Bigg Boss : ಲ್ಯಾಗ್ ಮಂಜು ತುಲಾಭಾರದಿಂದ ದೂರ ಸರಿದ ದಿವ್ಯ ಸುರೇಶ್…!
ಬಿಗ್ ಬಾಸ್ ಮನೆಯಲ್ಲಿ ಲ್ಯಾಗ್ ಮಂಜ ಅಂದರೆ ಬಹುತೇಕ ಸ್ಪರ್ಧಿಗಳಿಗೆ ತುಂಬಾನೇ ಇಷ್ಟ. ಹೀಗಂತ ಮನೆಯ ಸ್ಪರ್ಧಿಗಳೇ ಹೇಳಿಕೊಂಡಿದ್ದಾರೆ. ಹೀಗಾಗಿ ನಿರೂಪಕ ಸುದೀಪ್ ಸ್ಪರ್ಧಿಗಳಿಗೆ ಒಂದು ಟಾಸ್ಕ್ ಕೊಡುತ್ತಾರೆ. ಅದುವೇ ತುಲಾಭಾರ.
ಹೌದು… ಮನೆಯ ಸದಸ್ಯರು ಮಂಜನ ತುಲಾಭಾರ ಮಾಡಬೇಕು. ಮಂಜ ಮನೆಯ ನೆಚ್ಚಿನ ವ್ಯಕ್ತಿಯಾಗಿದ್ದರೆ, ಆತನ ಸರಿ ಸಮ ತೂಕ ಬರುವಹಾಗೆ ಮನೆಯ ಎಲ್ಲಾ ಸದಸ್ಯರು ತಮಗೆ ಇಷ್ಟವಾದ ವಸ್ತುಗಳನ್ನು ತಕ್ಕಡಿಯಲ್ಲಿ ಹಾಕಬೇಕು. ಮಂಜನ ಸರಿಸಮವಾಗಿ ತಕ್ಕಡಿ ತೂಕ ಬರಬೇಕು. ಹಾಗೊಂದು ವೇಳೆ ಬಂದರೆ, ತಕ್ಕಡಿಯಲ್ಲಿ ಮನೆಯ ಸದಸ್ಯರು ಹಾಕಿದ ವಸ್ತುಗಳನ್ನು ಬಿಗ್ ಬಾಸ್ ಮತ್ತೆ ವಾಪಸ್ ಕೊಡುವುದಿಲ್ಲ. ಇದು ಗೊತ್ತಿದ್ದರು ದಿವ್ಯ ಸುರೇಶ್ ಹೊರತುಪಡಿಸಿ ಮನೆಯ ಎಲ್ಲಾ ಸದಸ್ಯರು ತಮಗೆ ಇಷ್ಟವಾದ ಒಂದೊಂದು ವಸ್ತುಗಳನ್ನು ಹಾಕಿದರು.
ಇಲ್ಲೊಂದು ಆಶ್ಚರ್ಯಕರ ಸಂಗತಿ ಅಂದರೆ ಮಂಜ ನನ್ನ ನೆಚ್ಚಿನ ವ್ಯಕ್ತಿ ಎಂದು ದಿನಬೆಳಗಾದರೆ ಜೊತೆಗೇ ಸುತ್ತಾಡುತ್ತಿದ್ದ ದಿವ್ಯ ತಕ್ಕಡಿಯಲ್ಲಿ ಯಾವ ವಸ್ತುವನ್ನು ಹಾಕಲಿಲ್ಲ. ಕಾರಣ ಕೇಳಿದ್ರೆ ಮತ್ತಷ್ಟು ಆಶ್ಚರ್ಯವಾಗುತ್ತದೆ. ಮಂಜ ಅಂದ್ರೆ ನನಗೆ ಇಷ್ಟ ಎಂದು ಹೇಳುತ್ತಿದ್ದ ದಿವ್ಯ ಸುರೇಶ್ ತನಗೆ ಇಷ್ಟವಾದ ಒಂದು ವಸ್ತುವನ್ನೂ ತಕ್ಕಡಿಯಲ್ಲಿ ಹಾಕಲಿಲ್ಲ.
ಸುದೀಪ್ ಅವರು ಕಾರಣ ಕೇಳಿದ್ದಕ್ಕೆ ದಿವ್ಯ ಹೀಳಿದ್ದು ಹೀಗೆ, ” ನನಗೆ ಈಗ ಮಂಜ ಇಷ್ಟ. ಹಾಗಂತ ನಾನು ಈ ಮೊದಲೇ ಇಷ್ಟ ಪಡುವ ವಸ್ತುಗಳನ್ನು ಕಳೆದುಕೊಳ್ಳಲು ಇಷ್ಟ ಪಡುವುಲ್ಲ. ಆದರೆ ಶಮಂತ್ ಅಂದ್ರೆ ನನಗೆ ಇಷ್ಟವಿಲ್ಲ. ಅವರನ್ನು ಬೇಕಾದರೆ ತಕ್ಕಡಿಯಲ್ಲಿ ಹಾಕಲು ಸಿದ್ಧ” ಎಂದು ಹೇಳಿದರು. ಇದಕ್ಕೆ ಮನೆಯ ಸದಸ್ಯರು ಒಪ್ಪಲೇ ಇಲ್ಲ. ಶಮಂತನನ್ನು ತಕ್ಕಡಿಯಲ್ಲಿ ಹಾಕಬೇಕು ಎನ್ನುವ ನಿರ್ಧಾರ ಕೇವಲ ದಿವ್ಯರವರದ್ದು ಮಾತ್ರವಾಗಿತ್ತು. ಹೀಗಾಗಿ ಅದಾಗಲಿಲ್ಲ. ಹೀಗಾಗಿ ದಿವ್ಯ ಅವರ ಈ ನಿರ್ಧಾರ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ.
ಒಟ್ಟಿನಲ್ಲಿ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳಲ್ಲಿ ಕಾಂಪಿಟೇಷನ್ ಬೂದಿ ಮುಚ್ಚಿದ ಕೆಂಡಂದಂತಿದೆ. ಒಳಗೆ ದ್ವೇಷವಿದ್ದರು ಕೆಲವರು ತೋರಿಸಿಕೊಳ್ಳುತ್ತಿಲ್ಲ. ಕೆಲವರು ಮನಸ್ಸಿನಲ್ಲಿ ಹೇಗಿರುತ್ತಾರೋ ಹಾಗೇ ಇರುತ್ತಾರೆ. ಹೀಗೆ ಯಾರನ್ನೂ ಕೂಡ ಅರ್ಥ ಮಾಡಿಕೊಳ್ಳದ ಸ್ಥಿತಿ ಬಿಗ್ ಬಾಸ್ ನಲ್ಲಿದೆ. ನಿನ್ನೆಯ ಬೆಳವಣಿಗೆ ನೋಡಿದರೆ ಎಲ್ಲೋ ಒಂದು ಕಡೆ ಲ್ಯಾಗ್ ಮಂಜ ದಿವ್ಯಾಳ ಮೋಡಿಗೆ ಬೀಳ್ತಾರಾ? ಅಥವಾ ದಿವ್ಯ ಮಂಜನನ್ನು ಮೋಡಿ ಮಾಡಿ ಗೆಲ್ಲುವ ಆಸೆ ಹೊಂದಿದ್ದಾರಾ? ಅನ್ನೋ ಪ್ರಶ್ನೆ ಮೂಡದಿರದು.