ಒಪ್ಪಂದದಿಂದಾಗಿ ಮನೆಯ ಸದಸ್ಯರ ಕೆಂಗಣ್ಣಿಗೆ ಗುರಿಯಾದ ದಿವ್ಯ ಸುರೇಶ್, ನಿಧಿ, ಮಂಜು!

ಬಿಗ್ ಬಾಸ್ ಮನೆಯಲ್ಲಿ ಒಪಂದದ ಮೂಲಕ ಕ್ಯಾಪ್ಟನ್ ಟಾಸ್ಕ್ ಗೆ ವಿನ್ ಆದ ನಿಧಿ ಹಾಗೂ ದಿವ್ಯ ಸುರೇಶ್ ಮನೆಯ ಎಲ್ಲಾ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹೌದು.. ಬಿಗ್ ಬಾಸ್ ಮನೆಯಲ್ಲಿ ಕೆಲವರು ತಮ್ಮ ಬುದ್ಧಿ ಹಾಗೂ ಶಕ್ತಿ ಪ್ರದರ್ಶನದ ಮೂಲಕ ನಿಯತ್ತಾಗಿ ಆಟವಾಡಿ ಗೆಲ್ಲುತ್ತಾರೆ. ಇನ್ನೂ ಕೆಲವರು ಕೆಲವು ಸ್ಟಾಟರ್ಜಿ ಗಳನ್ನು ಬಳಕೆ ಮಾಡಿ ಆಟವಾಡಿ ಗೆಲ್ಲುತ್ತಾರೆ. ಇದಕ್ಕೆ ಸಾಕ್ಷಿಯಾದವರು ನಿಧಿ ಹಾಗೂ ದಿವ್ಯ ಸುರೇಶ್.

ಇವರ ಒಪ್ಪಂದದ ಬಗ್ಗೆ ಮನೆಯ ಎಲ್ಲಾ ಸದಸ್ಯರಿಗೆ ಗೊತ್ತಾಗುತ್ತಿದ್ದಂತೆ ಬೇಸರಗೊಂಡಿದ್ದಾರೆ. ಮಾತ್ರವಲ್ಲ ದಿವ್ಯ ಸುರೇಶ್ ಜೊತೆಗೆ ಸಾತ್ ನೀಡಿದ ಮಂಜು ಪಾವಗಡ ಮೇಲೂ ಮನೆಯ ಸದಸ್ಯರ ಬೇಸರಗೊಂಡಿದ್ದಾರೆ. ಒಪ್ಪಂದದ ಮೂಲಕ ಆಟವಾಡಿ ದಿವ್ಯ, ನಿಧಿ ಹಾಗೂ ಮಂಜು ಮನೆಯ ಎಲ್ಲಾ ಸದಸ್ಯರ ನಂಬಿಕೆ ಕಳೆದುಕೊಂಡಿದ್ದಾರೆ.

ಒಪ್ಪಂದವೇನು?

ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಹುಡುಗರು ಹಾಗೂ ಹುಡುಗಿಯರನ್ನು ಹಾಸ್ಟಲ್ ಮಾಡುವ ಮೂಲಕ ವರ್ಗಾಯಿಸಲಾಗಿದೆ. ಇದರಲ್ಲಿ ‘ಬಿಗ್ ಬಾಸ್ ಬಾಯ್ಸ್ ಹಾಸ್ಟಲ್’ ಹುಡುಗರು ಹಾಗೂ ‘ಬಿಗ್ ಬಾಸ್ ಗರ್ಲ್ಸ್ ಹಾಸ್ಟಲ್’ ಹುಡುಗಿಯರಿಗೆ ಬಿಗ್ ಬಾಸ್ ಆಟವೊಂದನ್ನ ನೀಡಿದ್ದರು. ಈ ಆಟದಲ್ಲಿ ಬಿಗ್ ಬಾಸ್ ಬಾಯ್ಸ್ ಹಾಸ್ಟಲ್ ನ ಹುಡುಗರು ಗರ್ಲ್ಸ್ ಹಾಸ್ಟಲ್ ಹುಡುಗಿಯರಿಗೆ ಪ್ರೇಮ ಪತ್ರಗಳನ್ನು ಬರೆಯಬೇಕು. ಯಾರು ಹೆಚ್ಚು ಪತ್ರಗಳನ್ನು ಅರ್ಥಪೂರ್ಣವಾಗಿ ಬರೆಯುತ್ತಾರೋ ಜೊತೆಗೆ ಯಾರು ಅತೀ ಹೆಚ್ಚು ಪತ್ರಗಳನ್ನು ಪಡೆದುಕೊಳ್ಳುತ್ತಾರೋ ಮತ್ತು ಯಾವ ವಾರ್ಡನ್ ಅತೀ ಹೆಚ್ಚು ಪತ್ರಗಳನ್ನು ಪತ್ತೆ ಹಚ್ಚಿ ಸಂಗ್ರಹಿಸುತ್ತಾರೋ ಅವರು ಕ್ಯಾಪ್ಟನ್ ಟಾಸ್ಕ್ ಗೆ ಆಯ್ಕೆಯಾಗುತ್ತಾರೆ.

