‘ಅಸುರಾನ್’ ಖ್ಯಾತಿಯ ತಮಿಳು ನಟ ನಿತೀಶ್ ವೀರಾ ಕೊರೊನಾದಿಂದಾಗಿ ನಿಧನ!
‘ಅಸುರಾನ್’ ಖ್ಯಾತಿಯ ಯುವ ತಮಿಳು ನಟ ಕೊರೊನಾಗೆ ಬಲಿಯಾಗಿದ್ದಾರೆ. ಕೊರೊನಾವೈರಸ್ ತಮಿಳು ಚಿತ್ರರಂಗದಲ್ಲೂ ಸಾಕಷ್ಟು ಜನರಿಗೆ ತಗುಲಿದೆ. ತಮಿಳು ಯುವ ನಟ ನಿತೀಶ್ ವೀರಾ ಮಾರಣಾಂತಿಕ ವೈರಸ್ಗೆ ಬಲಿಯಾಗಿದ್ದಾರೆ. ಯುವ ನಟ ಕೊರೊನಾವೈರಸ್ಗೆ ಧನಾತ್ಮಕ ಪರೀಕ್ಷೆ ಮಾಡಿದ ನಂತರ ನಿಧನರಾಗಿದ್ದಾರೆ.
ನಿತೀಶ್ ಗೆ ಕೇವಲ 45 ವರ್ಷ ವಯಸ್ಸು. ಅವರ ಅಕಾಲಿಕ ಮರಣವು ತಮಿಳು ಚಲನಚಿತ್ರೋದ್ಯಮವನ್ನು ಆಘಾತಕ್ಕೆ ದೂಡಿದೆ. ಯುವ ಪ್ರತಿಭೆ ಅಗಲಿಕೆಗೆ ತಮಿಳು ಚಲನಚಿತ್ರರಂಗವೇ ಕಂಬನಿ ಮಿಡಿದು ಸಾಮಾಜಿಕ ಮಾಧ್ಯಮಗಳ ಮೂಲಕ ಕುಟುಂಬಕ್ಕೆ ತಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸಿದೆ.
ನಟ ವಿಷ್ಣು ವಿಶಾಲ್ ಅವರು ನಿತೀಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ನಟ ಕೃಷ್ಣ ಅವರು ಟ್ವೀಟ್ ಮಾಡಿದ್ದಾರೆ.
ತಮಿಳು ಚಲನಚಿತ್ರ ನಿರ್ಮಾಪಕ ಕಾರ್ತಿಕ್ ಸುಬ್ಬರಾಜ್ ಕೂಡ ನಿತೀಶ್ ವೀರಾರನ್ನು ಕಳೆದುಕೊಂಡಿದ್ದಕ್ಕಾಗಿ ತಮ್ಮ ದುಃಖ ಮತ್ತು ನೋವನ್ನು ವ್ಯಕ್ತಪಡಿಸಿದ್ದಾರೆ.
ನಿತೀಶ್ ವೀರಾ ವೆನ್ನಿಲಾ ಕಬಾಡಿ ಕುಝು ಮತ್ತು ಪುದುಪೆಟ್ಟೈ ಮುಂತಾದ ಚಲನಚಿತ್ರಗಳಲ್ಲಿನ ಅಭಿನಯದಿಂದ ಪ್ರಸಿದ್ಧರಾಗಿದ್ದರು. ಅವರು ಕಾಲಾ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರೊಂದಿಗೆ ನಟಿಸಿದ್ದಾರೆ. ಇತ್ತೀಚೆಗೆ, ಧನುಷ್ ನಟಿಸಿದ ಅಸುರನ್ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅವರು ಕಾಣಿಸಿಕೊಂಡರು. ಮಾತ್ರವಲ್ಲದೇ ಅವರು ಅತ್ಯುತ್ತಮ ನಟನಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ಧಾರೆ.
ಪ್ರತಿಭಾವಂತ ಯುವ ನಟ ವಿಜಯ್ ಸೇತುಪತಿ ಮತ್ತು ಶ್ರುತಿ ಹಾಸನ್ ನಟಿಸಿ ಎಸ್ಪಿ ಜನನಾಥನ್ ನಿರ್ದೇಶಿದ ಲಾಬಮ್ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅಂತಹ ಪ್ರತಿಭಾವಂತ ನಟನ ನಷ್ಟದೊಂದಿಗೆ, ತಮಿಳು ಚಿತ್ರೋದ್ಯಮ ತೀವ್ರ ಆಘಾತದಲ್ಲಿದೆ.