14ನೇ ವಯಸ್ಸಿಗೆ ಶಾಲೆ ತೊರೆವ ಮಕ್ಕಳಿಗೂ ಕೌಶಲ್ಯ ತರಬೇತಿ ಅಗತ್ಯ- ಕೆ. ರತ್ನಪ್ರಭಾ

14ನೇ ವಯಸ್ಸಿಗೂ ಮೊದಲೇ ಶಾಲೆ ತೊರೆಯುವ ಮಕ್ಕಳಿಗೆ ಆ ವಯಸ್ಸಿನಲ್ಲೇ ಕೌಶಲ್ಯ ತರಬೇತಿ ನೀಡುವ ಅಗತ್ಯವಿದೆ ಎಂದು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ, ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಕೆ. ರತ್ನಪ್ರಭಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಕೌಶಲ್ಯ ತರಬೇತಿ ಪ್ರಾಧಿಕಾರವು ವಿವಿಧ ವಲಯಗಳ ಕೌಶಲ್ಯ ಕೌನ್ಸಿಲ್‌ನೊಂದಿಗೆ “ಕೌಶಲ್ಯ ತರಬೇತಿ ಇರುವ ಅವಕಾಶಗಳ” ಕುರಿತು ಮಂಗಳವಾರ ಅಶೋಕ ಹೋಟೆಲ್‌ನಲ್ಲಿ ಆಯೋಜಿಸಿದ್ದ “ವಿಚಾರ ಗೋಷ್ಠಿ” ಹಾಗೂ ಸಂವಾದದಲ್ಲಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಹಲವು ಕಾರಣದಿಂದ ಮಕ್ಕಳು 10 ನೇ ತರಗತಿಗೆ ಓದು ನಿಲ್ಲಿಸುತ್ತಾರೆ. ಆ ಸಂದರ್ಭದಲ್ಲಿ ಮಕ್ಕಳ ವಯಸ್ಸು 14 ವರ್ಷ ಒಳಗಿರುವುದರಿಂದ ಕೌಶಲ್ಯ ತರಬೇತಿ‌ ನೀಡಬೇಕೇ , ಬೇಡವೇ ಎಂಬುದು ಈಗಲೂ ಚರ್ಚಾ ವಿಷಯವೇ ಆಗಿದೆ. ಆದರೆ, ಆ ಸಂದರ್ಭದಲ್ಲೇ ಅಂಥ ಮಕ್ಕಳನ್ನು ಗುರುತಿಸಿ ಕೌಶಲ್ಯ ತರಬೇತಿ ನೀಡಿದರೆ ಪರಿಣಾಮಕಾರಿಯಾಗಿ‌ ಮಕ್ಕಳ ಭವಿಷ್ಯ ರೂಪಿಸಲು ನೆರವಾಗಲಿದೆ. 18 ವರ್ಷ ತುಂಬುವವರೆಗೂ ಅವರಿಗೆ ಪೂರ್ಣಾವಧಿ ಕೆಲಸಕ್ಕೆ‌ ನೇಮಿಸುವ ಬದಲು, ಅಲ್ಪಾವಧಿ ಕೆಲಸ ಮಾಡಿಸುವುದರಿಂದ ಅವರ ವಯಸ್ಸಿನ ಮೇಲೆ ಯಾವುದೇ ಒತ್ತಡ ಬೀರಿದಂತಾಗುವುದಿಲ್ಲ. ಅಲ್ಲದೆ, ಅವರು ಪ್ರೌಢಾವಸ್ಥೆಗೆ ಬರುವುದರೊಳಗೆ ಆ ಮಕ್ಕಳ ಅನುಭವದ ಜೊತೆಗೆ ಕೌಶಲ್ಯವನ್ನೂ ಮೈಗೂಡಿಸಿಕೊಳ್ಳಲಿದ್ದಾರೆ ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾಗಳು‌ ಕೌಶಲ್ಯ ತರಬೇತಿಯಂಥ ಹಲವು ಕಾರ್ಯಕ್ರಮಗಳನ್ನು ಉಚಿತವಾಗಿ ಆಯೋಜಿಸುತ್ತಿದೆ. ತರಬೇತಿ ನೀಡುವ ಕೆಲಸವೂ ನಡೆಯುತ್ತಿವೆ. ಆದರೂ, ಕೈಗಾರಿಕಾ ಸಂಸ್ಥೆಗಳು ಕೌಶಲ್ಯ ಹೊಂದಿರುವ ಯುವಕರು ಸಿಗುತ್ತಿಲ್ಲವೆಂದು ಅಳಲು ತೋಡಿಕೊಳ್ಳುತ್ತಾವೆ. ಇತ್ತ ಯುವಕರೂ ಸಹ ಕೌಶಲ್ಯದಂತಹ ತರಬೇತಿ ನೀಡಿದರೆ ಪಡೆಯಲು ಸಿದ್ಧವೆಂದು ಹೇಳುತ್ತಾರೆ. ಇಷ್ಡೆದ್ದರೂ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಹಾಗಿದ್ದರೆ ಕೈಗಾರಿಕೆಗಳು ಹಾಗೂ ಯುವಕರ ಮಧ್ಯೆ ಅಂತರ ಉಂಟಾಗಲು ಕಾರಣ ವೇನು ಎಂಬುದು ತಿಳಿಯುತ್ತಿಲ್ಲ.