ವಾರ್ಡನ್ ಗಳಾದ ಪ್ರಶಾಂತ್ ಹಾಗೂ ನಿಧಿ ಹಾಸ್ಟಲ್ ಹುಡುಗಿಯರು ಮತ್ತು ಹುಡುಗರು ಬಚ್ಚಿಟ್ಟ ಪತ್ರಗಳನ್ನು ಹುಡುಕಿ ಸಂಗ್ರಹಿಸಬೇಕು. ಹೀಗಾಗಿ ವಾರ್ಡನ್ ಗಳಿಗೆ ಗೊತ್ತಿಲ್ಲದಂತೆ ಮನೆಯ ಸ್ಪರ್ಧಿಗಳು ಪತ್ರಗಳನ್ನು ಬಚ್ಚಿಡುತ್ತಿದ್ದರು.

ಈ ವೇಳೆ ವಾರ್ಡನ್ ನಿಧಿ ದಿವ್ಯಳೊಂದಿಗೆ ಒಪ್ಪಂದವೊಂದನ್ನು ಮಾಡಿಕೊಳ್ಳುತ್ತಾರೆ. ಒಪ್ಪಂದದಂತೆ ಮನೆಯ ಸದಸ್ಯರು ಬಚ್ಚಿಟ್ಟ ಪ್ರೇಮ ಪತ್ರಗಳ ಬಗ್ಗೆ ನಿಧಿ ಸುಬ್ಬಯ್ಯ ಅವರಿಗೆ ಮಾಹಿತಿ ನೀಡಿದರೆ, ದಿವ್ಯ ಸುರೇಶ್ ಪತ್ರಗಳನ್ನು ವಾರ್ಡನ್ ನಿಧಿ ವಶಪಡಿಸಿಕೊಳ್ಳುವುದಿಲ್ಲ. ಒಪ್ಪಂದದಂತೆ ಆಟ ನಡೆದು ಕ್ಯಾಪ್ಟನ್ ಟಾಸ್ಕ್ ಗೆ ಅರವಿಂದ್, ನಿಧಿ ಹಾಗೂ ದಿವ್ಯ ಆಯ್ಕೆ ಆದರು.

ಆದರೆ ಕ್ಯಾಪ್ಟನ್ ಟಾಸ್ಕ್ ನಲ್ಲಿ ಒಪ್ಪಂದ ಮಾಡಿಕೊಮಡಿದ್ದ ನಿಧಿ ಆಗಲಿ ದಿವ್ಯ ಆಗಲಿ ವಿನ್ ಆಗಲಿಲ್ಲ. ಬದಲಿಗೆ ಅರವಿಂದ್ ಆಯ್ಕೆ ಆದರು.

ಒಪ್ಪಂದ ಮನೆಯ ಇನ್ನೂಳಿದ ಸದಸ್ಯರಿಗೆ ಗೊತ್ತಾಗಿದ್ದು ಹೇಗೆ?

ಇಂದು ಮನೆಯ ಸದಸ್ಯರಿಗೆ ಬಿಗ್ ಬಾಸ್ ಪ್ರೇಕ್ಷರಿಂದ ಕರೆ ಬಂದಿತ್ತು. ಈ ವೇಳೆ ದಿವ್ಯ ಸುರೇಶ್ ನಿಧಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಬಗ್ಗೆ ಮನೆಯ ಎಲ್ಲಾ ಸದಸ್ಯರಿಗೂ ಗೊತ್ತಾಗಿದೆ.

ಇದನ್ನು ಅಲ್ಲಗಳಿದ ಬಿಗ್ ಬಾಸ್ ಮನೆಯ ಇನ್ನುಳಿದ ಸದಸ್ಯರು ದಿವ್ಯಾ, ಮಂಜು ಹಾಗೂ ನಿಧಿ ಮೇಲೆ ಕೊಂಚ ಬೇಸರ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಮಾತು ಕೂಡ ಅಷ್ಟಾಗಿ ಆಡುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ನಿಧಿ, ದಿವ್ಯ ಸುರೇಶ್ ಹಾಗೂ ಮಂಜು ಮಾಡಿದ ಗೇಮ್ ಪ್ಲಾನ್ ಮನೆಯ ಇನ್ನೂಳಿದ ಸದಸ್ಯರು ಮಾಡಿ ಆಟ ಆಡ್ತಾರಾ..? ಅಥವಾ ಈ ಮೂವರಿಂದ ಕೊಂಚ ಕೇರ್ ಫುಲ್ಲಾಗಿರುತ್ತಾರಾ? ಕಾದು ನೋಡಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights