‘ಅಂಥ ಸರ್ಕಾವನ್ನೇ ಬೀಳಿಸಿದ ನನಗೆ ಸಿಡಿ ಲೇಡಿ ದೂರು ಯಾವ ಲೆಕ್ಕ’ – ರಮೇಶ್ ಜಾರಕಿಹೊಳಿ
‘ಸಿಡಿ ಲೇಡಿ ಗ್ಯಾಂಗ್ ದು ದೂರು ನೀಡುವುದು ಕೊನೆಯ ಅಸ್ತ್ರವಾಗಿತ್ತು. ಈ ಅಸ್ತ್ರದಿಂದ ಅವರದು ಎಲ್ಲಾ ಆಟ ಮುಗಿದಿದೆ. ಈಗ ನಮ್ಮ ಆಟ ಶುರುವಾಗುತ್ತದೆ’ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ದೂರನ್ನು ವಕೀಲ ಜಗದೀಶ್ ಮೂಲಕ ನೀಡಿದ್ದಾಳೆ. ಇದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ” ಮಹಾನಾಯಕ ಯಾರು ಅಂತ ಮುಖ್ಯ ಮಂತ್ರಿ, ಗೃಹಸಚಿವರಿಗೆ ನೇರವಾಗಿ ಹೇಳಿದ್ದೇನೆ. ಸಿಡಿ ಗ್ಯಾಂಗ್ ನ ಕೊನೆ ಅಸ್ತ್ರ ಮುಗಿಯಿತು. ನಾಳೆಯಿಂದ ನಮ್ಮ ಆಟ ಶುರುವಾಗುತ್ತದೆ. ಹೀಗಾಗಿ ನಾವು ಕೂಡ ಎಲ್ಲಾ ರೆಡಿ ಇಟ್ಟಿದ್ದೇವೆ. ನಾನು ದುಡ್ಡು ತೆಗೆದುಕೊಂಡು ಮೈ ತೋರಿಸುವಂತವನು ಅಲ್ಲ. ನಾನು ನಿರಪರಾಧಿ. ಹೋರಾಟಗಾರ. ನೀವು ನನ್ನ ಪರವಾಗಿ ಮಾತನಾಡಬೇಕು. ನಾನು ಕಾನೂನು ಹೋರಾಟ ಮಾಡುತ್ತೇನೆ ” ಎಂದು ಹೇಳಿದ್ದಾರೆ.
ಜೊತೆಗೆ ” ಇವೆಲ್ಲವೂ ನನಗೆ ಮೊದಲೇ ಗೊತ್ತಿತ್ತು. ಮೊದಲು ನಾನು ಕೊಟ್ಟ ಎಫ್ಐಆರ್ ತನಿಖೆಯಾಗಬೇಕು. ಆಕೆ ಮನೆಯಲ್ಲಿ ಲಕ್ಷಾಂತರ ರೂಪಾಯಿ ಎಲ್ಲಿಂದ ಬಂತು ಎಲ್ಲಾ ತನಿಖೆಯಾಗಬೇಕು. ನಂತರ ಅವರ ದೂರು ತನಿಖೆಯಾಗಲಿ. ಅಂಥ ಸರ್ಕಾರ ಬೀಳಿಸಿದ್ದೇನೆ ಇದ್ಯಾವ ಲೆಕ್ಕ. ನಾನು ಕಾನೂನು ಹೋರಾಟ ಶುರು ಮಾಡುತ್ತೇನೆ. ನಾನು ಯಾವುದಕ್ಕೂ ಹೆದರುವ ವ್ಯಕ್ತಿ ಅಲ್ಲ ” ಎಂದು ನೇರವಾಗಿ ಕಿಡಿ ಕಾರಿದ್ದಾರೆ.