ಯಶ್ ಪೋಷಕರು-ಗ್ರಾಮಸ್ಥರ ನಡುವೆ ಗಲಾಟೆ : ಠಾಣೆಗೆ ಭೇಟಿ ನೀಡಿದ ರಾಮಾಚಾರಿ!
ಯಶ್ ಪೋಷಕರು ಮತ್ತು ಗ್ರಾಮಸ್ಥರನ ನಡುವೆ ಗಲಾಟೆ ಜಮೀನಿನಲ್ಲಿ ರಸ್ತೆ ನಿರ್ಮಿಸುವ ವಿಚಾರಕ್ಕೆ ಗಲಾಟೆ ನಡೆದಿದೆ.
ಯಶ್ ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರಕ್ಕೆ ಗ್ರಾಮಸ್ಥರು ಹಾಗೂ ಯಶ್ ಸಂಬಂಧಿಕರು ನಡುವೆ ಕೈ ಕೈ ಮುಲಾಯಿಸಿ ಗಲಾಟೆಯಾಗಿದೆ. ಗ್ರಾಮಸ್ಥರು ನಮ್ಮ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಬಿಡುವುದಿಲ್ಲ ಎಂದು ಯಶ್ ಸಂಬಂಧಿಕರು ಗಲಾಟೆ ಮಾಡಿದ್ದಾರೆ. ಹೀಗಾಗಿ ಹಾಸನ ಜಿಲ್ಲೆಯ ತಮ್ಮೇನಹಳ್ಳಿ ಗ್ರಾಮದ ದುದ್ದಾ ಪೊಲೀಸ್ ಠಾಣೆಗೆ ನಟ ಯಶ್ ಭೇಟಿ ನೀಡಿದ್ದಾರೆ.
ಯಶ್ ಜಮೀನ್ ಗೆ ರಸ್ತೆ ನಿರ್ಮಿಸದಂತೆ ಗ್ರಾಮಸ್ಥರು ಗಲಾಟೆ ಮಾಡಿದ್ದಾರೆ. ವೀಡಿಯೋದಲ್ಲಿ ಯಶ್ ತಾಯಿ ಸಮಾಧಾನ ಮಾಡುವಂತ ನಿಟ್ಟಿನಲ್ಲಿ ಪ್ರಯತ್ನ ಮಾಡಿರುವುದ ಕಂಡುಬಂದಿದೆ. ತಂದೆ-ತಾಯಿಗೆ ಅವಾಚ್ಯ ಶಬ್ದಗಳಿಂದ ಮಾತನಾಡಿದವರು ಯಾರು? ಎನ್ನುವ ಬಗ್ಗೆ ವಿಚಾರಿಸಿದ ರಾಮಾಚಾರಿ ಖುದ್ದಾಗಿ ಬಂದ ಮಾಹಿತಿ ಪಡೆದಿದ್ದಾರೆ. ಜೊತೆಗೆ ಅವರಿಗೆ ಬುದ್ಧಿ ಹೇಳಿ ಎಂದು ತಿಳಿಸಿದ್ದಾರೆ.
ನಟ ಯಶ್ ತಿಮ್ಲಾಪುರ ಗ್ರಾಮದಲ್ಲಿ ತೋಟ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಯಶ್ ” ನಾನು ಜನರಿಗೆ ಅನುಕೂಲ ಆಗಲು ನಾನು ಫಾರ್ಮ್ ಮಾಡುತ್ತಿದ್ದೇನೆ. ಆದರೆ ಇದಕ್ಕೆ ಗ್ರಾಮಸ್ಥರು ತೊಂದರೆ ಕೊಡುತ್ತಿದ್ದಾರೆಂದು” ಆರೋಪಿಸಿದ್ಧಾರೆ.
ಆದರೆ ಗ್ರಾಮಸ್ಥರ ಪ್ರಕಾರ, ‘ಯಶ್ ಫಾರ್ಮ್ ಹೌಸ್ ಗೆ ಈಗಾಗಲೇ ರಸ್ತೆ ನಿರ್ಮಾಣ ಮಾಡಲಾಗಿದೆ. ಆದರೂ ಮತ್ತೊಂದು ರಸ್ತೆ ಮಾಡಲಾಗುತ್ತಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.