ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ದೂರು ನೀಡಿದ ಒಂದು ದಿನದ ಬಳಿಕ ಹೇಳಿಕೆ ಬದಲಾಯಿಸಿದ ತಂದೆ!

ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿ ಬಾಲಕಿಯ ತಂದೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆದರೆ, ಇದೀಗ ಆಕೆಯ ತಂದೆ ತನ್ನ ಹೇಳಿಕೆಯನ್ನು ಬದಲಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಲಾ ಥಾನಾದಲ್ಲಿ ಬಾಲಕಿಯ ತಂದೆ ಭಾನುವಾರ ಸಲ್ಲಿಸಿದ ದೂರಿನಲ್ಲಿ, ತನ್ನ ಮಗಳು ಅಪ್ರಾಪ್ತ ಬಾಲಕಿಯ ಮೇಲೆ ಮೂವರು ಅತ್ಯಾಚಾರ ನಡೆಸಿ ಬಾವಿಗೆ ಎಸೆದಿದ್ದಾರೆ ಎಂದು ಹೇಳಿದ್ದರು.

ದೂರಿ ದಾಖಲಾದ ನಂತರ ಆರೋಪಿಗಳನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

“ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯೊಬ್ಬರು ಬಾಲಕಿಯ ತಂದೆಯ ಹೇಳಿಕೆಯನ್ನು ದಾಖಲಿಸಲು ಸೋಮವಾರ ತೆರಳಿದ್ದಾಗ, ತನ್ನ ಮಗಳು ಅಂತಹ ಯಾವುದೇ ಕೃತ್ಯಕ್ಕೆ ಬಲಿಯಾಗಿಲ್ಲ ಎಂದು ಆತ ಹೇಳಿದ್ದಾರೆ” ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಮೃದುಲ್ ಕಚವಾ ಹೇಳಿದ್ದಾರೆ.

ಸಂತ್ರಸ್ತೆ ಸಹ ಅತ್ಯಾಚಾರ ಪ್ರಕರಣವನ್ನು ಹಿಂತೆಗೆದುಕೊಂಡಿದ್ದಾಳೆ. ಆಕೆ ತನ್ನ ಸಹೋದರಿಯೊಂದಿಗಿನ ಜಗಳ ಮಾಡಿಕೊಂಡ ನಂತರ ಅವಳು ಬಾವಿಗೆ ಹಾರಿದಳು ಎಂದು ಆಕೆ ಹೇಳಿದ್ದಾಳೆ. ಹೀಗಾಗಿ ಹೆಚ್ಚಿನ ತನಿಖೆಗಾಗಿ ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Read Also: ಮದುವೆಯಾಗಿ ಕೆಲವೇ ದಿನಗಳಲ್ಲಿ ಹೋಟೆಲ್ನ ಐದನೇ ಮಹಡಿಯಿಂದ ಬಿದ್ದು ಬ್ರೆಜಿಲ್ ಗಾಯಕ ಸಾವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights