ಸಿಡಿ ಯುವತಿ ನೀಡಿದ ದೂರು ಕಬ್ಬನ್ ಪಾರ್ಕ್ ಠಾಣೆಗೆ ರವಾನೆ! : ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್!
ಸಿಡಿ ಲೇಡಿ ಕಳುಹಿಸಿದ ದೂರಿನ ಆಧಾರದ ಮೇಲೆ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇಂದು ಸಿಡಿ ಲೇಡಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸಲು ವಕೀಲ ಜಗದೀಶ್ ಅವರಿಗೆ ದೂರಿನ ಪ್ರತಿಯನ್ನು ರವಾನೆ ಮಾಡಿದ್ದಾಳೆ. ವಕೀಲ ಜಗದೀಶ್ ಯುವತಿಯ ದೂರಿನ ಪ್ರತಿಯನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರ ಬಳಿಗೆ ಕೊಂಡಯ್ದಿದ್ದು, ಆಯುಕ್ತರು ಈ ದೂರನ್ನು ಕಬ್ಬನ್ ಪಾರ್ಕ್ ಠಾಣೆಯಲ್ಲಿ ನೀಡುವಂತೆ ಸೂಚಿಸಿದ್ದಾರೆ. ಸೂಚನೆಯಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಮೇಶ್ ವಿರುದ್ಧ ಎಫೈಆರ್ ದಾಖಲಾಗಿದೆ.
ಹೌದು… ಇಂದು ಸಿಡಿ ಲೇಡಿ 3ನೇ ವಿಡಿಯೋ ರಿಲೀಸ್ ಮಾಡಿದ್ದು ತಾನು ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಳು. ಜೊತೆಗೆ ಈ ದೂರನ್ನು ತಮ್ಮ ವಕೀಲರಾದ ಜಗದೀಶ್ ಅವರು ಠಾಣೆಗೆ ತಲುಪಿಸುತ್ತಾರೆ ಎಂದು ಹೇಳಿದ್ದಳು.
ಯುವತಿ ಹೇಳಿದಂತೆ ವಕೀಲ ಜಗದೀಶ್ ಮಧ್ಯಾಹ್ನ 2 ಗಂಟೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರಿನ ಪ್ರತಿಯನ್ನು ನೀಡಿದ್ದು, ಆಯುಕ್ತರು ಈ ದೂರನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತಲುಪಿಸುವಂತೆ ಸೂಚಿಸಿದ್ದರು.
ಆಯುಕ್ತರ ಸೂಚನೆಯಂತೆ ಜಗದೀಶ್ ತಂಡ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರಿನ ಪ್ರತಿ ನೀಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ಯುವತಿ ದೂರಿನ ಆಧಾರದ ಮೇಲೆ ಕೇಸ್ ದಾಖಲಾಗಿದೆ.