ಅದಕ್ಕಾಗಿಯೇ ಈಗಿರುವ ಕೌಶಲ್ಯ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ಅಪ್‌ಡೇಟ್ ಮಾಡಲು ಯೋಜಿಸಿದ್ದೇವೆ ಎಂದು ಹೇಳಿದರು.

ಮತ್ತೊಂದೆಡೆ ಸಂಬಂಧಪಟ್ಟ ಕೈಗಾರಿಕೆಗಳೇ ಯುವಕರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಿದ್ದು, ಇದಕ್ಕೆ ಬೇಕಾದ ಸಹಕಾರ ಸರ್ಕಾರ ನೀಡಲಿದೆ ಎಂದು ಹೇಳಿದರು.

ಕೆಎಸ್‌ಡಿಎ-ಎಸ್‌ಡಿಇಎಲ್ ಎಸ್. ಜೆ. ಸಲಹೆಗಾರಾರಾದ ಅಮಲನ್ ಮಾತನಾಡಿ, ಕೆಎಸ್‌ಡಿಎ ಉದ್ದೇಶ ಹಾಗೂ ತರಬೇತಿಯ ಇತರೆ ರೂಪುರೇಷೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು.

ಐಆರ್‌ಎಎಸ್,ಕೆಎಸ್‌ಡಿಸಿ ಎಂಡಿ, ಅಶ್ವಿನ್ ಗೌಡ , ಸಿಐಟಿಇ ಆಯುಕ್ತ ಡಾ.ಕೆ. ಹರೀಶ್ ಕುಮಾರ್, ಸರ್ಕಾರದ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್ ಇತರರು ಉಪಸ್ಥಿತರಿದ್ದರು.

ಸಂವಾದ ಹಾಗೂ ವಿಚಾರ ಗೋಷ್ಠಿಯಲ್ಲಿ 17ಕ್ಕೂ ಹೆಚ್ಚು ಸೆಕ್ಟರ್ ಸ್ಕಿಲ್‌ ಕೌನ್ಸಿಲ್‌ ಸದಸ್ಯರು ಭಾಗವಹಿಸಿ ಯಾವ ಕ್ಷೇತ್ರದಲ್ಲಿ ಕೌಶಲ್ಯ ತರಬೇತಿ ಅವಶ್ಯತೆ ಇದೆ ಎಂಬುದರ ಬಗ್ಗೆ ತಮ್ಮ ಅಭಿಪ್ರಾಯ ಹಾಗೂ ಸಲಹೆ ಹಂಚಿಕೊಂಡರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights