ಮಜಾ ನೀಡಿದ ಮಳೆ : ಸಿಲಿಕಾನ್ ಮಂದಿಗೆ 3 ತಿಂಗಳ ಬಳಿಕ ವೀಕೆಂಡ್ ಫ್ರೀ!
ಸಿಲಿಕಾನ್ ಸಿಟಿಯ ಮಂದಿಗೆ ವೀಕೆಂಡ್ ನಲ್ಲಿ ಮಳೆ ಮಜಾ ನೀಡಿದೆ. ಇಂದು ಬೆಳಿಗ್ಗೆಯಿಂದಲೂ ಮೋದ ಕವಿದ ವಾತಾವರಣವಿದ್ದು ನಗರದಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ. ಕೊರೊನಾ ಕಾರಣದಿಂದಾಗಿ 3 ತಿಂಗಳ ಬಳಿಕ ಇಂದು ವೀಕೆಂಡ್ ಫ್ರೀ ಆಗಿದ್ದು ನಗರದ ಪ್ರಮುಖ ಬೀದಿಗಳಲ್ಲಿ ಜನ ಸಮೂಹವೇ ಕಂಡು ಬರುತ್ತಿದೆ.
ಮಳೆಯನ್ನುಊ ಲೆಕ್ಕಿಸಿದೆ ಮಾರುಕಟ್ಟೆಗಳು, ನಗರದ ಪ್ರಮುಖ ಬೀದಿಗಳು, ಹೋಟೆಲ್ ಗಳಲ್ಲಿ ಜನ ಸಂದಣಿ ಕಂಡುಬರುತ್ತಿದೆ. ಮಳೆಯ ನಡುವೆಯೂ ಜನ ಕೆಲಸ ಕಾರ್ಯಗಳನ್ನು ಮುಗಿಸಿ ಮನೆಗೆ ತೆರಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ಚಿಕ್ಕಮಗಳೂರು, ಬೀದರ್ ನಲ್ಲಿ ಭಾರೀ ಮಳೆ :-
ಶುಕ್ರವಾರ ಚಿಕ್ಕಮಗಳೂರು, ಬೀದರ್ ನಲ್ಲಿ ಭಾರೀ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.ಬೀದರ್ ನ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದ್ದು ನಿವಾಸಿಗಳು ಜಾಗರಣೆ ಮಾಡುವಂತಾಗಿತ್ತು. ಇತ್ತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನರಲ್ಲಿ ಸಂತಸದ ಜೊತೆ ಆತಂಕ ಕೂಡ ಹೆಚ್ಚಾಗಿದೆ.
ಕಡಿಮೆ ಮಳೆಯಿಂದಾಗಿ ಬೇಸರಗೊಂಡಿದ್ದ ಜನರ ಮುಖದಲ್ಲಿ ವರುಣ ಮಂದಹಾಸ ಮೂಡಿಸಿದ್ದಾನೆ. ಆದರೆ ಸದ್ಯ ಜಿಲ್ಲೆ ಭಾರೀ ಮಳೆಯಾಗುತ್ತಿದೆ. ದಾರಾಕಾರ ಮಳೆಯಿಂದಾಗಿ ಮನೆಗೆ ನೀರು ನುಗ್ಗಿ ದವಸ ಧಾನ್ಯಗಳು ಹಾಳಾಗಿದ್ದು ಜನ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಹೀಗಾಗಿ ಅಧಿಕಾರಿಗಳ ವಿರುದ್ಧ ಜನ ಹಿಡಿ ಶಾಪ ಹಾಕುತ್ತಿದ್ದಾರೆ.