“ಪರೀಕ್ಷೆ ಬರೆದು, ಫಲಿತಾಂಶ ಬಂದಾಯ್ತು” ಸಿಎಂ ಬದಲಾವಣೆ ಬಗ್ಗೆ ಸಿಪಿ ಯೋಗೇಶ್ವರ್ ಮಾರ್ಮಿಕ ಹೇಳಿಕೆ..!

ರಾಜ್ಯದಲ್ಲಿ ಸಿಎಂ ಬದಲಾವಣೆ ಬಹುತೇಕ ಖಚಿತವಾಗಿದ್ದು ಈ ವಿಚಾರದಲ್ಲಿ ಸಿಪಿವೈ ಮಾರ್ಮಿಕ ಹೇಳಿಕೆಯನ್ನು ಕೊಟ್ಟಿದ್ದಾರೆ.

ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿಪಿ ಯೋಗೇಶ್ವರ್, ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ವಿಚಾರ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಮಾರ್ಮಿಕ ಹೇಳಿಕೆ ನೀಡಿದ್ದಾರೆ.

ನಂದಿಬೆಟ್ಟಕ್ಕೆ ರೋಪ್ ವೇ ಅಳವಡಿಸುವ ಹಿನ್ನೆಲೆ ಸ್ಥಳ ಪರಿಶೀಲನೆಗೆ ಆಗಮಸಿದ್ದ ಸಿಪಿ ಯೋಗೇಶ್ವರ್ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಗಿ ಮಾತನಾಡಿದ್ರು.

ಫಲಿತಾಂಶ ಬಂದಾಯ್ತಲ್ಲ.. ನಾನು ಪರೀಕ್ಷೆಯಲ್ಲಿ ಪಾಸಾಗಿದ್ದೇವೆ ಎಂದು ಹೇಳುವ ಮೂಲಕ ಸಿಎಂ ಸ್ಥಾನ ಬದಲಾವಣೆ ಫಿಕ್ಸ್ ಎಂಬಂತೆ ಪರೋಕ್ಷ ಹೇಳಿಕೆ ನೀಡಿದ್ದಾರೆ.

ಒಂದು ವೇಳೆ ಸಿಎಂ ರಾಜೀನಾಮೆ ಕೊಟ್ಟರೆ ಮುಂದಿನ ಸಿಎಂ ಯಾರು ಎನ್ನುವ ಪ್ರಶ್ನೆ ಹುಟ್ಟಿದೆ. ಇನ್ನೂ ಸಿಎಂ ರೇಸ್ ನಲ್ಲಿ ನಿರಾಣಿ, ಕಾಗೇರಿ, ಸಿಟಿ ರವಿ 3 ಹೆಸರನ್ನು ಅಮಿತ್​ ಶಾ, ನಡ್ಡಾ, ಸಂತೋಷ್​ ಜೀ ಫೈನಲ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಲಿಂಗಾಯತ ಕೋಟಾದಿಂದ ಮುರುಗೇಶ್ ನಿರಾಣಿ ಫ್ರಂಟ್ ರನ್ನರ್ ಆಗಿದ್ದಾರೆ.  ಬ್ರಾಹ್ಮಣ + RSS ಕೋಟಾದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ, ಒಕ್ಕಲಿಗ + RSS ಕೋಟಾದಿಂದ ಸಿಟಿ ರವಿ ಹೆಸರನ್ನ ರೆಫರ್ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights