ ಕಾರಣ: ಪ್ರೀತಿಸಿ ಮದುವೆಯಾಗಿದ್ದ ಯುವತಿ ಸೇರಿದ್ದು ಮಸಣಕ್ಕೆ
ಕ್ಷುಲ್ಲಕ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳ ನಡೆದಿದ್ದು, ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಆಕೆಯ ಗಂಡ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ.
07 ವರ್ಷಗಳ ಹಿಂದೆ ರಘು ಎಂಬಾತ ಸುಶ್ಮಿತಾ ಎನ್ನುವವರನ್ನು ಪ್ರೀತಿಸಿ ಮದುವೆಯಾಗಿದ್ದ. ನಂತರ, ಹೊಸಕೋಟೆಯ ತಾವರೆಕೆರೆ ಗ್ರಾಮದಲ್ಲಿ ವಾಸಿಸುತ್ತಿದ್ದರು.
ಕಳೆದ ಶನಿವಾರ, ಅವರಿಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳ ಪ್ರಾರಂಭವಾಗಿದ್ದು, ಕೊಲೆಗೆ ಹಂತಕ್ಕೆ ತಲುಪಿದೆ.
ಶನಿವಾರ ರಾತ್ರಿ ದಂಪತಿಗಳ ನಡುವೆ ಮೊಬೈಲ್ ಕಾರಣಕ್ಕೆ ಜಗಳ ಶುರುವಾಗಿದ್ದು, ಮಾತಿಗೆ ಮಾತು ಬೆಳೆದು, ಕೋಪಗೊಂಡ ರಘು ತನ್ನ ಪತ್ನಿಯ ಕತ್ತನ್ನು ಬರ್ಬರವಾಗಿ ಕೊಯ್ದಿದ್ದಾನೆ ಎಂದು ತಿಳಿದು ಬಂದಿದೆ.
ಆಕೆ ಸಾವನ್ನದ್ದು, ನಂತರ ಆರೋಪಿ ಪರಾರಿಯಾಗಿದ್ದಾನೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read Also: 05 ದಿನದಲ್ಲಿ 13 ಬಾರಿ ಸಾಮೂಹಿಕ ಅತ್ಯಾಚಾರ; 09 ಕಾಮುಕರಿಂದ ಬಾಲಕಿಗೆ ನರಕಯಾತನೆ!